ದೇವತೆ ನೀಡಿದ ವರಗಳು


Team Udayavani, Jan 16, 2020, 5:45 AM IST

GOD

ಒಂದು ಊರಲ್ಲಿ ಒಬ್ಬ ಹುಡುಗನಿದ್ದ. ಚಿಕ್ಕಂದಿನಲ್ಲೇ ಒಳ್ಳೆಯ ಗುಣ ಬೆಳೆಸಿಕೊಂಡಿದ್ದ. ತನಗೆ ಏನಾದರೂ ಸಿಕ್ಕಿದರೆ ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸು ಅವನದು. ಒಂದು ಸಲ ಈ ಹುಡುಗ ದಾರಿಯಲ್ಲಿ ಹೋಗುತ್ತಿದ್ದಾಗ ಮರದ ಮೇಲಿದ್ದ ಹಕ್ಕಿಯೊಂದು ಆರ್ತನಾದ ಮಾಡುವುದು ಕೇಳಿಸಿತು. ಏನೆಂದು ನೋಡಿದರೆ ಗೂಡಿನಲ್ಲಿದ್ದ ಅದರ ಮರಿ ಕೆಳಗೆ ಬಿದ್ದು ಮೇಲೆ ಹೋಗಲಾರದೆ ಒದ್ದಾಡುತ್ತಿತ್ತು. ಹುಡುಗ ಕನಿಕರದಿಂದ ಮರಿಯನ್ನು ಹೂವಿನಂತೆ ಎತ್ತಿ ಮರದ ಮೇಲಿದ್ದ ಗೂಡಿಗೆ ಸೇರಿಸಿ ಬಂದ.

ಆಕಾಶದಲ್ಲಿ ಸಾಗುತ್ತಿದ್ದ ದೇವತೆಯೊಬ್ಬಳು ಹುಡುಗನ ದಯಾಗುಣವನ್ನು ನೋಡಿ ಮೆಚ್ಚಿಕೊಂಡಳು. ಆಕಾಶದಿಂದಲೇ ಅವನನ್ನು ಕರೆದು, “ನಿನ್ನ ಕರುಣೆ ಕಂಡು ಆನಂದವಾಗಿದೆ. ಇದೋ ನಿನಗೊಂದು ದನವನ್ನು ಕೊಡುತ್ತೇನೆ. ಇದರ ಕೆಚ್ಚಲಿನಿಂದ ಹಾಲಲ್ಲ, ಬಂಗಾರದ ನಾಣ್ಯಗಳು ಬರುತ್ತವೆ’ ಎಂದಳು. “ನನ್ನ ನೆರೆಮನೆಯಲ್ಲಿ ಒಬ್ಬ ಕಡು ಬಡವನಿದ್ದಾನೆ. ಇದನ್ನು ಅವನಿಗೆ ಕೊಟ್ಟರೆ ಹಾಲು ಮಾರಾಟದಿಂದ ಜೀವನ ನಡೆಸಲು ಸುಲಭವಾಗುತ್ತದೆ. ದನವನ್ನು ಅವನಿಗೇ ಕೊಡಿ’ ಎಂದ ಹುಡುಗ.

ದೇವತೆ, “ನಿನ್ನ ಈ ಪರೋಪಕಾರೀ ಗುಣದಿಂದಾಗಿ ಸ್ವರ್ಗದ ಒಂದು ಮೆಟ್ಟಿಲನ್ನು ಏರಿದ್ದೀಯಾ. ತಗೋ ನಿನಗೆ ಹಾರುವ ಚಪ್ಪಲಿಯನ್ನು ಕೊಡುತ್ತಿದ್ದೇನೆ. ಇದನ್ನು ಮೆಟ್ಟಿದರೆ ಆಕಾಶದಲ್ಲಿ ಹಾರುತ್ತಾ ಬೇಕಾದಲ್ಲಿಗೆ ಹೋಗಬಹುದು’ ಎಂದಳು. ಹುಡುಗ ಅದನ್ನು ಒಬ್ಬ ಹೆಳವನಿಗೆ ಕೊಡಿಸಿದ. ಹೀಗೆ ದೇವತೆ ಕರುಣಿಸಿದ ಹಲವು ಅಮೂಲ್ಯ ವಸ್ತುಗಳನ್ನು ಬೇರೆಯವರಿಗೆ ಕೊಡಿಸುವಾಗ ಅವನು ಒಂದೊಂದಾಗಿ ಸ್ವರ್ಗದ ಮೆಟ್ಟಿಲನ್ನು ಹತ್ತುತ್ತ ದೇವತೆಯ ಬಳಿಗೆ ತಲಪಬೇಕಿತ್ತು. ಆದರೆ ಅವನಿನ್ನೂ ನಿಂತಲ್ಲೇ ನಿಂತಿದ್ದ. ದೇವತೆ ಅಸಹನೆಯಿಂದ, “ನಿನ್ನ ಊರಿನ ಪ್ರತಿಯೊಬ್ಬನಿಗೂ ನಿನ್ನ ಸಲುವಾಗಿ ಒಳ್ಳೆಯ ವಸ್ತುಗಳನ್ನೆಲ್ಲ ಕೊಟ್ಟೆ. ಆದರೂ ನೀನು ತೃಪ್ತನಾಗಿಲ್ಲ ಅಲ್ಲವೆ? ಮೆಟ್ಟಿಲುಗಳನ್ನೇರುತ್ತ ಮೇಲೆ ಸ್ವರ್ಗಕ್ಕೆ ಬರಲು ನಿನಗಿಷ್ಟವಿಲ್ಲವೆ?’ ಕೇಳಿದಳು.

ಹುಡುಗ ದುಃಖದಿಂದ, “ನನ್ನಿಂದ ಉಪಕಾರ ಪಡೆದ ಎಲ್ಲರೂ ನನ್ನ ಬಳಿಯೇ ನಿಂತಿದ್ದಾರೆ. ನಾನು ಒಂದು ಮೆಟ್ಟಲು ಏರಿದ ಕೂಡಲೇ ನನ್ನನ್ನು ಎಳೆದು ಕೆಳಗೆ ಹಾಕುತ್ತಿದ್ದಾರೆ. ಹೀಗಾಗಿ ಮೇಲೆ ಬರಲು ನನ್ನಿಂದಾಗುತ್ತ ಇಲ್ಲ’ ಎಂದು ಹೇಳಿದ. ದೇವತೆಗೆ ವ್ಯಥೆಯಾಯಿತು. “ಕೃತಘ್ನರಾದ ಮನುಷ್ಯರೇ; ನಿಮಗೆಂದಿಗೂ ಇನ್ನೊಬ್ಬರ ಒಳಿತನ್ನು ಸಹಿಸುವ ಶಕ್ತಿಯಿಲ್ಲ. ಬೇರೆಯವರ ಒಳ್ಳೆಯ ಗುಣ ನೋಡಿ ಕಲಿಯುವುದಿಲ್ಲ. ಮುಂದೆ ಬರುವವರನ್ನು ಕಾಲು ಹಿಡಿದು ಕೆಳಗೆಳೆಯುವ ಪ್ರವೃತ್ತಿಯಿಂದಾಗಿ ತೃಪ್ತಿ ಎಂಬುದು ನಿಮಗೆ ಜೀವನದಲ್ಲಿ ಸಿಗದೇ ಹೋಗಲಿ’ ಎಂದು ಶಪಿಸಿದಳು.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.