ಗಬ್ಬುರಾಜನಿಗೆ ಜಯವಾಗಲಿ


Team Udayavani, Feb 20, 2020, 4:15 AM IST

wall-7

“ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು’ ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು ಹುಡುಗಿ ಮಾತ್ರ ಗಬ್ಬುರಾಜನಿಗೆ ಜಯವಾಗಲಿ ಎಂದುಬಿಟ್ಟಳು. ಕುಮಾರನಿಗೆ ಅವಮಾನವಾದಂತಾಯಿತು.

ಕುಮಾರ, ಶಂಕರ ಇಬ್ಬರೂ ಗೆಳೆಯರಾಗಿದ್ದರು. ಶಾಲೆಯಲ್ಲಿ ಅವರಿಬ್ಬರ ಆಟ- ಪಾಠ- ಜಗಳ ಎಲ್ಲವೂ ಒಟ್ಟಿಗೆ ಆಗುತ್ತಿತ್ತು. ಕುಮಾರ ಅಶಿಸ್ತಿನ ಹುಡುಗನಾಗಿದ್ದ. ಸಮವಸ್ತ್ರ ಧರಿಸುವುದರಿಂದ ಹಿಡಿದು ಶುಚಿತ್ವ ಕಾಪಾಡುವಲ್ಲಿಯವರೆಗೆ ಅವನಿಗೆ ನಿರಾಸಕ್ತಿ. ಶಂಕರ ಈ ಬಗ್ಗೆ ಅದೆಷ್ಟು ಸಲ ಬುದ್ಧಿವಾದ ಹೇಳಿದ್ದರೂ ಅವನು ಕೇಳುತ್ತಿರಲಿಲ್ಲ. ಈ ವಿಷಯವಾಗಿಯೇ ಮತ್ತೂಮ್ಮೆ ಅವರಿಬ್ಬರ ನಡುವೆ ಮುನಿಸು ಬಂದಿತು. ಶಂಕರ ತಾನೇ ಅವನ ಬಳಿ ತೆರಳಿ ಸ್ನೇಹ ಹಸ್ತ ಚಾಚಿದ. ಕುಮಾರ ಮಾತನಾಡಲೊಲ್ಲ. ಕಡೆಗೆ ಅವನ ಗಮನ ಸೆಳೆಯಲು ಶಂಕರ ಒಂದು ಉಪಾಯ ಮಾಡಿದ. “ಲೋ… ಕುಮಾರ ನಾವ್ಯಾಕೋ ಎಲ್ಲಾರೂ ಸೇರಿ ಒಂದು ನಾಟಕ ಮಾಡಬಾರದು? ಎಲ್ಲಾರು ಸೇರಿ ನಾಟಕ ಮಾಡಿದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವೇನೊ’ ಅಂದ. ನಾಟಕ ಅಂತ ಅಂದ ತಕ್ಷಣ ಕುಮಾರನ ಮುಖ ಖುಷಿಯಿಂದ ಅರಳಿತು. ಅವನು ಶಂಕರನ ಮುಖ ನೋಡಿದ. ಆಗ ಶಂಕರ ಹೇಳಿದ. “ಲೋ ಕುಮಾರ, ನೀನೆ ಕಣೋ ಇದರಲ್ಲಿ ರಾಜ. ನಾನು ಮಂತ್ರಿ ಆಗ್ತಿನಿ’ ಎಂದ‌. ಕುಮಾರ ಮತ್ತು ಶಂಕರ ಇಬ್ಬರೂ ತರಗತಿಯ ಎಲ್ಲಾ ಮಕ್ಕಳಿಗೂ “ನಾಟಕ ಮಾಡೋಣ ಬನ್ರೊ’ ಅಂತ ಕರೆದರು. ಎಲ್ಲಾ ಮಕ್ಕಳೂ ಹುರುಪಿನಿಂದ ಬಂದರು.

ತರಗತಿಯ ಎಲ್ಲಾ ಮಕ್ಕಳೂ ಸೇರಿಕೊಂಡು, ನಾಟಕ ಆಡಲು ಶುರುಮಾಡಿದರು. ಅವರಲ್ಲಿ ಕುಮಾರ ರಾಜನ ಪಾತ್ರ, ಶಂಕರ ಮಂತ್ರಿ ಪಾತ್ರ, ಇನ್ನು ಹುಡುಗರು ಮತ್ತು ಹುಡುಗಿಯರಲ್ಲಿ ಕೆಲವರು ಸೈನಿಕರು, ಮತ್ತೆ ಕೆಲವರು ಸೇವಕರ ಪಾತ್ರಗಳನ್ನು ಮಾಡಲು ಒಪ್ಪಿಕೊಂಡರು.

