ಮರುಭೂಮಿಯ ಕಣ್ಣು!


Team Udayavani, Mar 28, 2019, 6:00 AM IST

s-4

“ಗೋಡೆಗಳಿಗೆ ಕಿವಿಗಳಿರುತ್ತವೆ’ ಎಂಬ ನಾಣ್ಣುಡಿಯನ್ನು ನೀವು ಕೇಳಿರುತ್ತೀರಿ. ಇನ್ನು ಕೆಲವರು ತಮಗೆ ತಲೆಯ ಹಿಂದೆಯೂ ಕಣ್ಣಿದೆ ಎಂದು ಹೇಳುವುದನ್ನೂ ಕೇಳಿರಬಹುದು. ಜಗತ್ತಿನ ಅತಿ ದೊಡ್ಡ ಮರುಭೂಮಿ ಸಹರಾಗೂ ಒಂದು ಕಣ್ಣಿದೆ ಎಂಬ ಸಂಗತಿ ನಿಮಗೆ ಗೊತ್ತಾ? ಅದನ್ನು ಅಂತರಿಕ್ಷದಿಂದ ನೋಡಲು ಗಗನಯಾನಿಗಳು ಕಾತರದಿಂದ ಕಾಯುತ್ತಾರೆ!

ರಾತ್ರೋ ರಾತ್ರಿ ಹಸಿರು ಹೊಲ ಗದ್ದೆಗಳಲ್ಲಿ ಸೃಷ್ಟಿಯಾಗುತ್ತಿದ್ದ ನಿಗೂಢ ಕ್ರಾಪ್‌ ಸರ್ಕಲ್‌ಗ‌ಳ ಫೋಟೋಗಳನ್ನು ನೀವು ನೋಡಿರಬಹುದು. ಎಕರೆಗಟ್ಟಲೆ ಪ್ರದೇಶದಲ್ಲಿ ಸೃಷ್ಟಿಯಾಗುತ್ತಿದ್ದ ವಿವಿಧ ಆಕಾರಗಳ ಕ್ರಾಪ್‌ ಸರ್ಕಲ್‌ಅನ್ನು ಹತ್ತಿರದಿಂದ ಇಲ್ಲವೇ ನೆಲಮಟ್ಟದಿಂದ ನೋಡಲಾಗದು. ತುಂಬಾ ದೂರದಿಂದ, ಅಥವಾ ಆಕಾಶದಿಂದ ನೋಡಿದಾಗಲಷ್ಟೇ ಕ್ರಾಪ್‌ ಸರ್ಕಲ್‌ನ ಪೂರ್ಣ ಚಿತ್ರ ಕಾಣುವುದು. ಇದೇ ರೀತಿಯ ಆಕಾಶದಿಂದಲೇ ಎಲ್ಲರೂ ನೋಡಲಿಚ್ಚಿಸುವ ಪ್ರದೇಶ ಸಹರಾ ಮರುಭೂಮಿಯ ಕಣ್ಣಿನದು!

ರಚನೆ ಹೇಗಾಯ್ತು?
ಸಹರಾ ಮರುಭೂಮಿಯಲ್ಲಿ ಕಂಡುಬರುವ “ರೈಚಾಟ್‌ ಆಕೃತಿಗಳು’ ಅಂತರಿಕ್ಷದಿಂದ ನೋಡಿದಾಗ ನಮ್ಮನ್ನು ಹಿಂಬಾಲಿಸುವ ಗೂಳಿಯ ಕಣ್ಣಿನಂತೆ ಕಾಣುತ್ತವೆ. ಗಗನಯಾನಿಗಳು ಈ ಸಹರಾ ಕಣ್ಣನ್ನು ಅಂತರಿಕ್ಷದಿಂದ ನೋಡಲು ಕಾತರಿಸುತ್ತಾರೆ. ಅಲ್ಲಿಂದ ಅವರಿಗೆ ಸುಮಾರು 40ಕಿ.ಮೀ. ವ್ಯಾಸದ ಹಾರುವ ತಟ್ಟೆಯ ನಿಲ್ದಾಣದಂತೆ ನಯನ ಮನೋಹರವಾಗಿ ಕಾಣುತ್ತದೆ. ಆಫ್ರಿಕಾದ ಮೌರಿಟೇನಿಯಾ ದೇಶದಲ್ಲಿದೆ ಈ ಪ್ರದೇಶ. ಆ ಜಾಗದ ಹೆಸರು “ಔದಾನೆ’. ಇದು ಸಾವಿರ ವರ್ಷಗಳಷ್ಟು ಹಳೆಯ ಪುರಾತನ ಕಾಲದ ಸಹರಾ ವೆಸ್ಟ್‌ಲ್ಯಾಂಡ್‌ನ‌ ತುದಿಯಲ್ಲಿರುವ ಒಂದು ಪ್ರದೇಶ. ಸಹರಾ ಮರುಭೂಮಿಯ ಸಮೀಪದಲ್ಲಿರುವ ಈ ಗುಡ್ಡಗಾಡು ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖೀಯು ತಣ್ಣಗಾಗಿ ವರ್ತುಲಾಕಾರದಲ್ಲಿ ಆಕರ್ಷಕ ಕಲ್ಲಿನ ರೂಪ ತಾಳಿವೆ ಎಂದು ಹೇಳುತ್ತಾರೆ.

