ಊರುಗೋಲಿನ ರಹಸ್ಯ


Team Udayavani, Jan 3, 2019, 12:30 AM IST

x-38.jpg

“ನಾನು ಹಿಂದಿರುಗುವವರೆಗೆ ಜೋಪಾನವಾಗಿಟ್ಟಿರು ಎಂದು ಹೇಳಿ ಗೆಳೆಯನಿಗೆ ಇಪ್ಪತ್ತು ಚಿನ್ನದ ವರಹಗಳನ್ನು ಕೊಟ್ಟಿದ್ದೆ. ಈಗ ಕೇಳಿದರೆ, ನಾನು ಏನನ್ನೂ ಕೊಟ್ಟಿರಲಿಲ್ಲವೆಂದು ವಾದಿಸುತ್ತಿದ್ದಾನೆ, ದಯಮಾಡಿ ನನಗೆ ನ್ಯಾಯ ದೊರಕಿಸಿಕೊಡಿ’ ಎಂದು ಚೂಪು ಗಡ್ಡದವ ವಾದಿಸಿದ. 

 ಬಹಳ ಕಾಲದ ಹಿಂದೆ ಜಪಾನ್‌ ದೇಶದ ಹಳ್ಳಿಯೊಂದರಲ್ಲಿ ಸ್ಯಾಂಚೋ ಪಾಂಜ ಎಂಬ ನ್ಯಾಯವಾದಿ ಇದ್ದ. ಅವನು ಬಹಳ ಬುದ್ಧಿವಂತನೂ, ವಿವೇಕಿಯೂ ಆಗಿದ್ದ. ಹಳ್ಳಿಯ ಜನರ ಸಮಸ್ಯೆಗಳನ್ನು ಜಾಣತನದಿಂದ ಪರಿಹರಿಸುತ್ತಿದ್ದ. ಅವನಿಗೆ ಹಣದಾಸೆ ಇರಲಿಲ್ಲ. ಆದ್ದರಿಂದ ತನ್ನ ಬಳಿಗೆ ಬರುವವರು ಶ್ರೀಮಂತರೋ, ಬಡವರೋ ಎಂದು ನೋಡದೆ, ಪ್ರಾಮಾಣಿಕವಾಗಿ ನ್ಯಾಯ ತೀರ್ಮಾನ ಮಾಡುತ್ತಿದ್ದ. ಆದ್ದರಿಂದ ಹಳ್ಳಿಯ ಜನರಿಗೆ ಅವನ ಬಗ್ಗೆ ಅಪಾರವಾದ ಗೌರವವಿತ್ತು. 

ಒಮ್ಮೆ ಸ್ಯಾಂಚೋ ಪಾಂಜ ತನ್ನ ಮನೆಯ ಜಗುಲಿಯಲ್ಲಿ ಕುಳಿತು ಹಳ್ಳಿಯವರ ಕಷ್ಟ ಸುಖ ವಿಚಾರಿಸುತ್ತಿದ್ದ. ಆ ಸಮಯದಲ್ಲಿ ಇಬ್ಬರು ಮುದುಕರು ನ್ಯಾಯ ತೀರ್ಮಾನಕ್ಕಾಗಿ ಬಂದರು. ಅವರಲ್ಲೊಬ್ಬ ಎತ್ತರವಾಗಿದ್ದು ಸಣ್ಣಕ್ಕಿದ್ದ. ಅವನಿಗೆ ಚೂಪಾದ ಗಡ್ಡವಿತ್ತು. ಮತ್ತೂಬ್ಬ ಕುಳ್ಳಕ್ಕಿದ್ದು, ತನಗಿಂತ ಉದ್ದನೆಯ ಊರುಗೋಲನ್ನು ಹಿಡಿದಿದ್ದ. ಸ್ಯಾಂಚೋ ಪಾಂಜ ಅವರ ಸಮಸ್ಯೆ ಏನೆಂದು ಕೇಳಿದ. ಆಗ ಚೂಪು ಗಡ್ಡದವನು “ಮಹಾಸ್ವಾು, ಈತ ನನ್ನ ಗೆಳೆಯ, ಮೂರು ತಿಂಗಳ ಹಿಂದೆ ನಾನು ಪರಸ್ಥಳಕ್ಕೆ ಹೋಗಬೇಕಾಯಿತು. ಆಗ ಈ ನನ್ನ ಗೆಳೆಯನಿಗೆ ನಾನು ಹಿಂದಿರುಗುವವರೆಗೆ ಜೋಪಾನವಾಗಿಟ್ಟಿರು ಎಂದು ಹೇಳಿ ಇಪ್ಪತ್ತು ಚಿನ್ನದ ವರಹಗಳನ್ನು ಕೊಟ್ಟಿದ್ದೆ. ಈಗ ಕೇಳಿದರೆ, ನಾನು ಏನನ್ನೂ ಕೊಟ್ಟಿರಲಿಲ್ಲವೆಂದು ವಾದಿಸುತ್ತಿದ್ದಾನೆ, ದಯಮಾಡಿ ನನಗೆ ನ್ಯಾಯ ದೊರಕಿಸಿಕೊಡಿ’ ಎಂದು ಬೇಡಿದ. ಅವನ ಮಾತು ಮುಗಿಯುತ್ತಿದ್ದಂತೆ ಊರುಗೋಲಿನವನು ಮುಂದೆ ಬಂದ. “ಮಹಾಸ್ವಾಮಿ, ಈ ನನ್ನ ಗೆಳೆಯ ನನಗೆ ಚಿನ್ನದ ವರಹಗಳನ್ನು ತೋರಿಸಿದ್ದು ನಿಜ. ಆದರೆ ಅವುಗಳನ್ನು ನನಗೆ ಕೊಡದೆ, ದಾರಿಯ ಖರ್ಚಿಗಾಗುತ್ತದೆ ಎಂದು ತಾನೇ ಇಟ್ಟುಕೊಂಡ’ ಎಂದು ಹೇಳಿದ. 

