ಸೂರ್ಯ ಇಲ್ಲದ ಆಗಸ


Team Udayavani, Apr 4, 2019, 6:00 AM IST

Chinnari-Summer

ಅಂದು ಶಾಲೆಯಲ್ಲಿ ಹಬ್ಬದ ಪ್ರಯುಕ್ತ ಗಾಳಿಪಟ ಹಾರಿಸುವ ಕಾರ್ಯಕ್ರಮವಿತ್ತು. ಅಚ್ಚರಿಯೆಂದರೆ ಬೆಳಗ್ಗೆ 8 ಗಂಟೆಯಾಗಿದ್ದರೂ ಆಗಸದಲ್ಲಿ ಸೂರ್ಯ ಮೂಡಿರಲಿಲ್ಲ. ಇನ್ನೂ ಕತ್ತಲು ಕವಿದಿತ್ತು. ಅಭಿ ಮತ್ತು ಆರತಿ ಅವರ ಕೋಣೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಅಮ್ಮನಿಗೆ ಗಾಬರಿಯಾಗಿತ್ತು. ಅವರನ್ನು ಹುಡುಕುತ್ತಾ ಶಾಲೆಗೆ ಬಂದರು…

ಬೆಳಿಗ್ಗೆ ಎಂಟು ಗಂಟೆಯಾದರೂ ಇನ್ನೂ ಕತ್ತಲು ಕತ್ತಲು! ಬೆಳಕೇ ಇಲ್ಲ. ಅಭಿ ಮತ್ತು ಆರತಿಯ ಕೋಣೆಯಲ್ಲಿ ಅಮ್ಮ ಇಣುಕಿ ನೋಡಿದರು. ಮಕ್ಕಳಿಬ್ಬರೂ ಕಾಣಿಸಲಿಲ್ಲ. ಅವರಿಗೆ ಗಾಬರಿಯೇ ಆಯಿತು. ಇನ್ನೂ ಸರಿಯಾಗಿ ಬೆಳಕಾಗಿಯೇ ಇಲ್ಲ. ಶಾಲೆಯಲ್ಲಿ ಎಂಟು ಗಂಟೆಗೆ ಸಂಕ್ರಾಂತಿ ಹಬ್ಬದ ಆಚರಣೆ ಎಂದಿದ್ದರು, ಇಷ್ಟು ಬೇಗ ಶಾಲೆಗೆ ಹೋಗಿರಬಹುದು ಎಂದುಕೊಳ್ಳುತ್ತ ಅಮ್ಮ ಶಾಲೆಯ ಕಡೆಗೆ ಹೆಜ್ಜೆ ಹಾಕಿದರು. ಶಾಲೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಪೋಷಕರು ವಿಶೇಷ ಕಾರ್ಯಕ್ರಮದ ಆಚರಣೆಯ ಕಾರಣ, ಮಕ್ಕಳನ್ನೆಲ್ಲ ಕರೆದುಕೊಂಡು ಬಂದಿದ್ದರು. ಶಾಲೆಯ ವಾಹನಗಳೂ ಬಂದವು.

ಪ್ರಾಂಶುಪಾಲರು ವೇದಿಕೆಯತ್ತ ತೆರಳಿದರು. ಕಾರ್ಯಕ್ರಮದ ಸಂಯೋಜಕಿ ತಾರಾ ಟೀಚರ್‌ ಕಾಣಿಸಿಕೊಂಡರು. ಕಾರ್ಯಕ್ರಮದ ಅತಿಥಿಗಳೂ ಬಂದಾಯಿತು. ಇನ್ನೂ ಕತ್ತಲು’ಕತ್ತಲು. ಆರಂಭಿಸೋಣವೇ? ಎಲ್ಲ ಮಕ್ಕಳೂ ಬಂದಿದ್ದಾರೆ’ “ಆರತಿ ಮತ್ತು ಅಭಿ ಬಂದಿಲ್ಲ. ಅವರೇ ಕಾರ್ಯಕ್ರಮವನ್ನು ನಡೆಸಬೇಕಿತ್ತು’ ಎಂದರು ತಾರಾ ಟೀಚರ್‌. ಅಸಹಾಯಕತೆಯಿಂದ‌ ಪ್ರಿನ್ಸಿಪಾಲ್‌ ಮೇಡಂ ಕೂಡ ನೋಡಿದರು. ವೇದಿಕೆ ಸಜ್ಜಾಯಿತು. ಮಕ್ಕಳನ್ನೆಲ್ಲ ಸಾಲು ಸಾಲಾಗಿ ಕೂರಿಸಲಾಯಿತು. ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಆರತಿ ಮತ್ತು ಅಭಿ ಎಲ್ಲಿದ್ದರೂ ಬರಬೇಕೆಂದು ಘೋಷಿಸಲಾಯಿತು.

