ಬಂಗಾರ ಬೆಳೆಯುವ ಮರ ಕಂಡಿದ್ದೀರಾ?


Team Udayavani, Apr 27, 2017, 3:42 PM IST

gold.jpg

“ದುಡ್ಡಿನ ಮರವನ್ನು ನೆಟ್ಟಿದ್ದೇನೆಯೇ?’ ಎಂತಲೋ, “ಗಿಡದಿಂದ ದುಡ್ಡು ಉದುರುವುದಿಲ್ಲ’, ಎಂತಲೋ ಹೇಳುವುದು ವಾಡಿಕೆ. ಇದು ಸಾಧ್ಯವಿಲ್ಲದ ಮಾತು ಎನ್ನುವುದು ನಾವೆಲ್ಲರೂ ತಿಳಿದುಕೊಂಡಿರುವ ವಿಚಾರ! ಆದರೆ, ಮರ- ಗಿಡಗಳಿಂದ ಬಂಗಾರವನ್ನು ಬೆಳೆಸುವುದು ಖಂಡಿತಾ ಸಾಧ್ಯವಿಲ್ಲ ಎನ್ನುವ ಮಾತನ್ನು ಪರಾಮರ್ಶಿಸಬೇಕಾದ ಸಂದರ್ಭ ಬಂದಿದೆ. ಏಕೆಂದು ತಿಳಿದುಕೊಳ್ಳಬೇಕೆಂದರೆ ಮುಂದೆ ಓದಿ…

ಬಂಗಾರ ಒಂದು ಲೋಹ. ಇತರ ಲೋಹಗಳಂತೆ ಅದನ್ನೂ ಗಣಿಗಾರಿಕೆಯಿಂದ ಪಡೆಯಲಾಗುತ್ತದೆ. ಆದರೆ ಇದೀಗ ಸಸ್ಯಗಳನ್ನು ಬಳಸಿ ಬಂಗಾರವನ್ನು ಪಡೆಯಬಲ್ಲ “ಸಸ್ಯ ಗಣಿಗಾರಿಕೆ’ ಎನ್ನುವ ವಿಧಾನ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಗಿಡಗಳು ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯುತ್ತವೆ ಎನ್ನುವ ವಿಚಾರ ನಮಗೆಲ್ಲರಿಗೂ ಗೊತ್ತು. ಆದರೆ ಪೋಷಕಾಂಶಗಳ ಜೊತೆ ಗಿಡಗಳು ಮಣ್ಣಿನಲ್ಲಿರುವ ಲವಣ ಮತ್ತು ಖನಿಜ ಪದಾರ್ಥಗಳನ್ನೂ ಹೀರಿಕೊಳ್ಳುತ್ತವೆ. ಈ ಪೋಷಕಾಂಶಗಳು ಗಿಡದ ಕಾಂಡ, ಟೊಂಗೆ, ಎಲೆ ಮುಂತಾದ ಭಾಗಗಳಿಗೆ ಪ್ರವಹಿಸಿ, ಅಲ್ಲೆಲ್ಲಾ ಸಂಗ್ರಹವಾಗುತ್ತಾ ಹೋಗುತ್ತದೆ. 

ಕೆಲ ಸಮಯದ ನಂತರ ಈ ಗಿಡಗಳನ್ನು ಕತ್ತರಿಸಿ, ಸಂಸ್ಕರಿಸಿ, ಪುಡಿ ಮಾಡಿ ವೈಜ್ಞಾನಿಕ ವಿಧಾನಗಳ ಮೂಲಕ ಅವುಗಳಲ್ಲಿದ್ದ ಖನಿಜ ಪದಾರ್ಥಗಳಿಂದ ಲೋಹದಂಶವನ್ನು ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತದೆ. ಹೀಗೆ ಭೂಮಿಯ ಖನಿಜ ವಸ್ತುಗಳಿಂದ ಲೋಹವನ್ನು ಪಡೆಯುವುದಕ್ಕೆ “ಹಸಿರು ಗಣಿಗಾರಿಕೆ’ ಎಂದು ಹೆಸರು. ಇದರಿಂದ ಮಾಲಿನ್ಯ ಉಂಟಾಗುವುದಿಲ್ಲ. ಅಲ್ಲದೆ ಸಾಂಪ್ರದಾಯಿಕ ಗಣಿಗಾರಿಕೆಯಿಂದಾಗುವ ಮಣ್ಣಿನ ಸವಕಳಿ ಹಸಿರು ಗಣಿಗಾರಿಕೆಯಲ್ಲಿ ಕಂಡು ಬರುವುದಿಲ್ಲ.

ಹಸಿರು ಗಣಿಗಾರಿಕೆ ಎಂಬುದು ಹೊಸ ಸಂಶೋಧನೆ ಅಲ್ಲದಿದ್ದರೂ ಇತ್ತೀಚೆಗೆ ಇದರಲ್ಲಿ ಅನೇಕ ಸಂಶೋಧನಾ ಕಾರ್ಯಗಳು ಪ್ರಗತಿಯಲ್ಲಿವೆ. ಬಂಗಾರವನ್ನು ಪಡೆಯುವ ಬಗ್ಗೆ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಸಾಸಿವೆಯಂಥ ಗಿಡಗಳು ಈ ಕಾರ್ಯದಲ್ಲಿ ಹೆಚ್ಚು ಉಪಯುಕ್ತ ಎನ್ನುವುದು ಸದ್ಯ ಧೃಡಪಟ್ಟಿದೆ. ಕ್ಯಾರೆಟ್‌, ಬೀಟ್‌ರೂಟ್‌, ಈರುಳ್ಳಿ, ಮೂಲಂಗಿ ಸಸ್ಯಗಳನ್ನೂ ಈ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಕೆಲವು ಪ್ರಯೋಗಗಳು ತೋರಿಸಿಕೊಟ್ಟಿವೆ.

ಈಗಿರುವ ತಂತ್ರಜ್ಞಾನದಲ್ಲಿ ಈ ವಿಧಾನ ಬಹಳ ದುಬಾರಿಯದು ಮತ್ತು ನಿಧಾನವೂ ಹೌದು. ಹೀಗಾಗಿ ಸಾಂಪ್ರದಾಯಿಕ ಗಣಿಗಾರಿಕೆಯಷ್ಟು, ಸಸ್ಯಗಣಿಗಾರಿಕೆ ವ್ಯಾಪಕವಾಗಿಲ್ಲ. ಆದರೆ ಈ ಹಸಿರು ಗಣಿಗಾರಿಕೆ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಸಂಶೋಧನೆಗಳು ಮುಂದುವರೆದಿವೆ. ಇವು ಯಶಸ್ವಿಯಾದಲ್ಲಿ ಬಂಗಾರ ಬೆಳೆಯುವ ಮರಗಳನ್ನು ನಾವೆಲ್ಲರೂ ಕಾಣುವ ದಿನಗಳು ದೂರವಿಲ್ಲ.

-ಡಿ. ವಿ.ಹೆಗಡೆ

ಟಾಪ್ ನ್ಯೂಸ್

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.