ಅಂತರಿಕ್ಷದ ಭಯೋತ್ಪಾದಕ!

ಭೂಮಿಯ ಸಮೀಪದಲ್ಲಿ ಕ್ಷುದ್ರಗ್ರಹ! 250- 969 ಮೀಟರ್‌ ಸುತ್ತಳತೆ

Team Udayavani, Aug 29, 2019, 5:42 AM IST

u-56

ಡೈನೋಸಾರ್‌ಗಳು ಭೂಮಿ ಮೇಲಿಂದ ಹೇಗೆ ನಶಿಸಿದವು ಹೇಳಿ. ಅದಕ್ಕೆ ಖಚಿತ ಕಾರಣ ಈವರೆಗೆ ಪತ್ತೆ ಹಚ್ಚಿಲ್ಲ. ಈ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಅವುಗಳಲ್ಲಿ ಜನಪ್ರಿಯವಾದ ಸಿದ್ಧಾಂತ ಎಂದರೆ ಕ್ಷುದ್ರಗ್ರಹವೊಂದು ಭೂಮಿಗೆ ಬಡಿದು ಅದರಿಂದ ಸೃಷ್ಟಿಯಾದ ಪ್ರಳಯಕ್ಕೆ ಡೈನೋಸಾರ್‌ಗಳು ಬಲಿಯಾದವು ಎನ್ನುವುದು. ಈ ವಿಚಾರ ಈಗ ಯಾಕೆ ಬಂತೆಂದರೆ ಜಗತ್ತಿನ ಅತಿ ದೊಡ್ಡ ಕಟ್ಟಡ ಎಂಬ ಖ್ಯಾತಿಯ ಭುರ್ಜ್‌ ಖಲೀಫಾಗಿಂತ ಒಂಚೂರು ಕಡಿಮೆ ಎತ್ತರದ ಆಕಾಶಕಾಯವೊಂದು ಭೂಮಿಯತ್ತ ಬರುತ್ತಿದೆ. ಆದರೆ ಭಯ ಬೇಡ ಅದೇನು ಭೂಮಿಗೆ ಅಪ್ಪಳಿಸುವುದಿಲ್ಲ. ಭೂಮಿಯ ಸಮೀಪದಲ್ಲಿ ಹಾದು ಹೋಗುತ್ತದಷ್ಟೆ. ಈ ಕ್ಷುದ್ರಗ್ರಹಕ್ಕೆ “2000QW7′ ಎಂದು ನಾಮಕರಣ ಮಾಡಲಾಗಿದೆ.

ಎಷ್ಟು ಹತ್ತಿರ ಬರುತ್ತಿದೆ?
ಭೂಮಿಯ ಹತ್ತಿರ ಬರಲಿದೆ ಎಂದಾಕ್ಷಣ ನೂರಿನ್ನೂರು ಕಿ.ಮೀ ದೂರ ಎಂದುಕೊಳ್ಳಬೇಡಿ. 30 ಲಕ್ಷ ಮೈಲಿಗಳಷ್ಟು ದೂರದಲ್ಲೇ ಅದು ಹಾದು ಹೋಗಲಿದೆ. ಅಯ್ಯೋ ಲಕ್ಷ ಮೈಲಿಯಷ್ಟು ದೂರದವರೆಗೆ ಬಂದು ಟಾಟಾ ಬೈಬೈ ಹೇಳುವ ಕಲ್ಲೊಂದಕ್ಕೆ ಯಾಕಿಷ್ಟು ಆತಂಕ ಎಂದುಕೊಳ್ಳಬೇಡಿ. ಎಕೆಂದರೆ ಸುಮಾರು 40 ಲಕ್ಷ ಮೈಲಿಗಳ ಅಂತರದ ಒಳಗೆ ಹಾದು ಹೋಗುವ ಯಾವುದೇ ಆಕಾಶಕಾಯವನ್ನು ಬಾಹ್ಯಾಕಾಶ ಸಂಸ್ಥೆಗಳು “ಅಪಾಯಕಾರಿ’ ಎಂದು ಪರಿಗಣಿಸುತ್ತವೆ. ಈ ಕ್ಷುದ್ರಗ್ರಹ ಆಪಾಯಕಾರಿ ವಲಯದೊಳಗೆ ಬಂದರೂ, ಭೂಮಿಗೆ ಗಂಡಾಂತರ ತರುವ ಆಕಾಶಕಾಯಗಳ ಪಟ್ಟಿ ಉದ್ದವಿದೆ. ಆದರಲ್ಲಿ 2000ಕಿಗ7 ಇಲ್ಲ!

