ಅತಿಮಾನುಷ ಡಾಂಬರು ರಸ್ತೆ


Team Udayavani, May 23, 2019, 3:35 PM IST

2

ಇಳಿಜಾರಿನಲ್ಲಿ ಗೋಳಾಕಾರದ ವಸ್ತು ಕೆಳಕ್ಕೆ ಚಲಿಸುವುದು ಸಾಮಾನ್ಯ. ಆದರೆ ಕೀನ್ಯಾ ದೇಶಲ್ಲೊಂದು ಜಾಗವಿದೆ. ಅಲ್ಲಿನ ಇಳಿಜಾರಿನಲ್ಲಿ ಬಾಲ್‌ ಅಥವಾ ಯಾವುದೇ ಗೋಳಾಕಾರದ ವಸ್ತುವನ್ನು ಇಟ್ಟರೂ ಇಳಿಮುಖವಾಗಿ ಚಲಿಸದೆ ಮೇಲ್ಮುಖವಾಗಿ ಚಲಿಸುತ್ತದೆ. ವಾಹನಗಳ ಎಂಜಿನ್‌ ಆಫ್ ಮಾಡಿದಾಗ
ಇಳಿಜಾರಿನಲ್ಲಿ ಕೆಳಕ್ಕೆ ಜಾರುವ ಬದಲು ಹಿಮ್ಮುಖವಾಗಿ ಮೇಲ್ಗಡೆ ಚಲಿಸಿದ ಉದಾಹರಣೆಗಳಿವೆ.

ಪೂಜಿಸುತ್ತಿದ್ದ ಜಾಗವಾಗಿತ್ತು ಅನಾದಿ ಕಾಲದಲ್ಲಿ ಈ ಪ್ರದೇಶವನ್ನು ಕಿವುಟಿನಿ ಎಂದು ಕರೆಯಲಾಗುತ್ತಿತ್ತು. ಆಗ ಅಲ್ಲಿ ಡಾಂಬರು ರಸ್ತೆ ಇರಲಿಲ್ಲ. ಈ ವಿಸ್ಮಯವನ್ನು ಸುತ್ತಮುತ್ತಲಿನ ಹಳ್ಳಿಯ ಜನ ತಮ್ಮದೇ ಆದ ರೀತಿಯಲ್ಲಿ
ಬಣ್ಣಿಸುತ್ತಾರೆ. ಬಹಳ ವರ್ಷಗಳ ಹಿಂದೆ ಇಲ್ಲಿನವರು ಈ ಸ್ಥಳದಲ್ಲಿ ತಮ್ಮ ಪೂರ್ವಜರನ್ನು ಒಲಿಸಿಕೊಳ್ಳಲು ಬಲಿ ಕೊಡುತ್ತಿದ್ದರಂತೆ. ಬಲಿಯಿಂದ ಅವರನ್ನು ತೃಪ್ತಿಪಡಿಸಿ, ನಂತರ ಮಳೆ-ಬೆಳೆ ಕೊಡುವಂತೆ ಹಾಗೂ ದುಷ್ಟ ಶಕ್ತಿಗಳನ್ನು ನಾಶಮಾಡುವಂತೆ ಕೋರುತ್ತಿದ್ದರಂತೆ. ಬಲಿ ನೀಡಲು ಬಳಸುತ್ತಿದ್ದ ಬಲಿಪೀಠದಲ್ಲಿ ವಿಶೇಷ ಆಚರಣೆಗಳನ್ನು ನಡೆಸುತ್ತಿದ್ದುದರಿಂದ ಅದನ್ನು ಪವಿತ್ರ ಸ್ಥಳವೆಂದು ಪರಿಗಣಿಸಿ ಪೂಜಿಸುತ್ತಿದ್ದರಂತೆ.