ಕುಮಾರ ಬಂದಾಗ, ಅಂದರೆ ರಾಜ ಬಂದಾಗ ಸೈನಿಕರು ಮತ್ತು ಸೇವಕರು ಎಲ್ಲಾರು ಸೇರಿಕೊಂಡು ಒಟ್ಟಿಗೆ “ರಾಜನಿಗೆ ಜಯವಾಗಲಿ, ರಾಜನಿಗೆ ಜಯವಾಗಲಿ’ ಎಂದು ಹೇಳಬೇಕು ಎಂದು ಶಂಕರ ಹೇಳಿದ. ಆಗ ಎಲ್ಲಾ ಮಕ್ಕಳು “ಆಯ್ತು, ಆಯು’¤ ಅಂತ ಒಪ್ಪಿಕೊಂಡರು. ರಾಜನ ಪಾತ್ರ ಮಾಡಿದ ಕುಮಾರ ಬಹಳ ಠೀವಿಯಿಂದ ಕೈಲೊಂದು ಕೋಲನ್ನು ಖಡ್ಗದಂತೆ ಹಿಡಿದುಕೊಂಡು ಬರತೊಡಗಿದ. ಆಗ ಸೈನಿಕರು ಮತ್ತು ಸೇವಕರ ಪಾತ್ರ ಮಾಡಿದ ಮಕ್ಕಳೆಲ್ಲರೂ ಜೋರಾಗಿ “ರಾಜನಿಗೆ ಜಯವಾಗಲಿ, ರಾಜನಿಗೆ ಜಯವಾಗಲಿ’ ಅಂತ ಕೂಗಲು ಪ್ರಾರಂಭಿಸಿದರು.

ಅವರಲ್ಲಿ ಒಬ್ಬಳು ಹುಡುಗಿ “ಗಬ್ಬು ರಾಜನಿಗೆ ಜಯವಾಗಲಿ’ ಅಂತ ಜೋರಾಗಿ ಕೂಗಿದಳು. ಅವಳು ಹಾಗೆಂದ ತಕ್ಷಣ ಎಲ್ಲಾ ಹುಡುಗರು “ಗಬ್ಬು ರಾಜನಿಗೆ ಜಯವಾಗಲಿ, ಗಬ್ಬು ರಾಜನಿಗೆ ಜಯವಾಗಲಿ ಅಂತ ಜೋರಾಗಿ ಕೂಗತೊಡಗಿದರು. ಆಗ ಕುಮಾರನಿಗೆ ಬಹಳ ಕೋಪ ಬಂತು. “ಏನ್ರೊà, ರಾಜ ಆದ ನನಗೇನೆ ಗಬ್ಬು ರಾಜ ಅಂತಿರೇನ್ರೊà’ ಅಂತ ರೇಗಿದ. ಅವರಲ್ಲಿ ಗಬ್ಬು ರಾಜ ಎಂದು ಕೂಗಿದ ಹುಡುಗಿ ಬಹಳ ಜಾಣೆ ಮತ್ತು ದಿಟ್ಟೆ ಕೂಡ. ಅವಳು ಮುಂದೆ ಬಂದು “ಏ ಕುಮಾರ, ರಾಜ ಯಾವತ್ತಾದರೂ ಕೊಳಕಾಗಿರ್ತಾನಾ? ರಾಜ ಅಂದರೆ ನೀಟಾಗಿ ಒಗೆದಿರುವ ಬಟ್ಟೆ ಹಾಕ್ಕೋತಾನೆ; ಹಲ್ಲು ಚೆನ್ನಾಗಿ ಉಜ್ಜುತ್ತಾನೆ; ದಿನಾಲೂ ಸ್ನಾನ ಮಾಡುತ್ತಾನೆ; ಕೂದಲನ್ನು ಚೆನ್ನಾಗಿ ಬಾಚಿಕೊಂಡಿರ್ತಾನೆ; ಉಗುರುಗಳನ್ನು ಉದ್ದಕ್ಕೆ ಬಿಡೋದಿಲ್ಲ’ ಅಂದಳು.

