ಅಂತರಿಕ್ಷಕ್ಕೂ ಒಬ್ಬ ಕೆಲಸದಾಳು!


Team Udayavani, Oct 17, 2019, 5:50 AM IST

f-4

ಇತ್ತೀಚಿಗೆ ಅಂತರಿಕ್ಷದ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ ಅವನಿಗೆ ಬೋರ್‌ ಆಗಿರಲಿಲ್ಲ. ಅಷ್ಟು ಮಾತ್ರವೇಕೆ, ಹಸಿವು- ಬಾಯಾರಿಕೆಗಳೂ ಆಗಿರಲಿಲ್ಲ.

ರಷ್ಯಾದ ಸೂಯೆಝ್ ಅಂತರಿಕ್ಷ ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಗಗನಯಾತ್ರಿಗಳನ್ನು ಪಿಕಪ್‌ ಮಾಡುವ, ಡ್ರಾಪ್‌ ಮಾಡುವ ಕೆಲಸದಲ್ಲಿ ನಿರತವಾಗಿದೆ. 2011ರ ತನಕ ಅಮೆರಿಕದ ನೌಕೆಯೂ ಸೂಯೆಝ್ಗೆ ಸಾಥ್‌ ನೀಡುತ್ತಿತ್ತು. ಅದು ಕೆಟ್ಟ ನಂತರ ರಷ್ಯಾದ ಗಗನಯಾತ್ರಿಗಳನ್ನು ಮಾತ್ರವಲ್ಲದೆ ಇತರೆ ದೇಶಗಳ ಗಗನಯಾತ್ರಿಗಳೂ ಸೂಯೆಝ್ ನೌಕೆಯ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇತ್ತೀಚಿಗೆ ಇದೇ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ ಅವನಿಗೆ ಬೋರ್‌ ಆಗಿರಲಿಲ್ಲ. ಅಷ್ಟು ಮಾತ್ರವೇಕೆ, ಹಸಿವು- ಬಾಯಾರಿಕೆಗಳೂ ಆಗಿರಲಿಲ್ಲ. ಅವನೆಂಥಾ ಮನುಷ್ಯ ಎಂದು ನಿಮಗನ್ನಿಸಿದ್ದರೆ ನಿಮ್ಮ ಅನುಮಾನ ನಿಜ. ಈ ಪ್ರಯಾಣಿಕ ಮನುಷ್ಯನಲ್ಲ, ಯಂತ್ರ ಮಾನವ. ಆತನ ಹೆಸರು ಫೆಡೋರ್‌.

ಯಂತ್ರಮಾನವನನ್ನು ಸುಮ್ಮನೆಯೇ ಅಂತರಿಕ್ಷಕ್ಕೆ ಕಳಿಸಿಲ್ಲ. ಅಲ್ಲಿ ಫೆಡೋರ್‌ಗೆ ಏನು ಕೆಲಸ ಗೊತ್ತಾ? ಸಹಾಯಕನ ಕೆಲಸ. ಅಂದರೆ ಭೂಮಿಯಿಂದ ಕಳಿಸಲ್ಪಡುವ ಗಗನಯಾತ್ರಿಗಳಿಗೆ ಸಹಾಯ ಮಾಡುವ ಕೆಲಸ. ಏನಾದರೂ ಅವಘಡ ನಡೆದ ಸಂದರ್ಭದಲ್ಲಿ ಗಗನಯಾತ್ರಿಗಳ ಹುಡುಕಾಟ ಕಾರ್ಯಾಚರಣೆ ಮತ್ತು ಅವರು ಸುರಕ್ಷಿತವಾಗಿ ಭೂಮಿಗೆ ಮರಳಲು ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಈ ರೋಬಾಟ್‌ ಮಾಡುತ್ತದೆ. ಕೃತಕ ಬುದ್ದಿಮತ್ತೆಯನ್ನು ಹೊಂದಿರುವ ಈ ರೋಬಾಟ್‌ ಕಾರ್‌ ಡ್ರೈವಿಂಗ್‌ ಮಾಡುತ್ತದೆ, ಮನುಷ್ಯರೊಂದಿಗೆ ಕೊಂಚ ಸಂಭಾಷಣೆಯನ್ನೂ ನಡೆಸುತ್ತದೆ. ಅಷ್ಟೇ ಯಾಕೆ ಹಾಸ್ಯ ಚಟಾಕಿಯನ್ನೂ ಹಾರಿಸಬಲ್ಲುದು.

