ಸಾಂಬಾರು ರುಚಿಯಾಗಿದ್ದು ಹೇಗೆ?


Team Udayavani, Sep 20, 2018, 6:00 AM IST

8.jpg

ಬಂಟಿಗೆ ಹಬ್ಬದ ರಜೆ ಬಂದಿದ್ದಕ್ಕೆ ತುಂಬಾ ಖುಷಿ. ಲೇಟಾಗಿ ಏಳ್ಳೋದು, ಒಂದಷ್ಟು ತಿನ್ನೋದು, ಆಮೇಲೆ ಅಪ್ಪ-ಅಮ್ಮನ ಕೂಗಾಟಕ್ಕೆ ಓದು- ಬರೆದ ಶಾಸ್ತ್ರ ಮಾಡಿ ಟಿ.ವಿ ಮುಂದೆ ಕುಳಿತರೆ ಆಯ್ತು. ಅಕಸ್ಮಾತ್‌ ಅದೂ ಬೇಸರ ಆದ್ರೆ ವಿಡಿಯೋ ಗೇಮ್ಸ್‌ ಆಡೋದು! ಒಟ್ಟಿನಲ್ಲಿ ರಜಾ ಅಂದ್ರೆ ಅವನಿಗೆ ಮಜಾ!!

ಆ ದಿನ ಶನಿವಾರ. ಬೆಳಿಗ್ಗೆ ಏಳುವಾಗಲೇ 9 ಗಂಟೆ. ಟಿ.ವಿ ಮುಂದೆ ಕುಳಿತವನಿಗೆ ತಿಂಡಿ ಬೇಡವೆನಿಸಿತು. ಅಮ್ಮ ಒತ್ತಾಯ ಮಾಡಿದಕ್ಕೆ ನೆಪಕ್ಕೆ ತಿಂದು “ಉಪ್ಪಿಟ್ಟು ಕೆಟ್ಟದಾಗಿದೆ; ಹೇಗೆ ತಿನ್ನೋದು?’ಎಂದು ರೇಗಿದ. ಪಾಪ, ಅಮ್ಮ ಅವರೆಕಾಳು, ಈರುಳ್ಳಿ, ತುಪ್ಪ ಎಲ್ಲಾ ಹಾಕಿ ಪ್ರೀತಿಯಿ ಂದ ಮಾಡಿದ್ದ ಉಪ್ಪಿಟ್ಟದು. ಅಮ್ಮನ ಮುಖ ಸಣ್ಣಗಾಗಿತ್ತು. ಮಧ್ಯಾಹ್ನ ಊಟದ ಹೊತ್ತಿಗೆ ಬಂಟಿಯದು ಮತ್ತೆ ಅದೇ ರಾಗ. “ಈ ತರಕಾರಿ ಸಾಂಬಾರು ಸರಿಯಿಲ್ಲ. ನನಗೆ ಸೊಪ್ಪಿನ ಪಲ್ಯ ಸೇರಲ್ಲ. ಈ ತರ ಇದ್ರೆ ಯಾರು ಊಟ ಮಾಡ್ತಾರೆ?’ ಅಂತ ಅಪ್ಪ-ಅಮ್ಮನನ್ನೇ ಜೋರು ಮಾಡಿದ! ಅವರಿಗೆ ಬೇಸರವಾದರೂ ಇದು ಅವನ ನಿತ್ಯದ ಕತೆಯಾಗಿದ್ದರಿಂದ ಸುಮ್ಮನಾಗಿದ್ದರು. ಆದರೆ ಹಬ್ಬಕ್ಕೆ ಊರಿಂದ ಬಂದಿದ್ದ ಅಜ್ಜನಿಗೆ ಮಾತ್ರ ಚೋಟುದ್ದ ಮೊಮ್ಮಗನ ಕಾರುಬಾರು ಕಂಡು ಸಿಕ್ಕಾಪಟ್ಟೆ ಆಶ್ಚರ್ಯಮಾತು.

