ಬಿಗ್‌ ಡಾಗ್‌ ಡಿಗ್‌ ಡಾಗ್‌; ನಾಯಿ ನೆಲ ಅಗೆಯುವುದೇಕೆ?


Team Udayavani, Jan 16, 2020, 5:00 AM IST

DOG

ನಮ್ಮ ಮನೆಯ ನಾಯಿ ಶೌಚಕ್ಕೆ ಹೋದ ನಂತರ ನೆಲವನ್ನು ಕೆದಕಿ ಮಣ್ಣಿನಿಂದ ಮುಚ್ಚುವುದು ಏಕೆ? ಶುಚಿಯಾಗಲಿ ಎಂಬ ಸದುದ್ದೇಶದಿಂದಂತೂ ಅಲ್ಲ!

ಮಕ್ಕಳಿಗೆ ನಾಯಿಯನ್ನು ಕಂಡರೆ ತುಂಬಾ ಇಷ್ಟ. ನಾಯಿಗಳೂ ಪುಟಾಣಿಗಳೊಂದಿಗೆ ತಾವೂ ಬೆರೆತು ಮಕ್ಕಳಾಗಿಬಿಡುತ್ತವೆ. ದೊಡ್ಡವರೊಂದಿಗೆ ಆಡುವಾಗ ಮೈಮೇಲೆ ಎಗರುವ ನಾಯಿಗಳು ಪುಟಾಣಿ ಮಕ್ಕಳೊಂದಿಗೆ ಆಡುವಾಗ ಎಗರಿದರೆ ಎಲ್ಲಿ ಏಟಾಗುವುದೋ ಎಂಬ ಎಚ್ಚರಿಕೆ ವಹಿಸುವುದು ಅವುಗಳ ಸೂಕ್ಷ್ಮಪ್ರಜ್ಞೆಗೆ ಸಾಕ್ಷಿ. ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧ 30,000 ವರ್ಷಗಳಷ್ಟು ಹಳೆಯದು ಎನ್ನುತ್ತಾರೆ ಸಂಶೋಧಕರು. ಆದರೆ, ಇಂದಿಗೂ ನಾಯಿಗಳ ಅನೇಕ ವರ್ತನೆಗಳು ಅಚ್ಚರಿ ಮೂಡಿಸುವುದಲ್ಲದೆ, ಅವುಗಳಲ್ಲಿ ಕೆಲವು ಒಗಟಾಗಿಯೇ ಉಳಿದಿದೆ. ನಾವೆಲ್ಲರೂ ನೋಡಿರುವ ಆದರೆ ಉತ್ತರ ಗೊತ್ತಿಲ್ಲದ ನಾಯಿಗಳ ವರ್ತನೆಗಳಲ್ಲೊಂದು ಅವುಗಳು ಶೌಚ ಮಾಡಿದ ನಂತರ ಮಣ್ಣನ್ನು ಕೆದಕುವುದು.

ತೋಳದಿಂದ ವರ್ಗಾವಣೆ
ಎಲ್ಲಾ ನಾಯಿಗಳೂ ಶೌಚದ ನಂತರ ಮಣ್ಣು ಕೆದಕುವ ವರ್ತನೆಯನ್ನು ತೋರುವುದಿಲ್ಲವಂತೆ! ಈ ವರ್ತನೆಯ ಮೂಲ ತೋಳಗಳು ಎಂಬ ಸಂದೇಹ ವ್ಯಕ್ತಪಡಿಸುತ್ತಾರೆ ಸಂಶೋಧಕರು. ತೋಳಕ್ಕೂ ನಾಯಿಗೂ ಎತ್ತಣಿಂದೆತ್ತ ಸಂಬಂಧ ಎಂಬ ಅನುಮಾನ ಬರುತ್ತಿದೆಯಲ್ಲವೆ? ತೋಳ, ನಾಯಿಗಳ ವಂಶಜ. ನಾಯಿಗಳೂ ಮುಂಚೆ ತೋಳಗಳೇ ಆಗಿದ್ದವು. ವಿಕಾಸ ಪಥದಲ್ಲಿ ಯಾವ ರೀತಿ ಮಂಗನಿಂದ ಮಾನವ ಆದನೋ ಅದೇ ರೀತಿ ತೋಳನಿಂದ ನಾಯಿ ಬಂದಿತು. ತೋಳಗಳ ಹಿಂಡಿನಲ್ಲಿದ್ದ ನಾಯಕ ತೋಳ ತನ್ನ ಸಾಮ್ರಾಜ್ಯವನ್ನು, ತನಗೆ ಸೇರಿದ ಜಾಗವನ್ನು ಗುರುತು ಮಾಡಲು ನೆಲವನ್ನು ಕೆದಕುತ್ತದೆ. ಅದೇ ವರ್ತನೆ ನಾಯಿಗಳಿಗೂ ವರ್ಗಾವಣೆಯಾಗಿದೆ.

