ವಿಸ್ಮಯಕಾರಿ ಮರಗಳು!  ಮರಗಳ ವಿಚಿತ್ರಾಕಾರದ ಹಿಂದಿನ ರಹಸ್ಯ


Team Udayavani, Aug 31, 2017, 6:40 AM IST

vismaya2.jpg

ಮರಗಳು ಹೇಗೆ ಬೆಳೆಯುತ್ತವೆ? ಇದೆಂಥಾ ಪ್ರಶ್ನೆ ಎಂದುಕೊಳ್ಳದಿರಿ. ಮರಗಳು ಉದ್ದಕ್ಕೆ, ಕೆಲವೊಮ್ಮೆ ಓರೆಕೋರೆಯಾಗಿಯೂ ಬೆಳೆಯುವುದಿದೆ. ಆದರೆ ಹಾಗೆ ಬೆಳೆಯಲೇಬೇಕೆಂಬ ನಿಯಮವೇನೂ ಇಲ್ಲ. ಈಗ ಯಾಕೆ ಈ ಪ್ರಶ್ನೆಯೆಂದರೆ ಪೋಲೆಂಡ್‌ನ‌ಲ್ಲಿ ಗ್ರಿಫೈನೋ ಎಂಬ ಹಳ್ಳಿಯಿದೆ. ಅಲ್ಲಿನ ಕಾಡು ಉಲ್ಟಾಪಲ್ಟಾ ಕಾಡು ಅಂತಲೇ ಹೆಸರುವಾಸಿ. ಏಕೆಂದರೆ ಆ ಕಾಡಿನ ಮರಗಳೆಲ್ಲವೂ ವಿಚಿತ್ರ ಆಕಾರದಲ್ಲಿ ಬೆಳೆಯುತ್ತವೆ. ಯಾವ ಆಕಾರವೆಂದರೆ, ಪ್ರಶ್ನಾರ್ಥಕ ಚಿಹ್ನೆಯನ್ನು ಉಲ್ಟಾ ಮಾಡಿದಾಗ ಸಿಗುವ ಸಿಗುವ ಆಕಾರ. ಇದಕ್ಕೆ ಕಾರಣ, ಇನ್ನೂ ನಿಗೂಢವಾಗಿದೆ!

1. 1930ರ ಆಸುಪಾಸಿನಲ್ಲಿ ಈ ಮರಗಳನ್ನು ನೆಡಲಾಗಿದ್ದು, ಆಗ ಅವುಗಳ ವಯಸ್ಸು 7-8. ನೆಡುವಾಗ ಸಹಜವಾಗಿಯೇ ಇದ್ದ ಸಸಿಗಳು ಕೆಲವೇ ವರ್ಷಗಳಲ್ಲಿ ವಿಚಿತ್ರಾಕಾರವನ್ನು ತಾಳಿದವು.

2. ಈ ಕಾಡಿನಲ್ಲಿ ಒಟ್ಟು 400 ಪೈನ್‌ ಮರಗಳಿದ್ದು, ಅವೆಲ್ಲವೂ ಉಲ್ಟಾ ಪ್ರಶ್ನಾರ್ಥಕ ಚಿಹ್ನೆಯ ಆಕಾರದಲ್ಲಿವೆ.  ಅಚ್ಚರಿಯೆಂದರೆ ಅವುಗಳಲ್ಲಿ ಬಹುತೇಕವು ಉತ್ತರಕ್ಕೆ ಮುಖ ಮಾಡಿವೆ.