ಕಣ್ಣಿನ ಹುಡುಕಾಟ
ಫ್ರಾನ್ಸಿಸ್‌ ಟಪೋನ್‌ ಎಂಬ ಪ್ರವಾಸಿಯೊಬ್ಬ ಈ ಸಹರಾ ಕಣ್ಣನ್ನು ಅರಸಿ ಹೋದ ಘಟನೆ ಸ್ವಾರಸ್ಯಕರವಾದುದು. ಈತ ಅಲಿಯಾನ್‌ ಡಿ. ಅಸೋಗಿ ಎನ್ನುವ ಒಬ್ಬ ಮಾರ್ಗದರ್ಶಿಯ ಜೊತೆ ಟ್ರಕ್‌ ಒಂದರಲ್ಲಿ ಈ ಸಹರಾ ಕಣ್ಣನ್ನು ನೋಡಲು ಹೋಗುತ್ತಾನೆ. ಈ ಮಾರ್ಗದರ್ಶಿ ಅಲಿಯಾನ್‌ಗೆ ಸಹರಾ ಮರುಭೂಮಿಯಲ್ಲಿ ಸುತ್ತಾಡಿ ಸಾಕಷ್ಟು ಅನುಭವವಿರುತ್ತದೆ. ಈ ಹಿಂದೆ ಒಂದೆರಡು ಬಾರಿ ಪ್ರವಾಸಿಗರನ್ನು ಆ ಜಾಗಕ್ಕೆ ಆತ ಕರೆದೊಯ್ದಿರುತ್ತಾನೆ. ಆದರೆ ಈ ಬಾರಿ ಮಾತ್ರ ಆತನಿಗೆ ಆ ಜಾಗವನ್ನು ಪತ್ತೆ ಮಾಡಲು ಆಗಿರಲಿಲ್ಲ. ಪ್ರವಾಸಿ ಪ್ರಾನ್ಸಿಸ್‌ ಹತಾಶನಾಗಿ ಹಿಂದಿರುಗುತ್ತಾನೆ. ಫ್ರಾನ್ಸಿನ್‌ನ ಯಾತ್ರೆ ವಿಫ‌ಲವಾದರೂ ಅದೊಂದು ಅಪೂರ್ವ ಅನುಭವ ಎಂದು ದಾಖಲಿಸುತ್ತಾನೆ. ಕೆಲವಾರಗಳ ನಂತರ ಜಿಪಿಎಸ್‌ ಸಹಾಯದಿಂದ ತಾನು “ಸಹರಾ ಐ’ ಪ್ರದೇಶವನ್ನು ಗುರುತಿಸಿದ.

‘ಸಹರಾ ಐ’ ಪ್ರವಾಸ ಅತ್ಯಂತ ರೋಚಕವಾದುದು ಮತ್ತು ಅವಿಸ್ಮರಣೀಯವಾದುದು. ಬದುಕಿನ ವರ್ತುಲಗಳಲ್ಲಿ ಸಿಲುಕಿ ಬೇಸರವೆನಿಸಿದಾಗ ಇಂಥ ಅಪೂರ್ವ ಕೌತುಕಗಳು ನಮ್ಮ ಅನುಭವದ ಒಳಗಣ್ಣು ತೆರೆದೀತು!

ಮುಳುಗುವವನಿಗೆ ಹುಲ್ಲುಕಡ್ಡಿಯಾದ ಓಯೆಸಿಸ್‌
ಅಲ್ಲಿರುವ ಒಂದೇ ಒಂದು ಓಯಸಿಸ್‌ನಿಂದಾಗಿ ಸ್ಥಳೀಯರು ಒಂದಿಷ್ಟು ಖರ್ಜೂರದ ಮರಗಳನ್ನು ಬೆಳೆಯಲು ಸಾಧ್ಯವಾಗಿದೆ. ಇಲ್ಲದಿದ್ದರೆ ಇಡೀ ಪ್ರದೇಶ ಬಂಜರು ಭೂಮಿಯಾಗಿ. ಓದಾನೆ ಪ್ರದೇಶವನ್ನು ಯುನೆಸ್ಕೊ ಜಾಗತಿಕ ಪ್ರವಾಸಿ ತಾಣವನ್ನಾಗಿ ಗುರುತಿಸಿದೆ. ಹಲವು ವರ್ಷಗಳ ಹಿಂದೆ ನಾಗರಿಕತೆ ಶೈಶವಾವಸ್ಥೆಯಲ್ಲಿದ್ದಾಗ ಈ ಪ್ರದೇಶ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತಂತೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಲ್ಲಿನವರು ಅದ್ವಿತೀಯ ಸಾಧನೆ ಮಾಡಿದ ದಾಖಲೆಗಳನ್ನು ಹೊಂದಿವೆ.

ಟಿ.ಪಿ.ಶರಧಿ, ಬೆಂಗಳೂರು

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.