ಗಾದೆ ಪುರಾಣ 


Team Udayavani, Nov 8, 2018, 7:00 AM IST

gade.png

1. ಅತಿ ಮುದ್ದು ಒಳ್ಳೆಯದಲ್ಲ
ಅಂಕೆ ಶಂಕೆ ಇಲ್ಲದ ಮಕ್ಕಳು, ಮುಂದೆ ದೊಡ್ಡವರಾದ ಮೇಲೆ ಸಮಾಜಕಂಟಕರಾಗುವ ಸಂದರ್ಭವೇ ಹೆಚ್ಚು. ಇವರ ಪೈಕಿ ಕೆಲವರು, ತಮ್ಮ ಕೆಟ್ಟ ನಡತೆಗೆ ಹೆತ್ತವರು ಕಲಿಸಿದ ಪಾಠವೇ ಕಾರಣ ಎನ್ನುತ್ತಾರೆ. ಅತಿಯಾದ ಮುದ್ದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗಬಹುದು. ಬಾಲ್ಯದಿಂದಲೇ ಮಕ್ಕಳನ್ನು ತಿದ್ದುವ ಕೆಲಸವಾಗಬೇಕು. ಸರಿ-ತಪ್ಪುಗಳ ಅರಿವು ಮೂಡಿಸಬೇಕು. ಆ ಮೂಲಕ ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗಬೇಕು. 

2. ಮನೆಯೇ ಮಂತ್ರಾಲಯ
ಪ್ರತಿಯೊಬ್ಬರಿಗೂ ಮನೆಯೇ ಸ್ವರ್ಗ. ಹೊರಗಿನ ಪ್ರಪಂಚದ ಕಷ್ಟನಷ್ಟ, ಅಪಮಾನ, ಹಿಂಸೆ, ದುಗುಡ ದುಮ್ಮಾನ, ಬಳಲಿಕೆ ಮುಂತಾದವನ್ನು ಮರೆತು ನಾವು ನಾವಾಗಿಯೇ ಇರುತ್ತಾ, ನಮ್ಮವರೊಂದಿಗೆ ಸಮಾಧಾನ ಕಂಡುಕೊಳ್ಳುವ ನೆಲೆಯೇ ಮನೆ. ಹೀಗಾಗಿ ಮನೆಯೇ ಮಂತ್ರಾಲಯ, ಅದುವೇ ದೇವಾಲಯ. ಮನೆಯನ್ನು ಸ್ವತ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳಬೇಕು. 

3. ಉಕ್ಕಿ ಹೋದ ಹಾಲಿಗೆ ಬಿಕ್ಕಿ ಬಿಕ್ಕಿ ಅತ್ತು ಫ‌ಲವೇನು?
ಹಾಲು ಕಾಯಿಸುವಾಗ ಗಮನವನ್ನು ಎತ್ತಲೋ ಹರಿಸಿ, ಅದು ಉಕ್ಕಿ ಚೆಲ್ಲಿ ಹೋದಾಗ, “ಅಯ್ಯೋ ಹಾಲು ಹೋಯಿತಲ್ಲಾ’ ಎಂದು ಬೇಸರಿಸಿಕೊಳ್ಳುವುದು ಯಾಕೆ? ಸರಿಯಾದ ಸಿದ್ಧತೆಯಿಲ್ಲದೆ, ತರಾತುರಿಯಲ್ಲಿ ಏನನ್ನಾದರೂ ಮಾಡಿ, ವಿಫ‌ಲರಾದ ಮೇಲೆ ತನ್ನನ್ನು ಅಥವಾ ಬೇರೆಯವರನ್ನು ನಿಂದಿಸಿದರೆ ಆಗುವ ಲಾಭವಾದರೂ ಏನು?

4. ಸೂತ್ರವಿದ್ದರೆ ಎಲ್ಲವೂ ಸುಸೂತ್ರ
ಸೂತ್ರವಿಲ್ಲದ ಗಾಳಿಪಟ ಗಿರಕಿ ಹೊಡೆದು ನೆಲಕ್ಕೆ ಬೀಳುತ್ತದೆ. ನಮ್ಮ ಬಾಳಿನಲ್ಲಿ ನೀತಿಸಂಹಿತೆಯೇ ಸೂತ್ರ. ಬಾಳಿಗೆ ರೀತಿ ನೀತಿ ಇಲ್ಲದಿದ್ದರೆ ಗೊತ್ತು ಗುರಿಯಿಲ್ಲದೆ, ಜನರಿಂದ ಥೂ, ಛೀ ಎನ್ನಿಸಿಕೊಂಡು ನಿರರ್ಥಕವಾಗಿ ಬಾಳುತ್ತೇವೆ. ನಮ್ಮ ಬಾಳಿಗೆ ಸೂತ್ರ ಹಾಕುವವರು ಪಾಲಕರು, ಶಿಕ್ಷಕರು ಹಾಗೂ ಹಿರಿಯರು. ಅವರ ಮಾರ್ಗದರ್ಶನದಲ್ಲಿ ಬದುಕು ಸಾಗಿದರೆ ಉತ್ತಮ.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.