ಸದ್ಯ, ಯಂತ್ರ ಮಾನವ ಫೆಡೋರ್‌ನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಂತರಿಕ್ಷದಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ವಿಧಿಸಿ ಅದರ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗುತ್ತಿದೆ. ಶೂನ್ಯ ಗುರುತ್ವಾಕರ್ಷಣ ಪ್ರದೇಶದಲ್ಲಿ ಫೆಡೋರ್‌ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂದು ರಷ್ಯಾದ ವಿಜ್ಞಾನಿಗಳ ತಂಡ ಕಾತರದಿಂದ ಫ‌ಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಭವಿಷ್ಯದಲ್ಲಿ ಫೆಡೋರ್‌ನ ನಂತರ ಬರುವ ಆತನ ತಮ್ಮಂದಿರು ಖಂಡಿತವಾಗಿಯೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಲಿವೆ. ಅಂತರಿಕ್ಷ ನೌಕೆಯ ಚಾಲನೆ ಸೇರಿದಂತೆ, ಗಗನಯಾತ್ರಿಗಳಿಗೂ ಕ್ಲಿಷ್ಟಕರವೆನಿಸುವ ಕೆಲಸಗಳನ್ನು ಅದು ನಿರ್ವಹಿಸಲಿದೆ.

ಫೆಡೋರ್‌ ಮೊದಲಿಗನಲ್ಲ
ಅಂತರಿಕ್ಷಕ್ಕೆ ಕಳುಹಿಸಲ್ಪಟ್ಟ ರೋಬಾಟ್‌ಗಳಲ್ಲಿ ಫೆಡೋರ್‌ ಮೊದಲಿಗನೇನಲ್ಲ. ಈ ಹಿಂದೆ ಅಮೆರಿಕ, ಯುರೋಪ್‌ ಕೂಡಾ ರೋಬಾಟ್‌ಗಳನ್ನು ಕಳಿಸಿತ್ತು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ “ರೋಬೋನಾಟ್‌’ ಎಂಬ ರೋಬಾಟ್‌ ಕಳಿಸಿತ್ತು. ತನ್ನ ದೇಶದ ಗಗನಯಾತ್ರಿಗಳ ದಿನನಿತ್ಯದ ಕೆಲಸಗಳಿಗೆ ಸಹಾಯ ಮಾಡುವುದು ಅದರ ಕೆಲಸವಾಗಿತ್ತು. ಅಲ್ಲದೆ ಆ್ಯಸ್ಟ್ರೋ ಬೀಸ್‌ ಎಂಬ ರೋಬಾಟ್‌ಅನ್ನು ಅಮೆರಿಕ ಈ ಹಿಂದೆ ಅಂತರಿಕ್ಷಕ್ಕೆ ಕಳಿಸಿತ್ತು. ಅದರ ಕೆಲಸ ರಿಪೇರಿ ಮಾಡುವಾಗ ನಟ್ಟು ಬೋಲ್ಟಾಗಳು ಮತ್ತಿತರ ಚಿಕ್ಕಪುಟ್ಟ ಸಲಕರಣೆಗಳು, ಬಿಡಿಭಾಗಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು. ಅದರ ಜೊತೆಗೆ ಗಗನನೌಕೆಯಲ್ಲಿ ಇಂಗಾಲ ಆಮ್ಲದ ಪ್ರಮಾಣ ಎಷ್ಟಿದೆ ಎಂದು ಸೂಚಿಸುವುದನ್ನೂ ಅದು ಮಾಡುತ್ತಿತ್ತು.

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.