ಕತ್ತಲೆಯ ವಾತಾವರಣದಲ್ಲಿ ಬೆಳಕೊಂದು ಮೂಡಿತು. ಎಲ್ಲ ನೋಡುತ್ತಿದ್ದಂತೆ ಶಾಲೆಯ ಅಂಗಳ ಬೆಳಕಿನಿಂದ ತುಂಬಿತು. ಎಲ್ಲರೂ “ಹೋ’ ಎಂದರು. ವೇದಿಕೆಯ ಮೇಲೆ ಆರತಿ ಮತ್ತು ಅಭಿ ಕಾಣಿಸಿಕೊಂಡರು. ಎಲ್ಲೆಲ್ಲೂ ಬೆಳಕು ಈಗ! “ಬಾ ಸೂರ್ಯಣ್ಣ… ಬಾ… ಬಾ’ ಎನ್ನುತ್ತ ಆರತಿ ಮತ್ತು ಅಭಿ ವ್ಯಕ್ತಿಯೊಬ್ಬರನ್ನು ವೇದಿಕೆಯ ಮುಂಭಾಗಕ್ಕೆ ಕರೆತಂದರು. ಪ್ರಿನ್ಸಿಪಾಲ್‌ ಮೇಡಂ ಕೂಡ ಏನು ನಡೆಯುತ್ತಿದೆ ಎಂದು ಕೇಳುವಷ್ಟರಲ್ಲೆ ಅಭಿ ಮೈಕ್‌ ಹಿಡಿದು ಹೇಳಿದ, “ಗೆಳೆಯರೇ, ಇಂದಿನ ಸಂಕ್ರಾಂತಿ ಹಬ್ಬಕ್ಕೆ ನಮ್ಮ ಸೂರ್ಯಣ್ಣನೇ ಬಂದಿದ್ದಾನೆ. ಚಪ್ಪಾಳೆಯ ಮೂಲಕ ಸ್ವಾಗತಿಸೋಣ.’ ಎಲ್ಲ ಮಕ್ಕಳೂ ಟಪ-ಟಪ ಚಪ್ಪಾಳೆ ಹೊಡೆದರು.

ಬಂದ ವ್ಯಕ್ತಿ ಆ ಶಾಲೆಯ ಸಮವಸ್ತ್ರ ಹಾಕಿದ್ದರು. ತಲೆಯ ಮೇಲೆ ಅಗಲದ ಹ್ಯಾಟು. ಮೂಗಿನ ಮೇಲೆ ಕಪ್ಪು ಕನ್ನಡಕ. “ನಿಮಗೆಲ್ಲ ಆಶ್ಚರ್ಯ ಆಗುತ್ತಿರಬಹುದಲ್ಲವೆ? ಸೂರ್ಯಣ್ಣ ಇಲ್ಲಿಗೆ ಹೇಗೆ ಬಂದ ಅಂತ? ನಾನು ಹೇಳುತ್ತೇನೆ ಕೇಳಿ. ನೆನ್ನೆ ನಾನು- ಆರತಿ ಸೇರಿಕೊಂಡು ಮನೆಯಲ್ಲಿ ಇಂದಿನ ಹಬ್ಬಕ್ಕೆ ಗಾಳಿಪಟ ತಯಾರಿಸುತ್ತಿದ್ದೆವು. ನಮ್ಮಮ್ಮ ಗಾಳಿಪಟದ ಮೇಲೆ ಕೂತ್ಕೊಂಡು ಹಾರುತ್ತ ಸೂರ್ಯ ಲೋಕಕ್ಕೂ ಹೋಗಬಹುದು ಎಂದರು. ನಾವು ಹಾಗೇ ಮಾಡಿದೆವು. ಸೂರ್ಯಣ್ಣ ಮೊದಲು ನಮ್ಮ ಜೊತೆ ಬರೋದಕ್ಕೆ ಆಗೋಲ್ಲ ಅಂದ. ನಾವು ಒತ್ತಾಯಿಸಿದೆವು.