ಆಗ ಕುಮಾರನಿಗೆ ಅರ್ಥವಾಯಿತು. ಆ ಸಹಪಾಠಿಯ ಮಾತುಗಳಲ್ಲಿ ಸತ್ಯಾಂಶ ಇದೆ ಎಂದು ತೋರಿತು. ಶಾಲೆಯಿಂದ ಮನೆಗೆ ಹೋದವನೇ ತನ್ನ ಅಮ್ಮನಿಗೆ ಶಾಲೆಯಲ್ಲಿ ನಡೆದಿದ್ದನ್ನು ಹೇಳಿದ “ಏನಮ್ಮ, ನೀನು ನನ್ನನ್ನು ಸರಿಯಾಗಿ ತಯಾರು ಮಾಡಿ ಕಳಿಸೋದಿಲ್ಲ. ಶಾಲೆಯಲ್ಲಿ ರಾಜನ ಪಾರ್ಟ್‌ ಮಾಡೋದಕ್ಕೆ ಹೋದರೆ ಎಲ್ಲರೂ ನನ್ನನ್ನು ಗಬ್ಬು ರಾಜ ಅಂತ ಆಡಿಕೋಳ್ತಾರೆ’ ಅಂತ ಸಪ್ಪೆಮೋರೆ ಹಾಕಿಕೊಂಡು ದೂರಿದ. ಆಗ ಅವರ ಅಮ್ಮ, “ಅಲ್ಲಾ ಕಣೋ, ನಾನು ಯಾವಾಗಲೂ ಹೇಳ್ತಾನೆ ಇರ್ತೀನಿ, ನೀಟಾಗಿರು ಅಂತ. ಬಾರೋ ಸ್ನಾನ ಮಾಡಿಸ್ತೀನಿ ಅಂತ ಕರೆದರೂ ಹಾಗೇ ಓಡಿ ಹೋಗ್ತಿàಯಾ! ನಾನೇನ್‌ ಮಾಡ್ಲಿ ಹೇಳು’ ಅಂದರು. ಆಗ ಕುಮಾರ “ಇಲ್ಲಮ್ಮ, ಇನ್ನು ಮೇಲೆ ನಾನು ಹಾಗೆ ಮಾಡಲ್ಲ. ನಿನ್ನ ಮಾತು ಕೇಳ್ತೀನಿ. ನೀನು ಕರೆ‌ದಾಗ ಬರುತ್ತೀನಿ’ ಎಂದು ಹುರುಪಿನಿಂದ ಹೇಳಿದ.

ಮಾರನೆ ದಿನ ಕುಮಾರ ಹಲ್ಲನ್ನು ಚೆನ್ನಾಗಿ ತಿಕ್ಕಿಕೊಂಡ. ಉದ್ದಕ್ಕೆ ಬೆಳೆದು ಕೊಳಕಾಗಿದ್ದ ಉಗುರುಗಳನ್ನೆಲ್ಲ ಕತ್ತರಿಸಿಕೊಂಡ. ಸ್ವತ್ಛವಾಗಿ ಸ್ನಾನ ಮಾಡಿ ಶುಭ್ರವಾದ ಸಮವಸ್ತ್ರ ಹಾಕಿಕೊಂಡು, ತಲೆ ಬಾಚಿಕೊಂಡು ತರಗತಿಗೆ ಬಂದ. ಮಕ್ಕಳಿಗೆಲ್ಲ ಆಶ್ಚರ್ಯವಾಯಿತು. ಎಲ್ಲಾ ಹುಡುಗರೂ ಜೋರಾಗಿ “ಮಹಾರಾಜರಿಗೆ ಜಯವಾಗಲಿ’ ಎಂದು ಕೂಗತೊಡಗಿದರು. ಕುಮಾರ ಮುಗುಳು ನಗುತ್ತಾ ಗಾಂಭೀರ್ಯದಿಂದ, ರಾಜನಂತೆ ತನ್ನ ಕೈಗಳನ್ನು ಮೇಲಕ್ಕೆತ್ತಿ ಬೀಸತೊಡಗಿದನು.

ಪ್ರೇಮಾ ಬಿರಾದಾರ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.