ಗಾದೆ ಪುರಾಣ
Team Udayavani, Jul 25, 2019, 4:56 AM IST
1. ಒಣ ಶುಂಠಿಗಿಂತ ಉತ್ತಮ ಔಷಧವಿಲ್ಲ, ಸುಬ್ರಹ್ಮಣ್ಯನಿಗಿಂತ ದೊಡ್ಡ ದೇವರಿಲ್ಲ
ಪ್ರಾಚೀನ ವೈದ್ಯ ಪದ್ಧತಿಯಲ್ಲಿ ಒಣ ಶುಂಠಿ ಪ್ರಮುಖವಾದುದು. ಆದಿ ದಂಪತಿ ಶಿವ ಪಾರ್ವತಿಯರ ಎರಡನೆಯ ಮಗ ಸುಬ್ರಹ್ಮಣ್ಯ, ತನ್ನ ತಂದೆಗೆ ಓಂಕಾರದ ಮಹತ್ವವನ್ನು ತಿಳಿಸಿದನಂತೆ. ಆದ್ದರಿಂದ ಈತ ದೊಡ್ಡ ದೇವರು. ಈ ಗಾದೆ ಹಳೆಯದಾದರೂ ಮನನಯೋಗ್ಯವಾದುದು.
2. ನಾಯಿ ಬೊಗಳಿದರೆ ದೇವಲೋಕ ಹಾಳೇ?
ಮಾಡಿದ ಕೆಲಸವನ್ನು ಉತ್ತೇಜಿಸಿದರೆ, ಇನ್ನೂ ಉತ್ತಮ ಕೆಲಸವಾಗುವುದು ಸಾಧ್ಯ. ಮಾಡಿದ ಕೆಲಸವನ್ನು ಕಡೆಗಣಿಸಿ, ಹಾಸ್ಯ ಮಾಡಿದರೆ ಉತ್ಸಾಹ ಬತ್ತಿ ಹೋಗುತ್ತದೆ. ಅನವಶ್ಯಕವಾದ ಟೀಕೆಗಳಿಗೆ ಕಿವಿಗೊಡದೆ ಸಾಧನೆಯಲ್ಲಿ ಮಗ್ನರಾಗಿ ಎನ್ನುತ್ತದೆ ಈ ಗಾದೆ.
3. ಮಾತು ಬಲ್ಲವ ಮಾಣಿಕ್ಯ ತಂದ, ಮಾತು ಬಾರದವ ಜಗಳ ತಂದ
ಮಾತು ಮುತ್ತು ಮಾಣಿಕ್ಯದಂತಿರಬೇಕು. ಅತಿಯಾದ ಮಾತು, ಅತಿಯಾದ ಸಲುಗೆ ವಿರಸಕ್ಕೆ ನಾಂದಿ. ಆಡಿದ ಮಾತು ಅಪಾರ್ಥ ಕಲ್ಪಿಸಿದರೆ, ಅದಕ್ಕೆ ಮಾತಿನಷ್ಟೇ ಕಾರಣ ಮಾತನಾಡಿದವರು. ಊಟದಲ್ಲಿ ಮಿತವೇ ಹೇಗೆ ಹಿತವೋ, ಮಾತಿನಲ್ಲಿಯೂ ಮಿತವೇ ಹಿತ. ಸಂಬಂಧವಿಲ್ಲದ್ದನ್ನು ಮಾತನಾಡಿ ಸಂಬಂಧಗಳನ್ನು ಕೆಡಿಸಿಕೊಳ್ಳಬಾರದು.
4. ಅಟ್ಟಕ್ಕೆ ಹಾರದವನು ಬೆಟ್ಟ ಹತ್ತಿಯಾನೇ?
ಅಕ್ಕಿಯಲ್ಲಿನ ಕಲ್ಲನ್ನು ಆರಿಸುವುದು ಕಷ್ಟದ ಕೆಲಸವೂ ಅಲ್ಲ, ಕುಶಲ ಕಲೆಯೂ ಅಲ್ಲ. ಇಂಥ ಸಣ್ಣ ಕೆಲಸಕ್ಕೆ ಬಗ್ಗದವನು, ಶ್ರಮ ವಹಿಸಿ ತುರ್ತು ಕೆಲಸವನ್ನು ಮಾಡಿಯಾನೇ? ದಾರಿಯಲ್ಲಿ ಅಪಘಾತವಾದಾಗ ಅಥವಾ ಗೃಹಕೃತ್ಯಕ್ಕೆ ಸಂಬಂಧಿಸಿದ ತುರ್ತು ಕೆಲಸಕ್ಕೆ ಮುಂದೆ ಬಿದ್ದು ಮಾಡಬೇಕಾದ್ದು ನಾಗರಿಕರ ಕರ್ತವ್ಯ.
ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