     ಮಧ್ಯಾಹ್ನವಿಡೀ ಟಿ.ವಿ ನೋಡುತ್ತಿದ್ದ ಬಂಟಿಯನ್ನು ಸಂಜೆ ಅಜ್ಜ “ಬಾರೋ, ಊರಿಂದ ಒಂದಷ್ಟು ಹೂವಿನ ಬೀಜ ತಂದಿದ್ದೇನೆ. ಹೊಸ ಪಾಟ್‌ನಲ್ಲಿ ಹಾಕೋಣ’ ಎಂದು ಕರೆದರು. ಬಂಟಿ “ಗಲೀಜಾದರೆ ಅಪ್ಪ- ಅಮ್ಮ ಬೈತಾರೆ; ಬೇಡಜ್ಜ’ ಎಂದು ಹಿಂಜರಿದ. ಅಂತೂ ಅಜ್ಜ ಮೊಮ್ಮಗ ಇಬ್ಬರೂ ಪಾಟುಗಳನ್ನು ತಂದು ಅದಕ್ಕೆ ಮಣ್ಣು ತುಂಬಿದರು. ನೀರು ಹಾಕಿ ಮಣ್ಣು ಹಸಿ ಮಾಡಿದರು. ಬೀಜಗಳನ್ನು ಮಣ್ಣೊಳಗೆ ಬಿತ್ತಿದರು. ಅಷ್ಟರಲ್ಲಿ ಅಜ್ಜ ಪುಟ್ಟ ಕೈತೋಟದಲ್ಲಿ ಅಲ್ಲಲ್ಲಿ ಬೆಳೆದಿದ್ದ ಕಳೆ ನೋಡಿದರು. ಸರಿ, ಜತೆಯಾಗಿ ಅದನ್ನೂ ಎಳೆದು ಕಿತ್ತರು. ಆಮೇಲೆ ಕಸವನ್ನೆಲ್ಲಾ ಗುಡಿಸಿದರು. ಅಜ್ಜ, ಅಡ್ಡಾದಿಡ್ಡಿ ಬೆಳೆದಿದ್ದ ಗಿಡಗಳ ರೆಂಬೆ-ಕೊಂಬೆಗಳನ್ನು ಸರಿಯಾಗಿ ಕತ್ತರಿಸುವುದನ್ನು ಬಂಟಿಗೆ ತೋರಿಸಿ ಕೊಟ್ಟರು. ಮಣ್ಣಿನಲ್ಲಿ ಕೆಲಸ ಮಾಡಿ ಇಬ್ಬರ ಮೈಕೈ ಎಲ್ಲಾ ಕೊಳೆಯಾಗಿತ್ತು. ಇಬ್ಬರೂ ಬಿಸಿ ನೀರಲ್ಲಿ ಸ್ನಾನ ಮಾಡಿದರು.

ಯಾವಾಗಲೂ ಅಮ್ಮ ಎಷ್ಟು ಸಲ ಕೂಗಿದರೂ ಹಸಿವಿಲ್ಲ ಎಂದು ಹಟ ಹಿಡಿಯುತ್ತಿದ್ದವನಿಗೆ ಅಂದು ಎಲ್ಲಿಲ್ಲದ ಹಸಿವೆ! ಅಮ್ಮನಿಂದ ತಟ್ಟೆಗೆ ಮಧ್ಯಾಹ್ನದ ಊಟವನ್ನೇ ಬಡಿಸಿಕೊಂಡ. ಸಾಂಬಾರು ಅನ್ನ ತುಂಬಾ ರುಚಿಯೆನಿಸಿತು. ಆಹಾ! ಸೊಪ್ಪಿನ ಪಲ್ಯವಂತೂ ಸೂಪರ್‌! ತಡೆಯಲಾರದೇ ಬಂಟಿ “ಅಮ್ಮಾ ಸಾಂಬಾರು ತುಂಬಾ ರುಚಿಯಾಗಿದೆ?’ ಎಂದಾಗ ಅಮ್ಮ ತಬ್ಬಿಬ್ಬು. ಪಕ್ಕದಲ್ಲಿದ್ದ ಅಜ್ಜ ನಗುತ್ತಾ ಹೇಳಿದ್ರು “ಬಂಟಿ, ಇದು ಮಧ್ಯಾಹ್ನ ನೀನು ಚೆನ್ನಾಗಿಲ್ಲ ಎಂದು ಬೈದ ಸಾಂಬಾರು-ಪಲ್ಯಾನೇ! ಹೊಟ್ಟೆ ಹಸಿದರೆ ಬರೀ ಅನ್ನವೂ ಅಮೃತವೇ. ಇಡೀ ದಿನ ಕೆಲಸವಿಲ್ಲದೆ ಒಂದೆಡೆ ಕುಳಿತರೆ ಹಸಿವಾಗುವುದೂ ಇಲ್ಲ, ಆಹಾರ ರುಚಿಸುವುದೂ ಇಲ್ಲ’ ಎಂದರು. ಅಪ್ಪ ಅಮ್ಮಂದಿರಿಗೆ ತಮ್ಮ ತಪ್ಪಿನ ಅರಿವಾಯಿತು. ಬಂಟಿಗೆ ಹೊಟ್ಟೆ ತುಂಬಿದ್ದರಿಂದ ನಿದ್ದೆ ಬರುತ್ತಿತ್ತು. ನಿದ್ದೆ ಮಾಡಲು ಒಳಕ್ಕೋಡಿದ.

 ಡಾ.ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.