2,200 ವರ್ಷಗಳ ಹಿಂದೆ ಭೂಮಿಯ ಸುತ್ತಳತೆ ಪತ್ತೆ!


Team Udayavani, Oct 31, 2019, 4:27 AM IST

e-4

ಉಪಗ್ರಹ, ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಕಾಲದಲ್ಲಿ ಭೂಮಿಯ ಸುತ್ತಳತೆಯನ್ನು ಮನುಷ್ಯ ಪತ್ತೆ ಹಚ್ಚಿದ್ದು ಅಚ್ಚರಿಯೇ ಸರಿ. ಅದಕ್ಕೆ ಕಾರಣ ಗಣಿತಜ್ಞರು. ಅಂಕೆ- ಸಂಖ್ಯೆಗಳ ಸಹಾಯದಿಂದ ಕುಳಿತಲ್ಲೇ ಅವರು ಭೂಮಿಯ ಸುತ್ತಳತೆ ಪತ್ತೆ ಹಚ್ಚಲು ಅವರ ಜ್ಞಾನವಷ್ಟೇ ಅಲ್ಲ, ಸೂಕ್ಷ್ಮಪ್ರಜ್ಞೆಯೂ ಕಾರಣವಾಗಿದೆ. 2,200 ವರ್ಷಗಳ ಹಿಂದೆ ಜೀವಿಸಿದ್ದ ಗಣಿತಜ್ಞ ಎರಾಟೋಸ್ತೀನಿಸ್‌. ಒಮ್ಮೆ ಅವನ ಕಿವಿಗೆ ಸುದ್ದಿಯೊಂದು ಬೀಳುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಿರುತ್ತಾನೆ ಹೀಗಾಗಿ ನೆರಳು ನೆಲದ ಮೇಲೆ ಚಾಚುವುದಿಲ್ಲ, ಕಾಲ ಬಳಿಯಲ್ಲೇ ಉಡುಗಿಹೋಗುತ್ತದೆ. ಆದೇ ಸಂಜೆ ನಮ್ಮ ನೆರಳು ಉದ್ದಕ್ಕೆ ಚಾಚುತ್ತದೆ. ಆದರೆ, ಗ್ರೀಸ್‌ ದೇಶದ ಸೈಯೀನ್‌ ನಗರದಲ್ಲಿ ಸಂಜೆಯ ಹೊತ್ತು ನೆರಳು ನೆಲದಲ್ಲಿ ಉದ್ದಕ್ಕೆ ಚಾಚುವುದಿಲ್ಲ ಎನ್ನುವ ಸುದ್ದಿ ಅವನಲ್ಲಿ ಅಚ್ಚರಿ ಮೂಡಿಸುತ್ತದೆ. ಅವನು ಅಲ್ಲಿಗೆ ತೆರಳಿ ನೆಲದಲ್ಲಿ ಕಡ್ಡಿಯನ್ನು ನೆಟ್ಟು ಅದು ನಿಜವೆಂದು ತಿಳಿದುಕೊಳ್ಳುತ್ತಾನೆ. ನಂತರ ಆ ಜಾಗದಿಂದ ಸುಮಾರು 800 ಕಿ.ಮೀ ದೂರವಿದ್ದ ಅಲೆಕ್ಸಾಂಡ್ರಿಯಾ ನಗರದಲ್ಲಿ ಕಡ್ಡಿ ನೆಟ್ಟು ಪರೀಕ್ಷಿಸಿದಾಗ ಅಲ್ಲಿ ಅದರ ನೆರಳು ಸ್ವಲ್ಪವೇ ಸ್ವಲ್ಪ ಚಾಚಿದ್ದು ಕಂಡುಬಂದಿತ್ತು. ಅದನ್ನು ಅಧ್ಯಯನಕ್ಕೊಳಪಡಿಸಿದಾಗ 7.2 ಡಿಗ್ರಿಯಷ್ಟು ವ್ಯತ್ಯಾಸ ದೊರಕಿತ್ತು. ಅದಕ್ಕೆ ಹಿಂದೆಯೇ ಭೂಮಿ ಗುಂಡಗಿದೆ ಎಂದು ಅರಿಸ್ಟಾಟಲ್‌ ಮತ್ತು ಪೈಥಾಗೋರಸ್‌ ಮತ್ತಿತರ ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಹೀಗಾಗಿ ಎರಾಟೋಸ್ತೀನಿಸ್‌ಗೆ ಭೂಮಿ ಗುಂಡಗಿದೆ ಎನ್ನುವುದರಲ್ಲಿ ಅನುಮಾನವಿರಲಿಲ್ಲ. ಈಗ ಲೆಕ್ಕಕ್ಕೆ ಬರೋಣ. ಒಂದು ವೃತ್ತವೆಂದರೆ 360 ಡಿಗ್ರೀ. 7.2 ಡಿಗ್ರಿ ಎಂದರೆ ವೃತ್ತದ 50 ಪಟ್ಟು ಚಿಕ್ಕ ಭಾಗ. ಅದು ಎರಡು ಪಟ್ಟಣಗಳ ನಡುವಿನ ವ್ಯತ್ಯಾಸ (800 ಕಿ.ಮೀ). ಅದರ ಸಹಾಯದಿಂದ ಭೂಮಿಯ ಸುತ್ತಳತೆ 40,000 ಕಿ.ಮೀ ಎನ್ನುವುದನ್ನು ಎರಾಟೋಸ್ತೀನಿಸ್‌ ಕಂಡುಹಿಡಿದ.

ಇದಾಗಿ ಸುಮಾರು 2,200 ವರ್ಷಗಳ ನಂತರ ಉಪಗ್ರಹದ ಸಹಾಯದಿಂದ ಭೂಮಿಯ ಸುತ್ತಳತೆ 40,075 ಕಿ.ಮೀ ಎಂದು ನಿಖರವಾಗಿ ಪತ್ತೆ ಹಚ್ಚಲಾಯಿತು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.