ಕ್ರೇಯಾನ್‌ ಪ್ರಪಂಚ!

ಕಲರ್‌ ಕಲರ್‌ ಯಾವ ಕಲರ್‌?

Team Udayavani, Jan 9, 2020, 6:57 AM IST

3

ಕ್ರೇಯಾನ್‌ಗಳಲ್ಲಿ ಚಿತ್ರ ಬಿಡಿಸದ ಮಕ್ಕಳು ಈ ದಿನಗಳಲ್ಲಿ ಸಿಗುವುದು ವಿರಳ. ಚಿತ್ರ ಬಿಡಿಸಿ ಅದರೊಳಗೆ ಕ್ರೇಯಾನ್‌ ಬಣ್ಣ ತುಂಬುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಹಾಗಿದ್ದರೆ ಕ್ರೇಯಾನ್‌ಗಳ ಕುರಿತಾದ ಈ ಬರಹವೂ ಇಷ್ಟವಾಗುತ್ತದೆ.

ಇಂದು ವಿವಿಧ ಗಾತ್ರದ ಕ್ರೇಯಾನ್‌ಗಳ ಪ್ಯಾಕೆಟ್‌ಗಳು ಅಂಗಡಿಗಳಲ್ಲಿ ಸಿಗುತ್ತವೆ. ಹನ್ನೆರಡರಿಂದ ನೂರು ಬಗೆಯ ಬಣ್ಣಗಳವರೆಗೆ ಮಕ್ಕಳು ಆರಿಸಿಕೊಳ್ಳಬಹುದು. ಆದರೆ ಬಹಳ ಹಿಂದೆ ಕ್ರೇಯಾನ್‌ಗಳ ಆವಿಷ್ಕಾರವಾದ ದಿನಗಳಲ್ಲಿ ಅದು ಕೇವಲ ಒಂದೇ ಬಣ್ಣದಲ್ಲಿ ಸಿಗುತ್ತಿತ್ತು. ಯಾವ ಬಣ್ಣ ಊಹಿಸಬಲ್ಲಿರಾ? ಕಪ್ಪು ಬಣ್ಣ! ಮುಂದೆ 8 ಬಣ್ಣಗಳಲ್ಲಿ ಕ್ರೇಯಾನ್‌ ಸಿಗತೊಡಗಿದವು. ಅಂದಿನ ಕಾಲದಲ್ಲಿ ಕ್ರೇಯಾನ್‌ಗಳನ್ನು ಮಕ್ಕಳು ಬಳಸುತ್ತಿರಲಿಲ್ಲ. ಕಾರ್ಖಾನೆಗಳಲ್ಲಿ ಮರ, ಕಬ್ಬಿಣ ಮುಂತಾದ ಮೇಲ್ಮೈಯಲ್ಲಿ ಬರೆಯಲು, ಗುರುತು ಮಾಡಲು ಕ್ರೇಯಾನ್‌ಗಳಿಂದ ಮಾತ್ರ ಸಾಧ್ಯವಿತ್ತು. 1900ರ ಪ್ರಾರಂಭದಲ್ಲಿ ಎಡ್ವಿನ್‌ ಬಿನ್ನಿ ಮತ್ತು ಹೆರಾಲ್ಡ್‌ ಸ್ಮಿತ್‌ ಎಂಬಿಬ್ಬರು ಸಹೋದರರು ಮೊದಲ ಬಾರಿಗೆ ಮಕ್ಕಳಿಗೆಂದೇ ಆಕರ್ಷಕ ಬಣ್ಣಗಳಲ್ಲಿ ಕ್ರೇಯಾನ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಚಾಕ್‌ಪೀಸ್‌ನಿಂದ ಕ್ರೇಯಾನ್‌ ತನಕ…
1864ರಲ್ಲಿ ಎಡ್ವಿನ್‌ ಅವರ ತಂದೆ ಜೋಸೆಫ್ ಬಿನ್ನಿ ರಾಸಾಯನಿಕ ಕಾರ್ಖಾನೆಯೊಂದನ್ನು ತೆರೆದರು. 1885ರಲ್ಲಿ ಜೋಸೆಫ್ಅವರ ನಂತರ ಅವರ ಮಕ್ಕಳಾದ ಎಡ್ವಿನ್‌ ಮತ್ತು ಜೋಸೆಫ್ ಕಾರ್ಖಾನೆಯ ಉಸ್ತುವಾರಿಯನ್ನು ವಹಿಸಿಕೊಂಡರು. ಅವರು ಬಹಳ ಮಹತ್ವಾಕಾಂಕ್ಷಿಗಳಾಗಿದ್ದರು. ಅದುವರೆಗೂ ಸಂಸ್ಥೆ ಕಾರ್ಖಾನೆಗಳಿಗೆ ಬೇಕಾಗುವ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಆದರೆ ಸಹೋದರರಿಬ್ಬರಿಗೂ ತಮ್ಮ ಉದ್ಯಮವನ್ನು ವಿಸ್ತರಿಸುವ ಯೋಚನೆ ಇತ್ತು, ಯೋಜನೆಯೂ ಇತ್ತು. ಅದರ ಅಂಗವಾಗಿ ಅವರು ಶಾಲೆಗಳಲ್ಲಿ ಹಲಗೆಗಳ ಮೇಲೆ ಬರೆಯಲು ಬಳಸುವ ಧೂಳು ಉದುರದ ಚಾಕ್‌ಪೀಸ್‌ಗಳನ್ನು ತಯಾರಿಸಲು ಶುರುಮಾಡಿದರು. ಅವರ ಮುಂದಿನ ಆವಿಷ್ಕಾರ ಕ್ರೇಯಾನ್‌ ಆಗಿತ್ತು.

400 ಬಣ್ಣಗಳು
ಎಡ್ವಿನ್‌ ಹಾಗೂ ಹ್ಯಾರೋಲ್ಡ್‌ ಅವರ ಸಂಸ್ಥೆ “ಕ್ರೇಯೋಲಾ’ ಇದುವೆರಗೂ 400ಕ್ಕೂ ಅಧಿಕ ಬಣ್ಣಗಳ ಕ್ರೇಯಾನ್‌ಗಳನ್ನು ತಯಾರಿಸಿದೆ. ವಿವಿಧ ಬಗೆಯ ಸುವಾಸನೆ ಬೀರುವ, ಕತ್ತಲಲ್ಲಿ ಹೊಳೆಯುವ, ಬಟ್ಟೆಗಳಿಗೆ ಮೆತ್ತಿಕೊಳ್ಳದ ಹೀಗೆ ನಾನಾ ಗುಣವಿಶೇಷಗಳುಳ್ಳ ಕ್ರೇಯಾನ್‌ಗಳನ್ನೂ ಅವರ ಸಂಸ್ಥೆ ತಯಾರಿಸಿದೆ. ಇಂದು ನೂರಾರು ಕಂಪನಿಗಳು ಕ್ರೇಯಾನ್‌ ವ್ಯಾಪಾರದಲ್ಲಿ ತೊಡಗಿವೆ.

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.