ಒದ್ದೆಯಾಗದ ಮರಳು


Team Udayavani, Jan 16, 2020, 5:00 AM IST

magic-copy-copy

ಜಾದೂಗಾರರ ಬತ್ತಳಿಕೆಯಲ್ಲಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಬೇಕಾದಷ್ಟು ಪ್ರಯೋಗಗಳು ಇವೆ. ಇದರಲ್ಲಿ ಈಗ ಹೇಳುತ್ತಿರುವ ಮರಳು ಪ್ರಯೋಗವೂ ಒಂದು. ಮೊದಲು ಮರಳು ಪ್ರಯೋಗ ಪ್ರೇಕ್ಷಕರ ದೃಷ್ಟಿಯಲ್ಲಿ ಹೇಗೆ ಕಾಣುತ್ತದೆ ಅಂತ ನೋಡೋಣ.ಮೇಜಿನ ಮೇಲೆ ನೀರು ತುಂಬಿದ ಗಾಜಿನ ಜಾಡಿ ಮತ್ತು ಒಂದು ಪ್ಲೇಟಿನಲ್ಲಿ ಮರಳನ್ನು ಇಟ್ಟಿದೆ. ಜಾದೂಗಾರ ಮರಳನ್ನು ಮುಷ್ಟಿಯಲ್ಲಿ ಹಿಡಿದು ಮೇಲಿಂದ ನಿಧಾನವಾಗಿ ಪ್ಲೇಟಿನಲ್ಲಿ ಸುರಿದು ಒಣ ಮರಳೆಂದು ತೋರಿಸುತ್ತಾನೆ. ನಂತರ, ಅದನ್ನು ಪ್ರೇಕ್ಷಕರು ನೋಡುತ್ತಿದ್ದಂತೆ ಮರಳನ್ನು ಪ್ಲೇಟಿನಿಂದ ನೀರು ತುಂಬಿದ ಜಾಡಿಗೆ ನಿಧಾನವಾಗಿ ಸುರಿಯುತ್ತಾನೆ. ಅರೆ, ಮರಳು ನೀರಿನೊಂದಿಗೆ ಬೆರೆತು ಒದ್ದೆಯಾಯಿತಲ್ಲಾ ಎಂದು ಅನಿಸುತ್ತಿದ್ದಂತೆ ಜಾದೂಗಾರ ತನ್ನ ಕೈಯನ್ನು ಜಾಡಿಯಲ್ಲಿ ಮುಳುಗಿಸಿ ಮುಷ್ಟಿಯಲ್ಲಿ ಮರಳನ್ನು ಹೊರತೆಗೆದು ಎತ್ತರದಿಂದ ಪ್ಲೇಟಿನ ಮೇಲೆ ನಿಧಾನವಾಗಿ ಸುರಿಯುತ್ತಾನೆ. ಅರೆ, ಮರಳು ಸ್ವಲ್ಪವೂ ಒದ್ದೆಯಾಗದೆ ಉದುರುದುರಾಗಿರುತ್ತದೆ!

ಇದು ಕೇಳ್ಳೋಕೆ ಬಹಳ ಸುಲಭ ಅನಿಸಿಬಿಡುತ್ತದೆ. ಆದರೆ, ಈ ಮ್ಯಾಜಿಕನ್ನು ಮಾಡಬೇಕಾದರೆ ಸ್ವಲ್ಪ ಪೂರ್ವ ತಯಾರಿ ಅಗತ್ಯ. ಅಂದರೆ, ಒಂದಷ್ಟು ಸರ್ಕಸ್‌ ಮಾಡಲೇಬೇಕಾಗುತ್ತದೆ. ಅದು ಹೇಗೆಂದರೆ, ಒಂದು ಬಾಣಲೆಯಲ್ಲಿ ಸುಮಾರು ಅರ್ಧ ಕಿಲೋ ಶುದ್ಧವಾದ ಮರಳನ್ನು ಹಾಕಿ. ಮರಳು ತೀರಾ ನಯವಾಗಿರದೆ ಸ್ವಲ್ಪ ಹರಳು ಹರಳಾಗಿರಲಿ. ಬಾಣಲೆಯನ್ನು ಸ್ಟೌ ಮೇಲೆ ಇಟ್ಟು ಉಪ್ಪಿಟ್ಟಿಗೆ ರವೆಯನ್ನು ಫ್ರೈ ಮಾಡಿದಂತೆ ಮಾಡಿ. ಮರಳು ಕಾದ ನಂತರ ಇದಕ್ಕೆ ಒಂದು ಮೇಣದ ಬತ್ತಿಯನ್ನು ಚಿಕ್ಕ, ಚಿಕ್ಕ ಚೂರುಗಳನ್ನಾಗಿ ಮಾಡಿ ಹಾಕಿ. ಇನ್ನೂ ಚೆನ್ನಾಗಿ ಫ್ರೈ ಮಾಡಿ (ಮೇಣದ ಬತ್ತಿಯ ಬದಲಿಗೆ ಒಳ್ಳೆಯ ಜೇನು ಮೇಣವನ್ನೂ ಬೇಕಾದರೆ ಉಪಯೋಗಿಸಬಹುದು). ಈಗ ಮರಳಿನ ಹರಳುಗಳ ಮೇಲೆ ಮೇಣದ ತೆಳುವಾದ ಲೇಪನವಾಗುತ್ತದೆ. ನಂತರ ಮರಳನ್ನು ಆರಲು ಬಿಡಿ. ಈ ರೀತಿ ಮೇಣದ ಲೇಪನ ಆಗಿರುವ ಕಾರಣ ಮರಳು ನೀರಲ್ಲಿ ಮುಳುಗಿದರೂ ಒದ್ದೆಯಾಗುವುದಿಲ್ಲ.

ಇದೇ ಜಾದೂಗಾರ ಪ್ರೇಕ್ಷಕರ ಮುಂದೆ ಇಡುವ ವಿಸ್ಮಯ.

-ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.