ಮರದಲ್ಲಿ ನೇತಾಡುವ ಗೊಂಬೆಗಳು 


Team Udayavani, Oct 4, 2018, 6:00 AM IST

v1-island-1-copy.jpg

ದೇವರಿಗೆ ಹರಕೆ ಕಟ್ಟಿ, ಅಶ್ವತ್ಥನ ಮರಕ್ಕೆ ಅರಿಶಿನ ದಾರ ಕಟ್ಟೋದನ್ನು ನೋಡಿರುತ್ತೀರಿ. ಆದರೆ, ಮೆಕ್ಸಿಕೋದ ಈ ದ್ವೀಪದಲ್ಲಿರೋ ಮರಗಳಿಗೆ ಹಳೆಯ ಗೊಂಬೆಗಳನ್ನು ಕಟ್ಟಲಾಗುತ್ತದೆ. ಪ್ರತಿ ಮರದಲ್ಲೂ ನೇತಾಡುತ್ತಿರೋ ಈ ಗೊಂಬೆಗಳು ಮಾತಾಡುತ್ತವೆ ಅಂತ ನಂಬುವವರೂ ಇದ್ದಾರೆ…  

ಸುತ್ತಲೂ ನೀಲಿ ಸಮುದ್ರ, ಹಸಿರು ತುಂಬಿದ ಗಿಡಗಳು, ಸುಂದರ ವಾತಾವರಣ… ದ್ವೀಪ ಎಂದಾಕ್ಷಣ ಕಣ್ಮುಂದೆ ಸುಳಿಯುವ ಚಿತ್ರಣವಿದು. ಅದಕ್ಕೆಂದೇ ದ್ವೀಪ, ಪ್ರಕೃತಿ ಪ್ರಿಯರ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆದರೆ, ಪ್ರವಾಸಿಗರನ್ನು ಬೆಚ್ಚಿಬೀಳಿಸುವಂತ ದ್ವೀಪವೊಂದಿದೆ. ಅದಿರುವುದು ಮೆಕ್ಸಿಕೋದ ಕ್ಯಾನೊನ್‌ ಎಂಬ ಪುಟ್ಟ ಹಳ್ಳಿಯಲ್ಲಿ. ಈ ಪ್ರದೇಶ ಭಯ ಹುಟ್ಟಿಸುವಂತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಮರಗಳಲ್ಲಿ ನೇತಾಡುವ ಗೊಂಬೆಗಳು!

ಗೊಂಬೆಗಳ ಹಿಂದಿನ ಕಥೆ
ಈ ಗೊಂಬೆಗಳ ಹಿಂದೊಂದು ರೋಚಕ ಕಥೆಯಿದೆ. ಜೂಲಿಯನ್‌ ಸಂತಾನ ಬರೆರಾ ಎಂಬುವವರು ಒಮ್ಮೆ ಈ ದ್ವೀಪದಲ್ಲಿ ಸುತ್ತಾಡುತ್ತಿದ್ದರು. ಹೆಣ್ಣುಮಗುವೊಂದು ನೀರಿನಲ್ಲಿ ತೇಲಿಕೊಂಡು ಹೋಗುವುದು ಅವರ ಕಣ್ಣಿಗೆ ಬಿತ್ತು. ಜೊತೆಗೇ ಒಂದು ಗೊಂಬೆಯೂ ತೇಲುತ್ತಿತ್ತು. ಪ್ರಯತ್ನಪಟ್ಟರೂ ಅವರಿಗೆ ಆ ಮಗುವನ್ನು ಕಾಪಾಡಲು ಸಾಧ್ಯವಾಗಲಿಲ್ಲ, ಗೊಂಬೆ ಮಾತ್ರ ಅವರ ಕೈಗೆ ಸಿಕ್ಕಿತು. ಮಗುವನ್ನು ರಕ್ಷಿಸಲಾಗದ ಕೊರಗು ಅವರನ್ನು ಕಾಡಿದಾಗ, ಜೂಲಿಯನ್‌ ಆ ಗೊಂಬೆಯನ್ನು ಮೇಲಕ್ಕೆತ್ತಿ ತಂದು ಮರಕ್ಕೆ ನೇತು ಹಾಕಿದರು. ಮುಂದೆ ಇದೇ ಪರಿಪಾಠವನ್ನು ಸ್ಥಳೀಯರು ಮುಂದುವರಿಸಿಕೊಂಡು ಬಂದರು. ಇಲ್ಲಿರುವ ಗೊಂಬೆಗಳೆಲ್ಲವೂ ಜನರ ಆಪ್ತರ ನೆನಪನ್ನು ತಮ್ಮಲ್ಲೇ ಉಳಿಸಿಕೊಂಡಿವೆ.

ನೀರಿನಲ್ಲಿ ಮುಳುಗಿದ ಜೂಲಿಯನ್‌
ಅವರು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಎಲ್ಲೇ ಹಳೆಯ ಗೊಂಬೆಗಳನ್ನು ಕಂಡರೂ ಅವುಗಳನ್ನು ತಂದು ಈ ದ್ವೀಪದ ಮರಗಳಿಗೆ ನೇತು ಹಾಕುವುದು ಜೂಲಿಯನ್‌ರ ಹವ್ಯಾಸವಾಗಿಬಿಟ್ಟಿತು. ಅವರು ಐವತ್ತು ವರ್ಷಗಳಿಂದ ಸಂಗ್ರಹಿಸಿದ ಗೊಂಬೆಗಳೆಲ್ಲಾ ಈ ಮರಗಳಲ್ಲಿವೆಯಂತೆ. ವಿಚಿತ್ರವೆಂದರೆ, 2001ರಲ್ಲಿ ಜೂಲಿಯನ್‌ ಕೂಡ ಇದೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು. ಅಲ್ಲಿಂದ ಇಲ್ಲಿಯವರೆಗೂ ಇದೊಂದು ಜನಪ್ರಿಯ ಸ್ಥಳವಾಯಿತು. 

ಅಲ್ಲದೆ ಅನೇಕ ಗಾಳಿಸುದ್ದಿಗಳು ಹರಡಿದವು. ಈ ಗೊಂಬೆಗಳೆಲ್ಲ ಮಾತನಾಡುತ್ತವಂತೆ. ನೀರಿನಲ್ಲಿ ಮುಳುಗಿ ಸತ್ತ ಆ ಹುಡುಗಿಯ ಆತ್ಮ, ದ್ವೀಪದಲ್ಲಿ ಸುತ್ತುತ್ತಿದೆ ಎಂದು ನಂಬುವವರೂ ಇದ್ದಾರೆ. ಈಗಲೂ ರಾತ್ರಿ ಸಮಯದಲ್ಲಿ ಈ ಪ್ರದೇಶಕ್ಕೆ ಬರಲು ಜನ ಹೆದರುತ್ತಾರೆ. 

– ಪುರುಷೋತ್ತಮ್‌

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.