ಎಕ್ಸ್‌-ರೇ ಹಣೆಯಲ್ಲಿ ಭವಿಷ್ಯ


Team Udayavani, Nov 7, 2019, 3:19 AM IST

qq-1

ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್‌ ಇದು.

ಪ್ರದರ್ಶನ:
ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು ಖಾಲಿ ಕವರನ್ನು ಕೊಟ್ಟು ಯಾವುದಾದರೂ ಪ್ರಶ್ನೆಯನ್ನು ಬರೆದು ಚೀಟಿಯನ್ನು ಮಡಚಿ ಕವರಿನಲ್ಲಿ ಇಡಲು ಹೇಳುತ್ತಾನೆ. ಅವನು ಚೀಟಿ ನೋಡದೆಯೇ ಆ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಾನೆ.

ತಂತ್ರ:
ಈ ಹತ್ತು ಮಂದಿಯಲ್ಲಿ ಒಬ್ಟಾತ ನಿಮ್ಮ ಸಹಾಯಕನೇ ಆಗಿರಬೇಕು (ಇದು ನಿಮ್ಮ ಪ್ರೇಕ್ಷಕರಾರಿಗೂ ಗೊತ್ತಾಗಬಾರದು) ಮತ್ತು ಆತ ಬರೆಯುವ ಪ್ರಶ್ನೆಯನ್ನು ನೀವು ಮೊದಲೇ ತಿಳಿದಿರಬೇಕು. ಉದಾಹರಣೆಗೆ ಆತನ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಎಂದಿಟ್ಟುಕೊಳ್ಳಿ. ನೀವು ಪ್ರೇಕ್ಷಕರಿಂದ ಕವರುಗಳನ್ನು ಸಂಗ್ರಹಿಸುವಾಗ ನಿಮ್ಮ ಸಹಾಯಕನ ಕವರನ್ನು ಕೆಳಗಡೆ ಇಟ್ಟು ಉಳಿದವನ್ನು ಅದರ ಮೇಲೆ ಜೋಡಿಸಬೇಕು. ನೀವು ಸ್ಟೇಜಿನ ಮೇಲೆ ಬಂದು ಎಲ್ಲಾ ಕವರುಗಳನ್ನು ಮೇಜಿನ ಮೇಲೆ ಇಡಿ. ಈಗ ನಿಮ್ಮ ಸಹಾಯಕನ ಕವರು ಕೆಳಗಡೆ ಇರುತ್ತದೆ. ಮೇಲಿನ ಕವರನ್ನು ತೆಗೆದು ನಿಮ್ಮ ಹಣೆಯ ಹತ್ತಿರ ಹಿಡಿಯಿರಿ. ಧ್ಯಾನ ಮಾಡುತ್ತಿರುವವರಂತೆ ನಟಿಸಿ, ಇದರ ಒಳಗೆ ಇರುವ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಅಂತ ನಿಮ್ಮ ಸಹಾಯಕ ಬರೆದಿಟ್ಟ ಪ್ರಶ್ನೆಯನ್ನು ಹೇಳಿ ಕವರಿನ ಒಳಗಿರುವ ಚೀಟಿಯನ್ನು ನೋಡಿ “ಯೆಸ್‌, ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು?’ ಅಂತ ಹೇಳುತ್ತಾ ಚೀಟಿಯನ್ನು ಕವರಿನ ಒಳಗೆ ಹಾಕಿ ಕಿಸೆಗೆ ಹಾಕಿಕೊಳ್ಳಿ. ನಿಮ್ಮ ಸಹಾಯಕ ಎದ್ದು ನಿಲ್ಲುತ್ತಾನೆ. “ಅವನು ಚೆನ್ನಾಗಿ ಓದಿದ್ರೆ ಪಾಸ್‌ ಆಗೋದು ಗ್ಯಾರೆಂಟಿ’ ಅಂತ ತಮಾಷೆಯ ಉತ್ತರ ಕೊಟ್ಟು ಎರಡನೆಯ ಕವರನ್ನು ನಿಮ್ಮ ಹಣೆ ಹತ್ತಿರ ಇಟ್ಟು ಮೊದಲು ಮಾಡಿದಂತೆಯೇ ನಟನೆಯನ್ನು ಮಾಡುತ್ತಾ ಮೊದಲನೇ ಕವರಿನ ಚೀಟಿಯಲ್ಲಿ ನೀವು ನೋಡಿದ ಪ್ರಶ್ನೆಯನ್ನು ಓದಿ ಹೇಳಿ. ನಂತರ ಆ ಕವರಿನ ಚೀಟಿಯನ್ನು ನೋಡಿ ಯೆಸ್‌ ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು ಅಂತ ಹೇಳಿ ನಿಮಗೆ ತೋಚಿದ ಯಾವುದಾದರೂ ಗಮ್ಮತ್ತಿನ ಉತ್ತರವನ್ನು ಕೊಡಿ. ಅಂದರೆ ಪ್ರತಿ ಬಾರಿಯೂ ಹಣೆಯ ಹತ್ತಿರ ಕವರನ್ನು ಇಟ್ಟು ಉತ್ತರ ಹೇಳುವಾಗ ಹಿಂದಿನ ಕವರಿನಲ್ಲಿದ್ದ ಚೀಟಿಯ ಪ್ರಶ್ನೆಯನ್ನು ಹೇಳಬೇಕು. ಕೊನೆಯ ಕವರು ಅಂದರೆ ನಿಮ್ಮ ಸಹಾಯಕನ ಕವರಿನಲ್ಲಿರುವ ಪ್ರಶ್ನೆಯನ್ನು ಹೇಳುವಾಗ ಅದರ ಹಿಂದಿನ, ಅಂದರೆ ಒಂಭತ್ತನೇ ಕವರಿನ ಚೀಟಿಯಲ್ಲಿದ್ದ ಪ್ರಶ್ನೆಯನ್ನು ಹೇಳಬೇಕು. ನೀವು ಮಾತಿನಲ್ಲಿ ಜಾಣರಾದರೆ ತಮಾಷೆಯ ಉತ್ತರಗಳನ್ನು ಕೊಡುತ್ತಾ ಪ್ರೇಕ್ಷಕರನ್ನು ಅಚ್ಚರಿಯ ಜತೆಗೆ ನಗೆಗಡಲಲ್ಲಿ ತೇಲಿಸಬಹುದು.

– ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.