ಚಿನಕುರುಳಿ ಮೊಲ


Team Udayavani, Jul 20, 2019, 5:00 AM IST

p-17

ಒಂದು ದಿನ ಇದ್ದಕ್ಕಿದ್ದಂತೆ ಜಿಂಕೆಮರಿಯೊಂದು ಕಾಣೆಯಾಗಿ ಹೋಯಿತು. ಯಾರೂ ಎಷ್ಟೇ ಹುಡುಕಿದರೂ ಜಿಂಕೆ ಮರಿ ಮಾತ್ರ ಸಿಗಲಿಲ್ಲ. ಎಲ್ಲೋ ತಪ್ಪಿಸಿಕೊಂಡು ಹೋಗಿರಬಹುದೆಂದೆನಿಸಿ ಎಲ್ಲ ಪ್ರಾಣಿಗಳು ನಿಶ್ಚಿಂತೆಯಿಂದ ಇದ್ದವು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಅನಂತರದ ದಿನಗಳಲ್ಲಿ ಸಣ್ಣ ಪುಟ್ಟ ಪ್ರಾಣಿಗಳು ಕಾಣೆಯಾಗುವುದು ಸಾಮಾನ್ಯವಾದ ವಿಷಯವಾಗತೊಡಗಿತು.

ದಂಡಕಾರಣ್ಯ ಕಾಡಿನಲ್ಲಿ ಎಲ್ಲ ಪ್ರಾಣಿಗಳೂ ಒಗ್ಗಟ್ಟಿನಿಂದ ಇರುತ್ತಿದ್ದವು. ಆಹಾರಗಳನ್ನು ಬೇಟೆಯಾಡಲು ಪಕ್ಕದ ಕಾಡಿಗೆ ಹೋಗುತ್ತಿದ್ದವು. ಅಲ್ಲಿಗೆ ಸತತವಾದ ಇವರ ಭೇಟಿ ಆ ಕಾಡಿನ ಪ್ರಾಣಿಗಳನ್ನು ತೊಂದರೆಗೀಡಾಗುವಂತೆ ಮಾಡಿತ್ತು. ಅಲ್ಲಿನ ಪ್ರಾಣಿಗಳು ಪ್ರತಿಕ್ಷಣ ಭಯದಿಂದ ಬದುಕುತ್ತಿದ್ದವು. ಚಿನಕುರುಳಿ ಎಂಬ ಮೊಲ ದಂಡಕಾರಣ್ಯದಲ್ಲಿ ವಾಸವಿದ್ದು ಎಲ್ಲ ಪ್ರಾಣಿಗಳ ಉತ್ತಮ ಸ್ನೇಹಿತನಾಗಿತ್ತು. ಚಿನಕುರುಳಿಯ ಸತತ ಪ್ರಯತ್ನದಿಂದಾಗಿ ದಂಡಕಾರಣ್ಯದ ಪ್ರಾಣಿಗಳು ಹಾಗೂ ಪಕ್ಕದ ಕಾಡಿನ ಪ್ರಾಣಿಗಳು ಉತ್ತಮ ಸ್ನೇಹಿತರಾದವು. ಒಬ್ಬರಿಗೊಬ್ಬರಿಗೆ ಅಪಾಯದ ಸಂದರ್ಭದಲ್ಲಿ ಸಹಾಯ ಮಾಡಲು ಆರಂಭಿಸಿದವು.