ಸ್ಯಾಂಚೋ ಪಾಂಜ ಅವನನ್ನೇ ಕೊಂಚ ಹೊತ್ತು ದಿಟ್ಟಿಸಿ ನೋಡಿ, “ಚಿನ್ನದ ವರಹಗಳು, ಅವುಗಳ ಯಜಮಾನನ ಬಳಿಯೇ ಇವೆ’ ಎಂದು ಪ್ರಮಾಣ ಮಾಡಲು ಹೇಳಿದ. ಅದಕ್ಕೆ ಒಪ್ಪಿದ ಆ ಮುದುಕ ತನ್ನ ಬಳಿ ಇದ್ದ ಊರುಗೋಲನ್ನು ಗೆಳೆಯನ ಕೈಗೆ ವರ್ಗಾಯಿಸಿ, “ಚಿನ್ನದ ವರಹಗಳು ಗೆಳೆಯನ ಬಳಿಯೇ ಇವೆ’ ಎಂದು ಪ್ರಮಾಣ ಮಾಡಿದ. ಅವನ ವರ್ತನೆಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಯಾಂಚೋ ಪಾಂಜಾನ ತುಟಿಗಳಲ್ಲಿ ಮುಗುಳ್ನಗೆ ಸುಳಿಯಿತು. ತನ್ನ ಸುತ್ತಲೂ ನೆರೆದಿದ್ದ ಜನರಲ್ಲಿ ಒಬ್ಬನನ್ನು ಕರೆದು ಊರುಗೋಲನ್ನು ಮುರಿಯಲು ಹೇಳಿದ. ಅದು ಎರಡು ತುಂಡಾಗುತ್ತಿದ್ದಂತೆ, ಅದರ ಒಳಗೆ ಅಡಗಿಸಿಟ್ಟಿದ್ದ ಚಿನ್ನದ ವರಹಗಳು ಝಣ ಝಣ ಸದ್ದಿನೊಡನೆ ಕೆಳಕ್ಕೆ ಬಿದ್ದವು. ಈ ವಿದ್ಯಮಾನವನ್ನು ನೋಡಿ ಅಲ್ಲಿದ್ದವರೆಲ್ಲ ಮೂಕವಿಸ್ಮಿತರಾದರು. ಊರುಗೋಲನ್ನು ಹಿಡಿದಿದ್ದ ಮುದುಕ ನಾಚಿಕೆ, ಅವಮಾನಗಳಿಂದ ತಲೆ ತಗ್ಗಿಸಿದ. ಅವನು ತನ್ನ ಗೆಳೆಯನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ದಂಡವಾಗಿ ಸ್ಯಾಂಚೋ ಪಾಂಜ ಅವನಿಗೆ ಇಪ್ಪತ್ತು ಪೆಟ್ಟುಗಳನ್ನು ಕೊಡುವಂತೆ ಆಜ್ಞಾಪಿಸಿದ. ಅಷ್ಟರಲ್ಲಿ ಅವನ ಗೆಳೆಯ ಅಡ್ಡ ಬಂದ. “ಮಹಾಸ್ವಾಮಿ, ನನ್ನ ಹಣ ನನಗೆ ದೊರಕಿದೆ, ದಯವಿಟ್ಟು ನನ್ನ ಗೆಳೆಯನನ್ನು ಕ್ಷಮಿಸಿಬಿಡಿ, ಅವನನ್ನು ದಂಡಿಸಬೇಡಿ’ ಎಂದು ಕೇಳಿಕೊಂಡ. ಸ್ಯಾಂಚೋ ಇಬ್ಬರನ್ನೂ ಬೀಳ್ಕೊಟ್ಟ. ಜನರು ಸ್ಯಾಂಚೋ ಪಾಂಜಾನ ಬುದ್ಧಿವಂತಿಕೆಯನ್ನು ಹೊಗಳುತ್ತ ಅಲ್ಲಿಂದ ಚದುರಿದರು.       

ಪದ್ಮಜಾ ಸುಂದರೇಶ್‌

ಟಾಪ್ ನ್ಯೂಸ್

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.