ಪ್ರಾಣಿಗಳ ಪಾಠ


Team Udayavani, Sep 12, 2019, 5:15 AM IST

e-11

ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ “ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ ನಮ್ಮ ಸಂತತಿ ನಾಶವಾಗುವುದು ಖಚಿತ. ದಯಮಾಡಿ ನಮ್ಮನ್ನು ಕಾಪಾಡಿ ಉಳಿಸಿ’ ಎಂದು ಮೊರೆ ಇಟ್ಟಿತು. ಉಳಿದ ಪ್ರಾಣಿಗಳೆಲ್ಲ ಅದಕ್ಕೆ ದನಿಗೂಡಿಸಿದವು. ಅದಕ್ಕೆ ನರಿ ಒಂದು ಉಪಾಯ ಹೇಳಿತು. ವನರಾಜ ಸಿಂಹ ಅದಕ್ಕೆ ಒಪ್ಪಿಗೆ ಸೂಚಿಸಿತು. ಮರುದಿನ ಬೇಟೆಗಾರ ಮನೆಯಲ್ಲಿಲ್ಲದ ಸಮಯದಲ್ಲಿ ಆನೆ ಆತನ ಮನೆಯ ಬಳಿ ನಿಂತು ಗಿಳಿಟ್ಟಿತು. ಹೆದರಿದ ಮನೆಯವರು ಹೊರಕ್ಕೆ ಓಡಿಬಂದರು. ಇದನ್ನೇ ಕಾಯುತ್ತಿದ್ದ ಕರಡಿ ಮಾಮ ಅವರನ್ನೆಲ್ಲಾ ಕರೆದುಕೊಂಡು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವೆನೆಂದು ಹೇಳಿತು. ಮನೆಯವರೆಲ್ಲರೂ ಕರಡಿಯನ್ನು ಹಿಂಬಾಲಿಸಿದರು. ಅವರೆಲ್ಲರೂ ತೊರೆಯೊಂದರ ಬಳಿ ಬಂದರು. ಪೂರ್ವ ಯೋಜನೆಯಂತೆ ಆ ತೊರೆಯ ಸುತ್ತಲೂ ಇದ್ದ ಬಂಡೆಗಳ ಹಿಂಭಾಗದ ಪೊದೆಯೊಳಗೆ ಪ್ರಾಣಿಗಳೆಲ್ಲ ಅವಿತುಕೊಂಡಿದ್ದವು.

ಇತ್ತ ಬೇಟೆಗಾರನ ಕಣ್ಣಿಗೆ ಮುದ್ದಾದ ಜಿಂಕೆಮರಿ ಕಂಡಿತು. ಅವನು ತಡ ಮಾಡಲಿಲ್ಲ. ಸರಕ್ಕನೆ ಪಕ್ಕದ ಮರದ ಹಿಂದೆ ಅಡಗಿ ಬಿಲ್ಲಿಗೆ ಬಾಣ ಹೂಡಿದ. ಅಷ್ಟರಲ್ಲಿ ಇಡೀ ಅಡವಿಯೇ ನಡುಗುವಂತೆ “ನಿಲ್ಲು’ ಎಂಬ ಧ್ವನಿ ಹಿಂದಿನಿಂದ ಬಂದಿತು. ಬೇಟೆಗಾರ ಹಿಂದಕ್ಕೆ ತಿರುಗಿ ನೋಡಿದ. ಅಲ್ಲಿ ಕಾಡುಪ್ರಾಣಿಗಳ ದಂಡೇ ಇತ್ತು. ಅವುಗಳ ಜೊತೆ ಬೇಟೆಗಾರನ ಕುಟುಂಬವೂ ಇತ್ತು. ಬೇಟೆಗಾರ ಬಿಲ್ಲು ಬಾಣವನ್ನು ಎಸೆದು ತನ್ನ ಕುಟುಂಬದವರ ಬಳಿ ಓಡಿ ಬಂದ. ಅವರನ್ನು ಬಾಚಿ ತಬ್ಬಿದ.

ಬಂಡೆಮೇಲೆ ಕುಳಿತ ಸಿಂಹ ಒಂದೇ ನೆಗೆತಕ್ಕೆ ಅವನೆದುರು ಹಾರಿ ಬಂದು “ನೋಡಿದೆಯಾ? ನಿನಗೆ ನಿನ್ನವರ ಮೇಲೆ ಇರುಷ್ಟೇ ಕಾಳಜಿ ನಮಗೂ ನಮ್ಮವರ ಮೇಲಿದೆ’ ಎಂದಿತು. ಬೇಟೆಗಾರನಿಗೆ ಪ್ರಾಣಿಗಳ ಉಪಾಯ ಅರ್ಥವಾಯಿತು. ಅವನು ಕೈ ಜೋಡಿಸಿ “ನಾನು ಇನ್ನೆಂದೂ ಮೂಕಪ್ರಾಣಿಗಳ ಬೇಟೆ ಆಡುವುದಿಲ್ಲ. ನನ್ನನ್ನು ಕ್ಷಮಿಸಿ’ ಎಂದು ಹೇಳಿ ತನ್ನವರೊಂದಿಗೆ ಮನೆಯ ಕಡೆ ಪ್ರಯಾಣ ಬೆಳೆಸಿದ. ಬೇಟೆಗಾರನ ಮಾತು ಕೇಳಿ ಅಲ್ಲಿ ನರೆದ ಪ್ರಾಣಿಗಳೆಲ್ಲ ಕುಣಿದು ಕುಪ್ಪಳಿಸಿದವು.

– ಅರವಿಂದ ಜಿ. ಜೋಶಿ, ಮೈಸೂರು

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.