3. ಮರಗಳು ಸಸಿಯಾಗಿದ್ದಾಗ ಬಿದ್ದ ಜೋರು ಹಿಮದಿಂದಾಗಿ ಅವು ಆ ರೂಪವನ್ನು ಪಡೆದವು ಎಂಬ ವಾದವನ್ನು ಸ್ಥಳೀಯರು ಮುಂದಿಡುತ್ತಾರಾದರೂ, ವಿಜ್ಞಾನಿಗಳು ಈ ವಾದವನ್ನು ಅಲ್ಲಗಳೆಯುತ್ತಾರೆ. ಏಕೆಂದರೆ ಕಾಡಿನ ಹೊರವಲಯದಲ್ಲಿರುವ ಪೈನ್‌ ಮರಗಳು ಮಾತ್ರ ನೇರವಾಗಿಯೇ ಇದ್ದು, ಕಾಡಿನ ಒಳಭಾಗದ ಪೈನ್‌ ಮರಗಳು ಮಾತ್ರವೆ ಡೊಂಕಾಗಿದೆ. ಹಿಮಧಾರೆಯಿಂದಾಗಿ ಡೊಂಕಾಗಿದ್ದರೆ ಎಲ್ಲಾ ಮರಗಳು ಡೊಂಕಾಗಿರಬೇಕಿತ್ತಲ್ಲ ಎಂದು ಪ್ರಶ್ನಿಸುತ್ತಾರೆ ವಿಜ್ಞಾನಿಗಳು.

4. ಇನ್ನೊಂದು ವಾದವೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್‌ ಸೈನಿಕರು ಇಲ್ಲಿ ಟ್ಯಾಂಕರ್‌ಗಳ ಸಮೇತ ಬೀಡುಬಿಟ್ಟಿದ್ದಾಗ ಈ ಸಸಿಗಳ ಮೇಲೆ ಟ್ಯಾಂಕರ್‌ಗಳು ಓಡಾಡಿ, ಅಷ್ಟು ಭಾಗ ಮಾತ್ರ ಡೊಂಕಾಗಿದೆ ಬೆಳೆದಿದೆ ಎನ್ನುವುದು. ವಿಜ್ಞಾನಿಗಳು ಈ ವಾದವನ್ನು ತಳ್ಳಿಹಾಕುತ್ತಾರೆ.

5. ತರ್ಕಕ್ಕೆ ನಿಲುಕುವ ಒಂದು ವಾದ ಹೀಗಿದೆ. 1930ರ ಆಸುಪಾಸಿನಲ್ಲಿ ಹಡಗುಗಳ ನಿರ್ಮಾಣ ಕಾರ್ಯ ಆ ಹಳ್ಳಿಯಲ್ಲಿ ನಡೆದಿತ್ತು. ಹಡಗಿನ ನಿರ್ದಿಷ್ಟ ಭಾಗವನ್ನು ಸಿದ್ಧಪಡಿಸಲು ನಿರ್ದಿಷ್ಟ ಆಕಾರದ ಕಟ್ಟಿಗೆಯ ಅಗತ್ಯ ಬಿತ್ತು. ನಿರ್ದಿಷ್ಟ ಆಕಾರದಲ್ಲಿಯೇ ಮರಗಳನ್ನು ಬೆಳೆಸಿದರೆ ಸಮಯ ಮತ್ತು ವೆಚ್ಚ ಉಳಿಯುತ್ತದೆ ಎನ್ನುವ ಉಪಾಯ ಹಳ್ಳಿಗರಿಗೆ ಹೊಳೆಯಿತು. ಈ ಕಾರಣಕ್ಕಾಗಿ ಸಸಿಗಳನ್ನು ಒಂದಷ್ಟು ವರ್ಷಗಳ ಕಾಲ ನಿರ್ದಿಷ್ಟ ಆಕಾರದ ಕೊಳವೆಗಳೊಳಗೆ ಬೆಳೆಸಿದ್ದಾರೆ. ಬೆಲೆದ ನಂತರ ಕೊಳವೆಗಳನ್ನು ತೆಗೆದಿದ್ದಾರೆ. ಈ ವಾದವನ್ನು ವಿಜ್ಞಾನಿಗಳು ಸಮರ್ಥಿಸಿಕೊಳ್ಳುತ್ತಾರಾದರೂ ಸ್ಥಳೀಯರಿಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ. 

– ಹವನ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.