ಪ್ರಾಣ ಉಳಿಸಿದ ಪ್ರಾಣ ಸ್ನೇಹಿತರು


Team Udayavani, Sep 7, 2017, 11:23 AM IST

07-CHI-4.jpg

ಒಂದು ಕಾಡಿನಲ್ಲಿ ಜಿಂಕೆ, ಆಮೆ, ಕಾಗೆ ಮತ್ತು ಇಲಿ ವಾಸಿಸುತ್ತಿದ್ದವು. ಆ ನಾಲ್ವರೂ ಪ್ರಾಣಸ್ನೇಹಿತರು. ಯಾವಾಗಲೂ ಒಟ್ಟಿಗೇ ಆಡಿ, ಕುಣಿದು ನಲಿಯುತ್ತಿದ್ದವು. ಹೀಗಿರುವಾಗ ಒಂದು ದಿನ ಅವುಗಳಿಗೆ ಆಪತ್ತೂಂದು ಎದುರಾಯಿತು. ಆ ನಾಲ್ವರೂ ಒಟ್ಟಿಗೆ ಇದ್ದ ಸಮಯದಲ್ಲಿ ಬೇಟೆಗಾರನೊಬ್ಬ ಅವುಗಳ ಮೇಲೆ ದಾಳಿ ಮಾಡಿದ. ಈ ಹಠಾತ್‌ ದಾಳಿಗೆ ಹೆದರಿದ ಕಾಗೆ ಹಾರಿಹೋಯಿತು. ಜಿಂಕೆ ಮತ್ತು ಇಲಿ ಓಡಿಹೋಗಿ ತಪ್ಪಿಸಿಕೊಂಡವು. ಪಾಪ, ನಿಧಾನ ಜೀವಿಯಾದ ಆಮೆ ಬೇಟೆಗಾರನ ಕೈಗೆ ಸಿಕ್ಕಿಹಾಕಿಕೊಂಡಿತು. ಜಿಂಕೆಯನ್ನು ಹಿಡಿಯಲಾಗಲಿಲ್ಲವಲ್ಲ ಎಂಬ ಬೇಸರದಲ್ಲಿ ಬೇಟೆಗಾರ ಆಮೆಯನ್ನು ಚೀಲದಲ್ಲಿ ಬಿಗಿದು ತುಂಬಿಕೊಂಡು ಹೊರಟ.

ಸ್ನೇಹಿತನಿಗಾದ ಗತಿಯನ್ನು ನೋಡಿ ಉಳಿದ ಮೂವರಿಗೂ ಬೇಸರವಾಯ್ತು. ಕಾಗೆ ಹೇಳಿತು, “ಬೇಟೆಗಾರ ಜಾಸ್ತಿ ದೂರ ಹೋಗಿರಲಿಕ್ಕಿಲ್ಲ. ಬೇಗ ಏನಾದರೊಂದು ಉಪಾಯ ಮಾಡಿ, ಆಮೆಯನ್ನು ಬಿಡಿಸಿಕೊಳ್ಳೋಣ’  ಹಾರಿ ಹೋಗಿ ಬೇಟೆಗಾರ ಎಲ್ಲಿ ಹೋಗುತ್ತಿದ್ದಾನೆಂದು ನೋಡಿ , ಉಳಿದಿಬ್ಬರಿಗೆ ಮಾಹಿತಿ ನೀಡಿತು. ಬೇಟೆಗಾರ ಹೋಗುವ ದಾರಿಯಲ್ಲೇ ಸ್ವಲ್ಪ ದೂರದಲ್ಲಿ ಜಿಂಕೆ ಸತ್ತಂತೆ ಬಿದ್ದುಕೊಂಡಿತು. “ಅಯ್ಯಯ್ಯೋ, ದೊಡ್ಡ ಜಿಂಕೆ ತಪ್ಪಿ ಹೋಯ್ತಲ್ಲ’ ಎಂದು ಬೇಸರದಲ್ಲಿದ್ದ ಬೇಟೆಗಾರನಿಗೆ ದಾರಿಯಲ್ಲಿ ಬಿದ್ದಿರುವ ಜಿಂಕೆಯನ್ನು ನೋಡಿ ಸಂತೋಷವಾಯಿತು. ಕೈಯಲ್ಲಿದ್ದ ಚೀಲವನ್ನು ಎಸೆದು ಜಿಂಕೆಯ ಬಳಿ ಹೋದ. ತತ್‌ಕ್ಷಣ ಜಿಂಕೆ ಮೇಲಕ್ಕೆದ್ದು ಓಡತೊಡಗಿತು. ಚಕಿತನಾದ ಬೇಟೆಗಾರನೂ ಜಿಂಕೆಯ ಹಿಂದೆ ಓಡಿದ. ಆದರೆ ಜಿಂಕೆಯ ವೇಗದ ಮುಂದೆ ಬೇಟೆಗಾರನ ಕಾಲು ಸೋತಿತು. ಸಪ್ಪೆ ಮೋರೆ ಹಾಕಿಕೊಂಡು ಚೀಲ ಎಸೆದಿದ್ದ ಕಡೆಗೆ ವಾಪಸಾದ.

ಅಷ್ಟರಲ್ಲಿ ಇಲಿ ತನ್ನ ಹರಿತವಾದ ಹಲ್ಲುಗಳಿಂದ ಆಮೆಯನ್ನು ಬಂಧಿಸಿದ್ದ ಚೀಲವನ್ನು ಕಡಿದು ತುಂಡು ತುಂಡು ಮಾಡಿಬಿಟ್ಟಿತು. ಆಮೆ ಚೀಲದಿಂದ ಹೊರಬಂದು ಬೇಗಬೇಗ ಪೊದೆಯೊಳಗೆ ಹೋಗಿ ಅವಿತುಕೊಂಡಿತು. ಬೇಟೆಗಾರ ವಾಪಸ್‌ ಬಂದು ನೋಡುವಾಗ ಚೀಲ ಹರಿದು ಬಿದ್ದಿತ್ತು. ಆಮೆ ತಪ್ಪಿಸಿಕೊಂಡಿತ್ತು. ಆತ ಕೈ ಕೈ ಹಿಸುಕಿಕೊಂಡು ಊರಿನತ್ತ ಮರಳಿದ. 

ಆಮೆ, ಇಲಿ, ಜಿಂಕೆ ಮತ್ತು ಕಾಗೆ ಪ್ರಾಣಸ್ನೇಹಿತರಾಗಿ ಆನಂದದಿಂದ ಮೊದಲಿನಂತೆ ಆಡಿಕೊಂಡಿದ್ದವು. 

ನಿರ್ಮಲಾ ದೇವಿ

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.