ಆಗಿದ್ದೆಲ್ಲಾ ಒಳ್ಳೆಯದಕ್ಕೆ!


Team Udayavani, Dec 5, 2019, 4:00 AM IST

fd-2

ತಿಂಗಳುಗಳಿಂದ ಬಲಿಜ ಪಕ್ಷಿ ಶೇಖರಿಸಿದ್ದ ಆಹಾರ ಮಳೆ- ಗಾಳಿಗೆ ಮಣ್ಣು ಸೇರಿತು. ಅದರಿಂದ ಒಳ್ಳೆಯದೇ ಆಗಿತ್ತು!

ಆನಂದವನ ಎಂಬ ಕಾನನವು ಹಸಿರು ಮರಗಳಿಂದ ಕೂಡಿತ್ತು. ಅಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರಕ್ಕೇನು ಕೊರತೆ ಇರಲಿಲ್ಲ. ಜೀವಿಗಳು ಸುಖ ಸಂತೋಷದಿಂದ ಬದುಕುತ್ತಿದ್ದವು.

ಅಲ್ಲಿ, ಒಂದು ಅರಳಿ ಮರದ ಮೇಲೆ ಬಲಿಜ ಮತ್ತು ಸಮುರ ಎಂಬ ಎರಡು ಪಕ್ಷಿಗಳು ವಾಸ ಮಾಡುತ್ತಿದ್ದವು. ಬಲಿಜ ಪಕ್ಷಿಗೆ ಆಹಾರವನ್ನು ಶೇಖರಿಸಿ ಇಡುವ ಗುಣವಿತ್ತು. ಆದರೆ ಸಮುರ ಪಕ್ಷಿಗೆ ಕಾಡಿನಲ್ಲಿ ಯಥೇತ್ಛವಾಗಿ ಆಹಾರ ಲಭ್ಯ ಇರುವುದರಿಂದ ಶೇಖರಿಸುವುದು ಏಕೆ ಎಂಬ ಅಭಿಪ್ರಾಯವಿತ್ತು. ಹೀಗಾಗಿ ಅದು ಬಲಿಜ ಪಕ್ಷಿಯನ್ನು ದಡ್ಡಶಿಖಾಮಣಿ ಎಂದೇ ಆಡಿಕೊಳ್ಳುತ್ತಿತ್ತು. ಬಲಿಜ “ಕಾಡಿನಲ್ಲಿ ಅಕಾಲಿಕ ಮಳೆ ಬಂದರೆ ಆಹಾರ ಸಿಗದೇಹೋಗಬಹುದು. ಅದಕ್ಕೆ ಆಹಾರ ಶೇಖರಿಸಿಡುತ್ತಿದ್ದೇನೆ’ ಎನ್ನುತ್ತಿತ್ತು.

ಕೆಲ ದಿನಗಳ ನಂತರ ಜೋರು ಮಳೆ ಸುರಿಯತೊಡಗಿತು. ಜೋರಾಗಿ ಗಾಳಿ ಬೀಸಿದ್ದರಿಂದ ಬಲಿಜ ಸಂಗ್ರಹಿಸಿದ್ದ ಕಾಳು ಕಡಿಗಳೆಲ್ಲಾ ನೆಲಕ್ಕೆ ಚೆಲ್ಲಿ ಮಣ್ಣುಪಾಲಾದವು. ಬಲಿಜನಿಗೆ ತುಂಬಾ ಬೇಜಾರಾಯಿತು. ಸಮುರ “ನೋಡಿದೆಯಾ ನೀನು ಅಷ್ಟು ಕಷ್ಟಪಟ್ಟು ಕೂಡಿಟ್ಟದ್ದೆಲ್ಲಾ ವ್ಯರ್ಥವಾಯಿತು.’ ಎಂದು ಹೇಳಿತು. ಆಗ ಬಲಿಜ “ಪರವಾಗಿಲ್ಲ ಸ್ನೇಹಿತ. ಇದರಿಂದ ನಾನು ಆಹಾರ ಕೂಡಿಡುವುದನ್ನು ತಪ್ಪಿಸುವುದಿಲ್ಲ. ಕಷ್ಟಪಟ್ಟಿದ್ದು ಯಾವತ್ತೂ ವ್ಯರ್ಥವಾಗದು’ ಎಂದಿತು.

ಕೆಲವು ದಿನಗಳ ನಂತರ ಅರಳಿ ಮರದ ಕೆಳಗೆ ಅನೇಕ ಸಣ್ಣ ಸಣ್ಣ ಸಸ್ಯಗಳು ಚಿಗುರೊಡೆದವು. ಅವು ಬಲಿಜ ಶೇಖರಿಸಿದ್ದ ಕಾಳುಕಡ್ಡಿಗಳು ಮಣ್ಣು ಸೇರಿದ್ದರ ಫ‌ಲವಾಗಿತ್ತು. ಬರಬರುತ್ತಾ ಆ ಸಸಿಗಳು ಗಿಡಗಳಾಗಿ ಕಾಳಿನ ತೆನೆಗಳನ್ನು ಬಿಡಲು ಪ್ರಾರಂಭಿಸಿದವು. ಬಲಿಜ ಮತ್ತು ಸಮುರ ಪಕ್ಷಿಗಳಿಗೆ ಇದನ್ನು ಕಂಡು ತುಂಬಾ ಸಂತೋಷವಾಯಿತು. ಸಮುರನಿಗೆ ಕಡೆಗೂ ಬಲಿಜ ಪಕ್ಷಿ ಹೇಳಿದ್ದರಲ್ಲಿ ಸತ್ಯಾಂಶ ಕಂಡಿತು. ಸಮುರ “ಶ್ರಮಕ್ಕೆ ಪ್ರತಿಫ‌ಲ ಸಿಕ್ಕೇ ಸಿಗುತ್ತೆ ಎಂಬುದನ್ನು ನೀನು ಸಾಬೀತು ಮಾಡಿದೆ’ ಎಂದು ಬಲಿಜನನ್ನು ಅಭಿನಂದಿಸಿತು.

– ವೆಂಕಟೇಶ ಚಾಗಿ

ಟಾಪ್ ನ್ಯೂಸ್

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.