ಸೈತಾನನ ಪ್ರತಿನಿಧಿಯನ್ನು ಸಾಯಿಸಿದ್ದಕ್ಕೆ ಶಾಪ ಸಿಕ್ಕಿತೇ?


Team Udayavani, Oct 25, 2018, 6:00 AM IST

history1.jpg

“ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾಯಿತು’ ಎಂಬ ಮಾತನ್ನು ಕೇಳಿರುತ್ತೀರಾ. ಈ ಮಾತಿಗೆ ಅಕ್ಷರಶಃ ಸರಿಹೊಂದುವ ಘಟನೆ ಇಲ್ಲಿದೆ. 12ನೇ ಶತಮಾನದಲ್ಲಿ ರೋಮ್‌ನಲ್ಲಿ 9ನೇ ಗ್ರೆಗೊರಿ ಎಂಬಾತ ಪೋಪ್‌ ಆಗಿದ್ದ. ಆತ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು, ವಿವಾದಾತ್ಮಕ ನಿಯಮಗಳನ್ನು ಜಾರಿಗೆ ತಂದಿದ್ದ. ಪ್ರಾಚೀನ ಕಾಲದಲ್ಲಿ ಗುರು ಎಂದರೆ ದೇವರಿಗೆ ಸಮಾನ. ದೇವರೇ ಆತನ ಮೂಲಕ ಆಜ್ಞೆ ನೀಡುತ್ತಿದ್ದಾನೆ ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬೇರೂರಿತ್ತು. ಹೀಗಾಗಿ ಯಾರೊಬ್ಬರೂ ಆತನ ಮಾತನ್ನು ವಿರೋಧಿಸಲು ಹೋಗುತ್ತಿರಲಿಲ್ಲ. ದೇವರ ಆಜ್ಞೆಯನ್ನು ವಿರೋಧಿಸಿದರೆ ನರಕಕ್ಕೆ ಹೋಗುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಅವನ ಅನೇಕ ನಿಯಮಗಳಲ್ಲಿ ಇಂದಿಗೂ ನೆನಪಿಸಿಕೊಳ್ಳುವುದು ಬೆಕ್ಕನ್ನು ಸಾಯಿಸಬೇಕೆಂಬ ನಿಯಮ. ಗ್ರೆಗೊರಿಗೆ ಬೆಕ್ಕನ್ನು ಕಂಡರೆ ಆಗುತ್ತಿರಲಿಲ್ಲ. ಬೆಕ್ಕು ಸೈತಾನನ ಪ್ರತಿನಿಧಿ ಎನ್ನುವುದು ಆತನ ಅಭಿಪ್ರಾಯವಾಗಿತ್ತು! ಇಂತಿಪ್ಪ ಗ್ರೆಗೊರಿ, 1241ರಂದು ಮರಣ ಹೊಂದಿದ. 

ಮುಂದೆ,13 ಶತಮಾನದ ಆದಿಯಲ್ಲಿ ಪ್ರಪಂಚ “ಬ್ಲ್ಯಾಕ್‌ ಪ್ಲೇಗ್‌’ ಖಾಯಿಲೆಯಿಂದ ತತ್ತರಿಸಿ ಹೋಯಿತು. ಯುರೋಪಿನಲ್ಲೂ ಮನುಷ್ಯರು ಹುಳುಗಳಂತೆ ತುಪತುಪನೆ ಪ್ರಾಣ ಕಳೆದುಕೊಂಡರು. ಏನಿಲ್ಲವೆಂದರೂ 20 ಕೋಟಿ ಜನರನ್ನು ಈ ಸಾಂಕ್ರಾಮಿಕ ಖಾಯಿಲೆ ಬಲಿ ತೆಗೆದುಕೊಂಡಿರಬಹುದೆಂದು ಇತಿಹಾಸತಜ್ಞರು ಅಂದಾಜಿಸುತ್ತಾರೆ. ಪ್ಲೇಗ್‌ ಖಾಯಿಲೆ ಇಲಿಗಳಿಂದ ಹರಡುತ್ತದೆ ಎನ್ನುವುದು ನಿಮಗೆ ಗೊತ್ತೇ ಇರುತ್ತದೆ. 9ನೇ ಗ್ರೆಗೊರಿ ಬೆಕ್ಕುಗಳನ್ನು ಸಾಯಿಸಿದ್ದಕ್ಕೂ, ಯುರೋಪಿನಲ್ಲಿ ಪ್ಲೇಗ್‌ ಮಾರಿ ಹಬ್ಬಿದ್ದಕ್ಕೂ ನೇರ ಸಂಬಂಧ  ಇಲ್ಲ. ಆದರೆ ಅವೆರಡೂ ಘಟನೆಗಳಿಗೆ ಸಂಬಂಧ ಕಲ್ಪಿಸುವ ಜನರು, ಬೆಕ್ಕುಗಳು ಸೈತಾನನ ಪ್ರತಿನಿಧಿಯಲ್ಲ. ಅವನ್ನು ಸಾಯಿಸಿದ್ದಕ್ಕೇ ಶಾಪದ ರೂಪದಲ್ಲಿ ಪ್ಲೇಗ್‌ ಬಂದಿದ್ದು. ಬೆಕ್ಕುಗಳಿದ್ದಿದ್ದರೆ ಪ್ಲೇಗ್‌ ಖಾಯಿಲೆ ಸ್ವಲ್ಪವಾದರೂ ನಿಯಂತ್ರಣಕ್ಕೆ ಬರುತ್ತಿತ್ತು ಎಂದು ಮಾತಾಡಿಕೊಂಡರು. ಏನೇ ಇದ್ದರೂ ಬೆಕ್ಕುಗಳಿದ್ದಿದ್ದರೆ, ಇಲಿಗಳನ್ನು ಮುಗಿಸಿ ಪ್ಲೇಗ್‌ ಹಾನಿಯನ್ನು ತಗ್ಗಿಸುತ್ತಿತ್ತು ಎಂಬ ಮಾತನ್ನು ಅಲ್ಲಗಳೆಯಲಾಗದು. ಇವೆರಡೂ ಘಟನೆಗಳು ಇತಿಹಾಸದ ಅಚ್ಚರಿಯ ತುಣುಕುಗಳಾಗಿ ಉಳಿದುಕೊಂಡಿವೆ. 

– ಹವನ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.