ಬೇರೆಯವರಿಗೆ ಗೊತ್ತಾಗಬಾರದು ಅಂತ ನಮ್ಮ ಶಾಲೆಯ ಸಮವಸ್ತ್ರವನ್ನೇ ಸೂರ್ಯಣ್ಣನಿಗೆ ಉಡಿಸಿದ್ವಿ. ತಲೆಯ ಮೇಲೆ ನೋಡಿ ಬಿಸಿಲಿಗೆ ದೊಡ್ಡ ಹ್ಯಾಟಿದೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿದ್ವಿ. ಎಲ್ಲರೂ ನನ್ನ ಜೊತೆ ಹೇಳಿ “ವೆಲ್‌ಕಮ್‌ ಸೂರ್ಯಣ್ಣ!’ ಎಲ್ಲರೂ ಒಟ್ಟಿಗೆ ಹೇಳಿದರು, “ವೆಲ್‌ಕಮ್‌ ಸೂರ್ಯಣ್ಣ, ನಮ್ಮ ಶಾಲೆಗೆ ನಿನಗೆ ಆದರದ ಸ್ವಾಗತ’. ಈಗ ಎಲ್ಲ ಕಡೆ ಬೆಳಕಾದುದರಿಂದ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಿಕ್ಷಕರೆಲ್ಲ ಬೆರಗಾಗಿ ನೋಡುತ್ತಿದ್ದರು.

“ಸೂರ್ಯಣ್ಣ, ನೀನೇನಾದರೂ ಹೇಳುತ್ತೀಯ?’, ‘ಹೌದು, ನನಗೆ ತುಂಬಾ ಖುಷಿಯಾಗಿದೆ, ಮಕ್ಕಳೇ. ನಾನು ಹೀಗೆಲ್ಲ ಬರುವಂತಿಲ್ಲ. ಆರತಿ ಮತ್ತು ಅಭಿ ಇವರ ಪ್ರೀತಿಯ ಕರೆಗೆ ಓಗೊಟ್ಟು ಬಂದಿದ್ದೀನಿ. ಸಂಕ್ರಾಂತಿ ಹಬ್ಬ ಚೆನ್ನಾಗಿ ಆಚರಿಸಿ. ನಾನಿನ್ನು ಬರುತ್ತೇನೆ. ಎಲ್ಲರಿಗೂ ಬೈ ಬೈ… ಟಾಟಾ…’ಎಂದು ಕೈ ಬೀಸುತ್ತಾ ಸೂರ್ಯಣ್ಣ ಮರೆಯಾಗಿಯೇಬಿಟ್ಟ. ಎಲ್ಲ “ಹೋ’ ಎಂದು ಮತ್ತೆ ಕೂಗಿದರು. ಅಭಿ-ಆರತಿ ಕೂಡ ಕೈಬೀಸಿದರು…

ಗೇಟಿನ ಬಳಿ ಇದ್ದ ಅಭಿ ಮತ್ತು ಆರತಿಯ ತಾಯಿಗೆ ಇದೆಲ್ಲವನ್ನೂ ನೋಡಿ ಬಹಳ ಖುಷಿಯಾಯಿತು.

— ಮತ್ತೂರು ಸುಬ್ಬಣ್ಣ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.