ನಿಗೂಢ ಮನುಷ್ಯರು
ಮ್ಯುಟಿಟುನಿ ಮತ್ತು ಕಿವುಟಿನಿ ಊರುಗಳ ನಂತರ ಸಿಗುವ ಡಾಂಬರು ರಸ್ತೆಯಲ್ಲಿ ಈ ವಿಸ್ಮಯಕಾರಕ ಕಿಟುಲುನಿ ಇದೆ. ಅನೇಕ ತಿರುವುಗಳಿಂದ ಕೂಡಿರುವ, ಸುತ್ತು ಬಳಸಿನ ಈ ದುರ್ಗಮ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸಾಹಸವೇ ಸರಿ. ಬೆಟ್ಟ ಅರ್ಧ ಹತ್ತುವವರೆಗೂ ಯಾವುದೇ ರೀತಿಯ ವಿಸ್ಮಯ ಕಾಣುವುದಿಲ್ಲ. ನಂತರ ಈ ಸ್ಥಳಕ್ಕೆ ಗಾಡಿ ಬಂದ ಕೂಡಲೇ ಯಾವುದೇ ವೇಗದಲ್ಲಿ ಚಲಿಸುತ್ತಿದ್ದರೂ ಜಗ್ಗಿದಂತಾಗುತ್ತದೆ ಮತ್ತು ವೇಗ ಸೂಚಕಕ್ಕೂ ತಿಳಿಯದಂತೆ ವೇಗ ಮತ್ತೂ ಹೆಚ್ಚುತ್ತದೆ. ಈ ರಸ್ತೆ ಬಹಳ ವರ್ಷಗಳಿಂದ ಉಪಯೋಗದಲ್ಲಿದ್ದರೂ ಸಹ ಈ ವಿಸ್ಮಯಕಾರಕ ಘಟನೆ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆ ಸ್ಥಳದಲ್ಲಿ ಬಿಳಿ ನಿಲುವಂಗಿ ಧರಿಸಿದ ವಿಚಿತ್ರ ವ್ಯಕ್ತಿಗಳು ಓಡಾಡುವುದನ್ನು ಕಂಡಿರುವುದಾಗಿಯೂ, ಅವರು ಕಂಡಷ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ ಎಂಬುದಾಗಿ ಅಲ್ಲಿನ ಹಳ್ಳಿಗರು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಅದಕ್ಕೆ ಪುರಾವೆಗಳು ಸಿಕ್ಕಿಲ್ಲ.

ಅತಿಮಾನುಷ ಶಕ್ತಿಗೆ ಕಾರಣ
ಮಚಕೊಸ್ನಿಂದ ಕಲೊಲೆನಿ ಕಡೆಗೆ ರಸ್ತೆ ಸಂಪರ್ಕ ಕಲ್ಪಿಸುವಾಗ ಅದು ಈ ಬೆಟ್ಟದ ಮುಖಾಂತರ ಹಾದು ಹೋಗಬೇಕಾಗಿ ಬಂತು. ಹಾಗಾಗಿ ವಿಧಿಯಿಲ್ಲದೆ ಸ್ಥಳೀಯರು ತಾವು ನಡೆಸುತ್ತಿದ್ದ ಆಚರಣೆಯನ್ನು ಬೇರೆ ಸ್ಥಳಕ್ಕೆ ಅಂದರೆ ಬೆಟ್ಟದ ಕೆಳಕ್ಕೆ ಸ್ಥಳಾಂತರ ಮಾಡಿಕೊಂಡರಂತೆ. ನೂರಾರು ವರ್ಷಗಳ ಪೂಜೆ ಪುನಸ್ಕಾರಗಳ ಆಚರಣೆಯಿಂದ ಈ ಬಲಿ ಪೀಠವಿದ್ದ ಸ್ಥಳಕ್ಕೆ ಅತಿಮಾನುಶ ಶಕ್ತಿ ಪ್ರಾಪ್ತವಾಯಿತು. ಅದರಿಂದಾಗಿ ವಾಹನಗಳು ತಂತಾನೆ ಏರುಮುಖ
ವಾಗಿ ಚಲಿಸುವುದು ಎಂಬುದು ಹಳ್ಳಿಗರ ವ್ಯಾಖ್ಯಾನ

ಪುರುಷೋತ್ತಮ್‌

ಟಾಪ್ ನ್ಯೂಸ್

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.