ವಿಸ್ಮಯ: ಎಲ್ಲೋರಾದ ದಿ ಗ್ರೇಟ್‌ ಕೈಲಾಸನಾಥ ದೇವಾಲಯ


Team Udayavani, Mar 15, 2018, 4:15 PM IST

lead-main.jpg

ರಾಜ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು! ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ!

ಕೈಲಾಸನಾಥ ದೇವಸ್ಥಾನವು ವಿಶ್ವದ ಅತಿ ದೊಡ್ಡ ಏಕಶಿಲೆಯ ರಚನೆಯಾಗಿದೆ. ವಾಸ್ತುಶಿಲ್ಪದ ಇತಿಹಾಸದಲ್ಲಿ ಅತ್ಯಂತ ವಿಸ್ಮಯಕಾರಿ ಕಟ್ಟಡಗಳಲ್ಲಿ ಒಂದಾಗಿರುವ ಕೈಲಾಸನಾಥ ದೇವಸ್ಥಾನ ಸುಮಾರು 60 ಅಡಿ ಎತ್ತರ ಮತ್ತು 200 ಅಡಿ ಅಗಲವನ್ನು ಹೊಂದಿದೆ. ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನವನ್ನು 8ನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜರು ನಿರ್ಮಿಸಿದರು. ಈ ಏಕಶಿಲೆಯ ರಚನೆಯನ್ನು ನಿರ್ಮಿಸಲು ಬಳಸಲಾದ ಬಂಡೆ ಸುಮಾರು 4,00,000 ಟನ್‌ಗಳಷ್ಟು ತೂಕವನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.

34 ಗುಹಾಂತರ ದೇವಾಲಯಗಳಲ್ಲಿ 16ನೇ ಗುಹೆಯಾದ ಈ ದೇವಾಲಯದ ಉದ್ದ 276 ಅಡಿಗಳು. ಅಗಲ 154 ಅಡಿಗಳು ಮತ್ತು ಎತ್ತರ 100 ಅಡಿ. ದೇವಾಲಯದ ಮಧ್ಯದಲ್ಲಿ ಗರ್ಭಗೃಹ, ಪಶ್ಚಿಮದಲ್ಲಿ ಮಹಾದ್ವಾರ, ನಂದಿ ಮಂಟಪ, ಮತ್ತು ಅಂಗಳವನ್ನು ಹೊಂದಿದ್ದು ಅದು ಸನ್ಯಾಸಿ ಮಂಟಪಗಳನ್ನೂ ಹೊಂದಿದೆ. (ಅಂದಿನ ಕಾಲದಲ್ಲಿ ಸನ್ಯಾಸಿಗಳು ದೇವಾಲಯದ ಪ್ರಾಂಗಣದಲ್ಲಿಯೇ ವಾಸಿಸುತ್ತಿದ್ದರು). ಈ ದೇವಾಲಯವು ಎರಡು ಅಂತಸ್ತುಗಳನ್ನು ಹೊಂದಿದೆ. ದೇವಾಲಯದಲ್ಲಿ ಪೀಠ ಮತ್ತು ಆನೆ ಕೆತ್ತಲಾಗಿದ್ದು, ಅದರ ಕುಸುರಿ ಕಲೆಯ ಕೆತ್ತನೆ ಅದ್ಭುತವಾಗಿದೆ. ಈ ಆನೆಯ ಬಳಿ ಮನುಷ್ಯ ನಿಂತರೆ ಬಹಳ ಕುಬ್ಜನಾಗಿ ಕಾಣುತ್ತಾನೆ! ಇಲ್ಲಿನ ಶಿಲ್ಪಗಳ ಪಟ್ಟಿಯಲ್ಲಿ ದಶಾವತಾರ, ಭೈರವನೊಂದಿಗೆ ಕೈಲಾಸ ಪರ್ವತವನ್ನು ಎತ್ತಿ ಹಿಡಿದ ರಾವಣನ ವಿಗ್ರಹ. ಇದರಲ್ಲಿ ಹತ್ತು ತಲೆಗಳೂ ಒಂದೇ ತಲೆಯಂತೆ ರಚಿತವಾಗಿದೆ. ವೀರಮಂಡಿಯಲ್ಲಿ ಕುಳಿತಿರುವ 
ಭಂಗಿ ಭವ್ಯವಾಗಿದೆ. ನಟರಾಜ, ವಿಷ್ಣು, ಪಾರ್ವತಿಯರ ಭಂಗಿಗಳೂ ಸಹ ಅತ್ಯಂತ ಶ್ರೇಷ್ಠ ಕಲಾಕೃತಿಗಳಾಗಿ ಮೂಡಿವೆ.

ಮೊಘಲ್‌ ದೊರೆ ಔರಂಗಜೇಬ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು! ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ! ಮಳೆಗಾಲದಲ್ಲಿ ದೇವಾಲಯದ ಆವರಣದಲ್ಲಿ ಜಲಪಾತದಂತೆ ಮಳೆ ಸುರಿಯುವುದನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಗೋಪುರ ಒಂದು ಹೆಲಿಪ್ಯಾಡ್‌ನ‌ಷ್ಟು ವಿಸ್ತೀರ್ಣವನ್ನು ಹೊಂದಿದೆ ಎಂದರೆ ಅದರ ಬೃಹದಾಕಾರ ಕಲ್ಪನೆಗೆ ಬಂದೇ ಬರುತ್ತದೆ. ಎಎಲ್ಲೋರಾದ ಕೈಲಾಸನಾಥ ದೇವಾಲಯ ಭಾರತದ ಅಪೂರ್ವವಾದ ವಾಸ್ತುಶಿಲ್ಪ ರಚನೆಯಾಗಿದೆ ಎಂದು ಇಂಗ್ಲೆಂಡಿನ ಪ್ರಸಿದ್ಧ ಇತಿಹಾಸಕಾರರಾದ ಬ್ರೌನ್‌ ಹಾಗೂ ವಿ.ಎ.ಸ್ಮಿತ್‌ ಅಭಿಪ್ರಾಯ ಪಡುತ್ತಾರೆ.

*ಪುರುಷೋತ್ತಮ ವೆಂಕಿ

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.