ಭೀಷ್ಮರು ಬೋಧಿಸಿದ ರಾಜಧರ್ಮ 


Team Udayavani, Aug 31, 2017, 6:35 AM IST

purana-850.jpg

ಕುರುಕ್ಷೇತ್ರ ಯುದ್ಧ ಮುಗಿಯಿತು. ಪಾಂಡವರು ಕೌರವರ ವಿರುದ್ಧದ ಯುದ್ಧದಲ್ಲಿ ವಿಜಯಿಗಳಾದರು. ಇದಾಗಿ ಒಂದು ತಿಂಗಳು ಪಾಂಡವರು ಗಂಗಾ ನದಿಯ ತೀರದಲ್ಲಿಯೇ ಇದ್ದರು. ಯುಧಿಷ್ಠಿರನಿಗೆ ಬಹಳ ತಳಮಳವಾಗುತ್ತಿತ್ತು. ತನಗೆ ರಾಜ್ಯ ಬೇಡ ಎನ್ನುವಷ್ಟು ಜಿಗುಪ್ಸೆಯಾಗುತ್ತಿತ್ತು. ಅವನ ತಮ್ಮಂದಿರೂ, ದ್ರೌಪದಿಯೂ, ಕೃಷ್ಣನೂ ಅವನಿಗೆ ಸಮಾಧಾನ ಹೇಳಿ ಸಿಂಹಾಸನವನ್ನೇರಲು ಒಪ್ಪಿಸಿದರು. ಬಹಳ ವೈಭವದಿಂದ ಅವನಿಗೆ ಪಟ್ಟಾಭಿಷೇಕವಾಯಿತು. ರಾಜ್ಯದ ಜನರು ಶ್ರೇಷ್ಠ ರಾಜನು ದೊರಕಿದನೆಂದು ಸಂತೋಷಪಟ್ಟರು.

ಒಂದುದಿನ ಬೆಳಗ್ಗೆ ಯುಧಿಷ್ಠಿರನು ಕೃಷ್ಣನನ್ನು ಕಂಡಾಗ ಅವನು ಚಿಂತೆಯಲ್ಲಿದ್ದ. ಈ ದುಗುಡಕ್ಕೆ ಕಾರಣವೇನು ಎಂದು ಕೇಳಿದರೆ ಶರಶಯೆಯಲ್ಲಿದ್ದ ಭೀಷ್ಮರನ್ನು ಕುರಿತು ಯೋಚಿಸುತ್ತಿದ್ದೇನೆ ಎಂದ. ಭೀಷ್ಮರಂಥ ಮಹಾನುಭಾವರ ಮಾರ್ಗದರ್ಶನ ಸಿಗುವುದು ಅಪರೂಪ. ಅವರು ಬದುಕಿದ್ದಾಗಲೇ ಅವರಿಂದ ರಾಜಧರ್ಮದ ಮಾರ್ಗದರ್ಶನ ಪಡೆಯಬೇಕೆಂದು ಕೃಷ್ಣನು ಯುಧಿಷ್ಠಿರನಿಗೆ ಹೇಳಿದ. ಇಬ್ಬರೂ ಭೀಷ್ಮರ ಬಳಿಗೆ ಹೋದರು. ಯುಧಿಷ್ಠಿರನಿಗೆ ಉಪದೇಶ ಮಾಡಬೇಕೆಂದು ಕೃಷ್ಣನು ಭೀಷ್ಮರನ್ನು ಪ್ರಾರ್ಥಿಸಿದ. ಅವರು ಒಪ್ಪಿ ಉಪದೇಶ ಮಾಡಿದರು.

