ಹಗ್ಗದಿಂದ ಬಾಟಲಿ ಎತ್ತುವುದು


Team Udayavani, Feb 27, 2020, 5:43 AM IST

JADU-1

ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು ಬಾಟಲಿಯ ಕುತ್ತಿಗೆಗೆ ಕಟ್ಟಿ ಎತ್ತಬಹುದೆಂದು ನೀವು ಯೋಚಿಸುತ್ತಿರಬಹುದಲ್ಲವೇ? ಸವಾಲು ಇಷ್ಟೇ ಅಲ್ಲ. ಹಗ್ಗದ ಒಂದು ತುದಿಯನ್ನು ಬಾಟಲಿಯೊಳಗೆ ಇಳಿಬಿಟ್ಟು ಇನ್ನೊಂದು ತುದಿಯ ಸಹಾಯದಿಂದ ಬಾಟಲನ್ನು ಎತ್ತಬೇಕು. ಯಾವುದೇ ಗಂಟನ್ನು ಹಾಕುವಂತಿಲ್ಲ. ಇದನ್ನು ಮಾಡಲು ಪ್ರೇಕ್ಷಕರು ಪ್ರಯತ್ನಿಸಿ ಸುಸ್ತು ಹೊಡೆಯುತ್ತಾರೆ. ಆದರೆ ಜಾದೂಗಾರ ಯಾವುದೇ ಶ್ರಮವಿಲ್ಲದೆ ಇದನ್ನು ಮಾಡಿ ತೋರಿಸಿ ಪ್ರೇಕ್ಷಕರನ್ನು ಸುಸ್ತು ಹೊಡೆಸುತ್ತಾನೆ.

ಇದನ್ನು ಹೇಗೆ ಮಾಡುವುದೆಂದು ನೀವೂ ತಲೆ ಕೆರೆದುಕೊಳ್ಳುತ್ತಿರಬಹುದಲ್ಲವೇ? ಇದರ ರಹಸ್ಯ ಹೇಳುತ್ತೇನೆ ಕೇಳಿ.

ಈ ಐಟಂಗೆ ಬೇಕಾಗಿರುವುದು ಒಂದು ಕುತ್ತಿಗೆ ಉದ್ದವಾಗಿರುವ ಅಪಾರದರ್ಶಕ ಬಾಟಲ್, ಸುಮಾರು ಕಾಲು ಇಂಚು ದಪ್ಪದ ಒಂದಡಿ ಹಗ್ಗ ಮತ್ತು ಕಾರ್ಕ್ ಅಥವಾ ರಬ್ಬರಿನ ಒಂದು ಚಿಕ್ಕ ಬಾಲ್. ಒಂದು ವೇಳೆ ಅಪಾರದರ್ಶಕ ಬಾಟಲ್ ಸಿಗದೇ ಇದ್ದಲ್ಲಿ ಯಾವುದೇ ಬಾಟಲಿಗೆ ಬಣ್ಣವನ್ನು ಕೊಡಬಹುದು.

ನೀವು ಈ ಐಟಂ ಅನ್ನು ಪ್ರದರ್ಶಿಸುವುದಕ್ಕೆ ಮೊದಲು ಕಾರ್ಕ್ ಅಥವಾ ರಬ್ಬರ್ ಬಾಲನ್ನು ನಿಮ್ಮ ಕೈಯಲ್ಲಿ ರಹಸ್ಯವಾಗಿ ಇಟ್ಟುಕೊಂಡಿರಬೇಕು. ಬಾಟಲನ್ನು ತೋರಿಸುವ ಸಮಯದಲ್ಲಿ ಈ ಬಾಲನ್ನು ಅದರೊಳಗೆ ಸೇರಿಸಿ. ನಂತರ ಹಗ್ಗದ ತುಂಡನ್ನು ಸುಮಾರು ಅರ್ಧದಷ್ಟು ಒಳಗೆ ಇಳಿಬಿಡಿ. ಹ್ರಾಂ, ಹ್ರೀಂ ಎಂದು ಮಂತ್ರ ಹೇಳುತ್ತಾ ಬಾಟಲನ್ನು ಉಲ್ಟಾ ಮಾಡಿ ಹಗ್ಗವನ್ನು ಸ್ವಲ್ಪವೇ ಜಗ್ಗಿ. ಈಗ ಒಳಗಿನ ಬಾಲ್ ಬಾಟಲಿಯ ಕುತ್ತಿಗೆ ಮತ್ತು ಹಗ್ಗದ ನಡುವೆ ಬಂದು ನಿಲ್ಲುತ್ತದೆ. (ಚಿತ್ರವನ್ನು ಗಮನಿಸಿ) ಹಗ್ಗದ ತುದಿಯನ್ನು ಹಿಡಿದುಕೊಂಡು ನಿಧಾನವಾಗಿ ಬಾಟಲನ್ನು ಜೋಕಾಲಿಯಂತೆ ತೂಗಿ. ಚಪ್ಪಾಳೆ ಗಿಟ್ಟಿಸಿ. ಕೊನೆಯಲ್ಲಿ ಬಾಟಲ್ ಮತ್ತು ಹಗ್ಗವನ್ನು ಮತ್ತೊಮ್ಮೆ ಪರೀಕ್ಷೆಗಾಗಿ ಕೊಡಬಹುದು. ಇದನ್ನು ಮಾಡಬೇಕಾದರೆ ಬಾಟಲಿಯನ್ನು ಮೇಲ್ಮುಖವಾಗಿ ಹಿಡಿದು ಹಗ್ಗವನ್ನು ಬಾಟಲಿಯೊಳಗೆ ಸ್ವಲ್ಪವೇ ತೂರಿ. ಆಗ ಬಾಲ್ ಬಾಟಲಿಯೊಳಗೆ ಬೀಳುತ್ತದೆ. ಹಗ್ಗವನ್ನು ಪರೀಕ್ಷಿಸಲು ಕೊಡಿ. ಬಾಟಲಿಯನ್ನು ಕೊಡಬೇಕಾದರೆ ಅದನ್ನು ಉಲ್ಟಾ ಮಾಡಿ ಬಾಲ್ ನಿಮ್ಮ ಕೈಯೊಳಗೆ ಬೀಳುವಂತೆ ಮಾಡಿ ಉಪಾಯವಾಗಿ ಜೇಬಿಗೆ ಸೇರಿಸಿ.

ನಿರೂಪಣೆ: ಉದಯ್ ಜಾದೂಗಾರ್

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.