ದಂಡಕಾರಣ್ಯದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಜಿಂಕೆಮರಿಯೊಂದು ಕಾಣೆಯಾಗಿ ಹೋಯಿತು. ಯಾರೂ ಎಷ್ಟೇ ಹುಡುಕಿದರೂ ಜಿಂಕೆ ಮರಿ ಮಾತ್ರ ಸಿಗಲಿಲ್ಲ. ಎಲ್ಲೋ ತಪ್ಪಿಸಿಕೊಂಡು ಹೋಗಿರಬಹುದೆಂದೆನಿಸಿ ಎಲ್ಲ ಪ್ರಾಣಿಗಳು ನಿಶ್ಚಿಂತೆಯಿಂದ ಇದ್ದವು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಅನಂತರದ ದಿನಗಳಲ್ಲಿ ಸಣ್ಣ ಪುಟ್ಟ ಪ್ರಾಣಿಗಳೂ ಕಾಣೆಯಾಗುವುದು ಸಾಮಾನ್ಯವಾದ ವಿಷಯವಾಗತೊಡಗಿತು. ಆಗಲೇ ದಂಡಾಕಾರಣ್ಯದ ಪ್ರಾಣಿಗಳಿಗೆ ಶತ್ರುಗಳ ಮುನ್ಸೂಚನೆ ಲಭಿಸಿತು. ಅವರ ಅನುಮಾನಗಳು ಮೊದಲು ತಿರುಗಿದ್ದೇ ಪಕ್ಕದ ಕಾಡಿನ ಮೇಲೆ. ಸ್ನೇಹಿತರಂತೆ ನಾಟಕವಾಡುತ್ತಾ ತಮ್ಮ ಬಳಗದವರನ್ನು ಬೇಟೆಯಾಡುತ್ತಿದ್ದಾರೆಂದು ಅವುಗಳು ಅನುಮಾನಿಸಿದವು. ಸುದ್ದಿಗಳು ಹರಡುತ್ತಾ ಹೋದಂತೆ ಅನುಮಾನವನ್ನು ನಿಜವೆಂದೇ ಎಲ್ಲ ಪ್ರಾಣಿಗಳೂ ನಂಬಿದವು. ಹೀಗೆ ಅನುಮಾನಗಳು ಬೆಳೆಯುತ್ತಾ ಹೋದಂತೆ ಜಗಳಗಳೂ ಪ್ರಾರಂಭವಾದವು. ದಂಡಕಾರಣ್ಯದ ಪ್ರಾಣಿಗಳು ಮತ್ತೆ ಪಕ್ಕದ ಕಾಡಿಗೆ ಹೋಗಿ ಬೇಟೆಯಾಡತೊಡಗಿದವು. ಶಾಂತವಾಗಿದ್ದ ಕಾಡಿನಲ್ಲಿ ಮತ್ತೆ ಜಗಳಗಳು ಪ್ರಾರಂಭವಾದವು. ಬೇಟೆಗೆ ಪ್ರಾಣಿಗಳೆಲ್ಲಾ ಬೆಚ್ಚಿ ಬಿದ್ದವು. ಅದರೆ ಚಿನಕುರುಳಿ ಮೊಲ ಮಾತ್ರ ಈ ಘಟನೆಯಿಂದ ತುಂಬಾ ಆಘಾತಕ್ಕೀಡಾಯಿತು. ಅದಕ್ಕೆ ತಮ್ಮ ನಡುವೆಯೇ ಯಾರೋ ಈ ಕೆಲಸವನ್ನು ಮಾಡಿದ್ದಾರೆಂದು ನಂಬಲು ಅಸಾಧ್ಯವಾಗಿತ್ತು. ಆದರೆ ಈ ಮಾತನ್ನು ದಂಡಕಾರಣ್ಯದ ಪ್ರಾಣಿಗಳಿಗೆ ಹೇಳಿದರೆ ಅವು ನಂಬಲು ಸಿದ್ಧರಿರಲಿಲ್ಲ. ಕೊನೆಗೆ ಏನಾದರೊಂದು ಉಪಾಯ ಮಾಡಲೇ ಬೇಕೆಂದು ತೀರ್ಮಾನಿಸಿತು. ತಮ್ಮ ಕಾಡಿಗೆ ಬಂದು ಒಡನಾಡಿಗಳನ್ನು ಬೇಟೆಯಾಡುವ ಆ ಕಳ್ಳನನ್ನು ಪತ್ತೆಹಚ್ಚಲು ಮೊಲ ತೀರ್ಮಾನಿಸಿತು. ಅದಕ್ಕಾಗಿ ಹಗಲು ರಾತ್ರಿ ಕಾಡಿನಲ್ಲಿ ಸುತ್ತಾಡತೊಡಗಿತು. ಆದರೆ ಬೇಟೆ ಪ್ರತಿದಿನವೂ ಮುಂದುವರಿಯುತ್ತಿತ್ತು.

ಒಂದು ದಿನ ನರಿಯೊಂದು ಕಳ್ಳ ಹೆಜ್ಜೆಗಳನ್ನಿಡುತ್ತಾ ಬಂದು ಕಾಡಿನಲ್ಲಿ ತಿರುಗುತ್ತಿದ್ದ ಸಣ್ಣ ಸಣ್ಣ ಪ್ರಾಣಿಗಳಲ್ಲಿ ಒಂದನ್ನು ಹಿಡಿದುಕೊಂಡು ಓಡಿತು. ಅಲ್ಲಿಗೆ ಮೊಲಕ್ಕೆ ಸತ್ಯ ತಿಳಿಯಿತು. ಹೊರಗಿನಿಂದ ಬಂದ ನರಿಯೊಂದು ಎರಡು ಕಾಡುಗಳ ಮಧ್ಯೆ ಜಗಳವನ್ನು ತಂದಿಟ್ಟ ವಿಷಯ ತಿಳಿದು ಮೊಲ ಅದನ್ನು ಬಹಿರಂಗಗೊಳಿಸಲು ತೀರ್ಮಾನಿಸಿತು. ಎರಡೂ ಕಾಡಿನ ರಾಜರನ್ನು ಮರುದಿವಸ ನರಿ ಬರುವ ಹೊತ್ತಿಗೆ ಅಲ್ಲಿಗೆ ಕರೆದುಕೊಂಡು ಬಂದು ಮರೆಯಲ್ಲಿ ನಿಂತು ನರಿಯ ಕೆಲಸವನ್ನು ತೋರಿಸಿತು. ನರಿ ಇನ್ನೇನು ಒಂದು ಜಿಂಕೆ ಮರಿಯನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಎರಡು ಸಿಂಹಗಳು ನರಿಯ ಮೇಲೆ ಹಾರಿ ಅದನ್ನು ಸಾಯಿಸಿದವು. ಎರಡೂ ಕಾಡಿನ ಪ್ರಾಣಿಗಳಿಗೂ ನಿಜ ತಿಳಿದು ಮಾಡಿದ ತಪ್ಪಿಗೆ ಒಬ್ಬರನ್ನೊಬ್ಬರು ಕ್ಷಮೆ ಯಾಚಿಸಿದವು. ಇದಕ್ಕೆಲ್ಲಾ ಸಹಾಯ ಮಾಡಿದ ಚಿನಕುರುಳಿ ಮೊಲವನ್ನು ಎಲ್ಲವೂ ಅಭಿನಂದಿಸಿದವು.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.