ಇದೇ ಮೊದಲಲ್ಲ
ಗಂಟೆಗೆ 23,100 ಕಿ.ಮೀ ವೇಗದಲ್ಲಿ ಇದು ಚಲಿಸುತ್ತಿದೆ. ಈ ಹಿಂದೆಯೂ 2000ಕಿಗ7 ಕ್ಷುದ್ರಗ್ರಹ ಭೂಮಿಯ ಸಮೀಪದಲ್ಲಿ ಹಾದು ಹೋಗಿತ್ತು. ಅದು ಸೆಪ್ಟೆಂಬರ್‌ 1, 2000 ನೇ ಇಸವಿಯಲ್ಲಿ. ಈ ಬಾರಿಯೂ ಸೆಪ್ಟೆಂಬರ್‌ 1ರಂದೇ ಭೂಮಿಯನ್ನು ಹಾದು ಹೋಗಲಿದೆ. ಅದರ ಮುಂದಿನ ಭೇಟಿ ಅಕ್ಟೋಬರ್‌ 19, 2038ನೇ ಇಸವಿಗೆ.

ಕ್ಷುದ್ರಗ್ರಹ ಮತ್ತು ಉಲ್ಕೆಗಳು
ಕ್ಷುದ್ರಗ್ರಹ ಎಂದರೆ, ಗ್ರಹಗಳಂತೆಯೇ ಸೂರ್ಯನನ್ನು ಸುತ್ತು ಹಾಕುವ ಕಲ್ಲಿನ ತುಣುಕು. ಯಾವ ರೀತಿ ಸೌರಮಂಡಲದ ಪ್ರತಿಯೊಂದು ಗ್ರಹಗಳಿಗೆ ಅದರದ್ದೇ ಆದ ಪಧ ಇದೆಯೋ ಅದೇ ರೀತಿ ಕ್ಷುದ್ರಗ್ರಹಗಳಿಗೂ ಅದರದ್ದೇ ಆದ ಪಥ ಇರುತ್ತದೆ. ಕ್ಷುದ್ರಗ್ರಹಗಳು, ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹದ ಪಥದಲ್ಲಿ ಇವು ಕಂಡುಬರುತ್ತವೆ. ಎರಡು ಕ್ಷುದ್ರಗ್ರಹಗಳು ಒಂದಕ್ಕೊಂದು ಢಿಕ್ಕಿ ಹೊಡೆದಾಗ ಸಿಡಿಯುವ ಚೂರುಗಳೇ ಉಲ್ಕೆಗಳು. ಪ್ರತಿನಿತ್ಯ ಚಿಕ್ಕ ಗಾತ್ರದ ಉಲ್ಕೆಗಳು ಭೂಮಿಗೆ ಬೀಳುತ್ತಲೇ ಇರುತ್ತವೆ. ಆದರೆ, ಇವು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮುನ್ನವೇ ಉರಿದು ನಾಶವಾಗುತ್ತವೆ. ಕ್ಷುದ್ರಗ್ರಹಗಳ ಉಗಮ ಸೌರಮಂಡಲದ ಉಗಮದ ಸಮಯದಲ್ಲೇ ಆಗಿತ್ತು.

ಹರ್ಷ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.