ಹರಿಯದ ನೋಟು


Team Udayavani, Jun 28, 2018, 6:00 AM IST

e-1.jpg

ಪೆನ್ಸಿಲ್‌ ತೆಗೆದುಕೊಂಡು, ಹಾಳೆಗೆ ಚುಚ್ಚಿದರೆ ಏನಾಗುತ್ತದೆ? ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ನೋಟಿಗೆ (ಕರೆನ್ಸಿ ನೋಟು) ಚುಚ್ಚಿದರೆ ಏನಾಗುತ್ತೆ? ಅದೂ ಕೂಡಾ ತೂತಾಗುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ. ಆದರೆ ಏನೂ ಆಗುವುದಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆಶ್ಚರ್ಯ ಆಗುತ್ತಿದೆ ಇಲ್ವಾ? ಅದೇ ಈ ಮ್ಯಾಜಿಕ್‌ ಸ್ವಾರಸ್ಯ. 

ಬೇಕಾಗುವ ವಸ್ತು: ವಿದೇಶಿ ನೋಟು(ಆಟವಾಡಲು ಬಳಸುವ ಡಮ್ಮಿ ಕರೆನ್ಸಿ), ಪೆನ್ಸಿಲ್‌ ಹಾಗೂ ಪೇಪರ್‌/ ಹಾಳೆ. 

ಪ್ರದರ್ಶನ: ನೋಟಿನ ಮೇಲೆ ತೂತು ಮಾಡಬೇಕಾಗಿರುವುದರಿಂದ ಈ ಮ್ಯಾಜಿಕ್‌ಗೆ ನಿಜವಾದ ಭಾರತೀಯ ನೋಟನ್ನು ಬಳಸಬಾರದು. ಅದರ ಬದಲಾಗಿ ಫ್ಯಾನ್ಸಿ ಸ್ಟೋರುಗಳಲ್ಲಿ ದೊರೆಯುವ ಆಟದ ವಿದೇಶಿ ನೋಟನ್ನು ಬಳಸಬಹುದು. ಜಾದೂಗಾರನ ಕೈಯಲ್ಲಿ ಒಂದು ನೋಟು ಹಾಗೂ ನೋಟಿಗಿಂತ ಸ್ವಲ್ಪ ದೊಡ್ಡದಾದ ಒಂದು ಪೇಪರ್‌ ಇದೆ. ಆತ, ನೋಟನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅದನ್ನು ಪೇಪರ್‌ನೊಳಗೆ ಇಟ್ಟು (ಪರ್ಸ್‌ನಲ್ಲಿ ನೋಟುಗಳನ್ನು ಒಂದರ ಮೇಲೆ ಒಂದು ಇಡುವಂತೆ) ಅದನ್ನು ಒಂದು ಬಾರಿ ಮಡಚುತ್ತಾನೆ. ನಂತರ ಚೂಪಾದ ಪೆನ್ಸಿಲ್‌ ತೆಗೆದುಕೊಂಡು, ಪೇಪರ್‌ ಹಾಗೂ ನೋಟನ್ನು ಸೇರಿಸಿ ಒಳಗಿನಿಂದ ಚುಚ್ಚುತ್ತಾನೆ. ಪೇಪರ್‌ ಹಾಗೂ ನೋಟನ್ನು ಛೇದಿಸಿಕೊಂಡು ಪೆನ್ಸಿಲ್‌ ಹೊರಕ್ಕೆ ಬರುತ್ತದೆ. ನಂತರ ಪೆನ್ಸಿಲ್‌ ಅನ್ನು ಹೊರಕ್ಕೆ ತೆಗೆದು, ಪೇಪರ್‌ ಹಾಗೂ ನೋಟನ್ನು ಬೇರೆ ಬೇರೆ ಮಾಡಿ ತೋರಿಸುತ್ತಾನೆ. ಪೆನ್ಸಿಲ್‌ನಿಂದ ಚುಚ್ಚಲ್ಪಟ್ಟ ಪೇಪರ್‌ಗೆ ರಂಧ್ರವಾಗಿರುತ್ತದೆ. ಆದರೆ, ನೋಟಿಗೆ ಯಾವುದೇ ತೊಂದರೆಯಾಗಿರುವುದಿಲ್ಲ.
  
ತಯಾರಿ: ನೀವು ತೆಗೆದುಕೊಳ್ಳುವ ನೋಟನ್ನು ಚಿತ್ರದಲ್ಲಿ ತೋರಿಸಿರುವಂತೆ ಮಧ್ಯದಲ್ಲಿ ಒಂದಿಂಚು ಉದ್ದ ಕತ್ತರಿಸಬೇಕು. ನಂತರ ನೋಟನ್ನು, ಪೇಪರ್‌ನೊಳಗೆ ಇಟ್ಟು ಮಡಚಿರಿ. ಈಗ ನೋಟಿನಲ್ಲಿ ಕೊರೆದ ರಂಧ್ರದ ಒಳಗಿನಿಂದ ಪೆನ್ಸಿಲ್‌ ತೂರಿಸಿ. ಅಲ್ಲಿಂದ ತೂರಿ ಬಂದ ಪೆನ್ಸಿಲ್‌, ಪೇಪರ್‌ ಅನ್ನು ಛೇದಿಸಿ ಹೊರಕ್ಕೆ ಬರುತ್ತದೆ. ಕೊನೆಗೆ, ಪೇಪರ್‌ ಹಾಗೂ ನೋಟನ್ನು ಪ್ರೇಕ್ಷಕರಿಗೆ ತೋರಿಸುವಾಗ, ಪೇಪರ್‌ ಮೇಲಿನ ರಂಧ್ರ ಕಾಣಿಸುತ್ತದೆ. ಆದರೆ, ನೋಟಿನ ಮೇಲೆ ನೀವು ಮೊದಲೇ ಮಾಡಿದ್ದ ಕತ್ತರಿ ಕೆಲಸ ಯಾರಿಗೂ ಕಾಣಿಸುವುದಿಲ್ಲ. ಪೆನ್ಸಿಲ್‌ಅನ್ನು ನೋಟಿನ ರಂಧ್ರದೊಳಗೆ ತೂರಿಸುವಾಗ, ಜಾಗೃತೆ ವಹಿಸಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.