ಈಗ ಸಾಮ್ರಾಜ್ಯವಿಲ್ಲ
ನಾಯಿಯ ವಿಷಯಕ್ಕೆ ಬರುವುದಾದರೆ ನಾಯಿಗಳೇನು ತೋಳಗಳಂತೆ ಹಿಂಡಿನಲ್ಲಿ ಜೀವಿಸುತ್ತಿಲ್ಲ. ಗುಂಪುಗಳಿರಬಹುದಷ್ಟೇ. ಹೀಗಾಗಿ ನಾಯಿಗಳಿಗೆ ಅವುಗಳ ಜಾಗವನ್ನು ಗುರುತು ಮಾಡಿಕೊಳ್ಳುವಂಥ ಅವಶ್ಯಕತೆ ಈಗಿಲ್ಲ. ಆದರೆ, ನಾಯಿಗಳು ತಮ್ಮ ಇರುವಿಕೆಯನ್ನು ಇತರೆ ನಾಯಿಗಳಿಗೆ ತಿಳಿಸಲು ಈಗಲೂ ಮಣ್ಣನ್ನು ಕೆದಕುವ ವರ್ತನೆಯನ್ನು ಪ್ರದರ್ಶಿಸುತ್ತವೆ. ಕೆಲ ಮಾಲೀಕರು ತಮ್ಮ ನಾಯಿಯ ಕೆದಕುವ ಅಭ್ಯಾಸವನ್ನು ಹೋಗಲಾಡಿಸಲು ಅನೇಕ ತಂತ್ರಗಳನ್ನು ಬಳಸುತ್ತಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಆದರೆ ಪರಿಸರತಜ್ಞರು ನಾಯಿಗಳನ್ನು ಅದಕ್ಕೆ ಬೇಕಾದ ಹಾಗೆ ಇರಲು ಬಿಡಿ ಎನ್ನುತ್ತಾರೆ. ಅವುಗಳು ಇತರೆ ಪ್ರಾಣಿಗಳೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸುವುದು ಅವುಗಳ ಸ್ವಭಾವ ಪ್ರಕೃತಿಗೆ ವಿರುದ್ಧ ಎನ್ನುವುದು ಅವರ ಅಭಿಪ್ರಾಯ.

ಗುರುತು ಮಾಡುವುದು ಏಕೆ?
ನಮ್ಮಲ್ಲಿ ಸೈಟುಗಳನ್ನು ಕೊಂಡು ಅದರ ಸುತ್ತ ಬೇಲಿ ಹಾಕಿ, ಇದು ಇಂಥವರಿಗೆ ಸೇರಿದ ಸೈಟು ಎಂಬ ನಾಮಫ‌ಲಕವನ್ನು ಹಾಕುವುದಿಲ್ಲವೆ? ಹಾಗೆ ಯಾಕೆ ಮಾಡುತ್ತಾರೆ ಹೇಳಿ. ಅದು ಯಾರಿಗೆ ಸೇರಿದ ಜಾಗ ಎಂಬುದು ಎಲ್ಲರಿಗೂ ತಿಳಿಯಲಿ ಎಂದು. ಇದರಿಂದ ನಾಳೆ ಇನ್ಯಾರೋ ಬಂದು ಆ ಜಾಗ ತಮಗೆ ಸೇರಿದ್ದು ಎಂದು ಹೇಳದಿರಲಿ ಎಂದು. ಅದೇ ರೀತಿ ತೋಳಗಳೂ ತಮ್ಮ ಹಿಂಡಿನ ವ್ಯಾಪ್ತಿ ಇತರೆ ಹಿಂಡಿನ ತೋಳಗಳಿಗೆ ತಿಳಿಯಲಿ ಎಂದು ನೆಲವನ್ನು ಕೆದಕಿ ಗುರುತು ಮಾಡುತ್ತದೆ. ನೆಲವನ್ನು ಕೆದಕಿದಾಗ ಅವುಗಳ ದೇಹದಿಂದ “ಫೆರೋಮೋನ್‌’ ಎಂಬ ರಾಸಾಯನಿಕ ಆ ಮಣ್ಣಿನಲ್ಲಿ ಸೇರುತ್ತದೆ. ಆ ವಾಸನೆ ಬಹಳ ಕಾಲ ಉಳಿದುಕೊಂಡುಬಿಡುತ್ತದೆ. ಇತರೆ ತೋಳ ಮಾತ್ರ ವಾಸನೆಯನ್ನು ಪತ್ತೆಹಚ್ಚಬಲ್ಲುದು. ನಾಯಿಗಳಿಗೂ ಈ ವಿಚಾರ ಅನ್ವಯಿಸುತ್ತದೆ.

-ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.