“ರಾಜನು ದೇವತೆಗಳಲ್ಲಿಯೂ, ಬ್ರಾಹ್ಮಣರಲ್ಲಿಯೂ ಭಕ್ತಿಯಿಂದ ನಡೆದುಕೊಳ್ಳಬೇಕು. ಅವನಲ್ಲಿ ದಯೆ ಇರಬೇಕು. ಆದರೆ ಅವನು ತೀರಾ ಮೃದುವಾಗಬಾರದು. ಗರ್ವಿಷ್ಠರನ್ನೂ, ದುಷ್ಟರನ್ನೂ ನಿಗ್ರಹಿಸಬೇಕು. ರಾಜನಿಗೆ ಪ್ರಜೆಗಳನ್ನು ಚೆನ್ನಾಗಿ ಪಾಲಿಸುವುದೇ ಪರಮಧರ್ಮ. ಧೈರ್ಯಶಾಲಿಗಳೂ ಸಜ್ಜನರೂ, ಒಳ್ಳೆಯವರನ್ನೇ ಸ್ನೇಹಿತರಾಗಿ ಹೊಂದಿರುವವರೂ, ವಿದ್ಯಾವಂತರೂ ಲೋಕಾನುಭವ ಉಳ್ಳವರೂ ಆದವರನ್ನೇ ಮಂತ್ರಿಗಳನ್ನಾಗಿ ಆರಿಸಿಕೊಳ್ಳಬೇಕು. ಅನಿವಾರ್ಯವಾದಾಗ ಮಾತ್ರ ಯುದ್ಧ ಮಾಡಬೇಕು. ಶೀಲ ಮುಖ್ಯ. ಶೀಲ ಕೆಟ್ಟರೆ, ಬಲ ಸಂಪತ್ತು ಎಲ್ಲವೂ ದೂರವಾಗುತ್ತವೆ. ಅಪಾಯ ಬರುವುದಕ್ಕೆ ಮೊದಲೇ ಅದನ್ನು ನಿರೀಕ್ಷಿಸಿ ಏನು ಮಾಡಬೇಕೆಂದು ಯೋಚಿಸಬೇಕು. ಶತ್ರುಗಳು ಮೃದುವಾಗಿ ಮಾತನಾಡಿದ ಮಾತ್ರಕ್ಕೆ ಅವರನ್ನು ನಂಬಬಾರದು. ಏನೇ ಆಗಲಿ, ಮನುಷ್ಯನು ಕೃತಘ್ನನಾಗಬಾರದು. ಒಳ್ಳೆಯದೆಂದು ಕಂಡ ಕೆಲಸವನ್ನು ಕೂಡಲೇ ಮಾಡಿಬಿಡಬೇಕು. ತ್ಯಾಗವಿಲ್ಲದೆ ಸುಖವಿಲ್ಲ. ರಾಗದ್ವೇಷಗಳನು, ಭಯಲೋಭಗಳನ್ನು ಚಿಂತೆ -ಮೋಹಗಳನ್ನು ಬಿಟ್ಟವನು ಚಿಂತೆ ಇಲ್ಲದೆ ಸುಖವಾಗಿರುತ್ತಾನೆ…’ ಹೀಗೆ ಭೀಷ್ಮರು ಯುಧಿಷ್ಠಿರನಿಗೆ ರಾಜಧರ್ಮವನ್ನೂ ಮನುಷ್ಯನು ಬದುಕಬೇಕಾದ ರೀತಿಯನ್ನೂ ತಿಳಿಸಿಕೊಟ್ಟರು.

ಉತ್ತರಾಯಣ ಹುಟ್ಟಿದ ಕೂಡಲೇ ಯುಧಿಷ್ಠಿರ, ಪಾಂಡವರು, ವಿಧುರ, ಧೃತರಾಷ್ಟ್ರ, ಕೃಷ್ಣ, ಗಾಂಧಾರಿ, ಕುಂತಿ ಎಲ್ಲರೂ ಭೀಷ್ಮರ ಬಳಿಗೆ ಬಂದರು. ಅವರು ಧೃತರಾಷ್ಟ್ರನಿಗೆ ಸಮಾಧಾನ ಹೇಳಿದರು. ಕೃಷ್ಣನಿಗೆ ಕೈ ಮುಗಿದು ಎಲ್ಲರಿಂದ ಬೀಳ್ಕೊಂಡರು. ಭೀಷ್ಮರ ಪ್ರಾಣವು ಆಕಾಶಕ್ಕೆ ಹಾರಿತು. ಪಾಂಡವರು ಬಹು ಭಕ್ತಿಯಿಂದ ಅವರ ಅಂತ್ಯಸಂಸ್ಕಾರ ಮಾಡಿದರು. 

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌
(ಅವರ “ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.