ಕಣ್‌ ತೆರೆದು ನೋಡಿ


Team Udayavani, Mar 28, 2019, 6:00 AM IST

s-3

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ವನ್ಯಜೀವಿ ಜಗತ್ತಿನ ಬಾಝಿಗರ್‌!
ಹಾಲಿವುಡ್‌ ನಟ ಶಾರುಖ್‌ ಖಾನ್‌ನನ್ನು ಕೀರ್ತಿ ಶಿಖರದ ಉತ್ತುಂಗಕ್ಕೆ ಏರಿಸಿದ್ದು ಸಿನಿಮಾಗಳಲ್ಲಿ ಆತ ನಿರ್ವಹಿಸುತ್ತಿದ್ದ ಲವರ್‌ ಬಾಯ್‌ ಪಾತ್ರಗಳು. ಆತನನ್ನು ಪ್ರೀತಿಯ ರಾಯಭಾರಿ ಎಂದರೂ ತಪ್ಪಿಲ್ಲ. ಒಂದು ಕಾಲದಲ್ಲಿ, ಅಷ್ಟೇ ಯಾಕೆ ಈಗಲೂ “ಬಾಝಿಗರ್‌’ ಶಾರುಖ್‌ನಂತೆ ಪ್ರೀತಿಸುವ ಪತಿ ಸಿಗಬೇಕೆಂದು ಅಪೇಕ್ಸಿಸುವ ಹುಡುಗಿಯರಿದ್ದಾರೆ. ಬಾಝಿಗರ್‌ ಸಿನಿಮಾದಲ್ಲಿ “ಸೋತು ಗೆಲ್ಲುವವನೇ ನಿಜವಾದ ವಿಜೇತ’ ಎಂಬ ಅರ್ಥ ಬರುವ ಸಂಭಾಷಣೆಗೆ ಅನೇಕರು ಮಾರುಹೋಗಿದ್ದರು. ಅಲ್ಲಿ ಆತ ಪ್ರಿಯತಮೆಗೋಸ್ಕರ ಕಾರ್‌ ರೇಸ್‌ನಲ್ಲಿ ಸೋಲುತ್ತಾನೆ. ಇದೇ ಪ್ರವೃತ್ತಿ ವನ್ಯಜೀವಿ ಜಗತ್ತಿನಲ್ಲೂ ಇದೆ ಎಂದರೆ ಅಚ್ಚರಿ ಪಡಬೇಡಿ. ವನ್ಯಜೀವಿ ಜಗತ್ತಿನ ಈ ಬಾಝಿಗರ್‌ ಯಾರು ಗೊತ್ತಾ? ನಾಯಿ. ಮನುಷ್ಯರ ಸಾಂಗತ್ಯದಲ್ಲಿರುವ ನಾಯಿ ಈ ವರ್ತನೆ ತೋರಿದ್ದರಲ್ಲಿ ಅಚ್ಚರಿಯಿಲ್ಲ. ಮನುಷ್ಯ ನಾಯಿಯನ್ನು ನೋಡಿ ಕಲಿಯಬೇಕಾದ ವಿಚಾರಗಳು ತುಂಬಾ ಇರುವಂತೆಯೇ, ನಾಯಿಯೂ ಮನುಷ್ಯರನ್ನು ನೋಡಿ ಅನೇಕ ವಿಚಾರಗಳನ್ನು ಕಲಿಯುತ್ತದೆ ಎನ್ನಬಹುದು. ಗಂಡು ನಾಯಿ ಹೆಣ್ಣು ನಾಯಿಯೊಡನೆ ಆಟವಾಡುವಾಗ ತಾನು ಗೆಲ್ಲುವುದು ಶತಸಿದ್ಧ ಎನ್ನುವಂಥ ಪರಿಸ್ಥಿತಿಯಲ್ಲೂ ಸೋತುಬಿಡುತ್ತದೆ. ಹೆಣ್ಣು ನಾಯಿಗೆ ಸೋತು ಶರಣಾಗುತ್ತದೆ. ಇದು ಪ್ರೀತಿಯ ದ್ಯೋತಕವೇ ಸರಿ. ನಾಯಿಗಳೂ ಶಾರುಖ್‌ನ ಸಿನಿಮಾ ನೋಡಿದ್ದವಾ ಗೊತ್ತಿಲ್ಲ!

ಏನನ್ನೂ ಸುಲಭಕ್ಕೆ ಬಿಟ್ಟುಕೊಡದ ಗಿಣಿ
ಎಲ್ಲಾ ಪ್ರಾಪಂಚಿಕ ಬಂಧನಗಳನ್ನು ಬಿಟ್ಟವರು ಸನ್ಯಾಸಿಯಾಗುತ್ತಾರೆ. ಬಿಡದವರು ಉಡ ಆಗಬಹುದು. ಏಕೆಂದರೆ ಉಡದ ಹಿಡಿತ ಅಂದರೆ ಹಿಡಿತ. ಒಮ್ಮೆ ಗಟ್ಟಿಯಾಗಿ ಏನನ್ನೇ ಹಿಡಿದುಕೊಂಡರೂ ಬಿಡುವುದಿಲ್ಲ. ಹಿಂದೆ ರಾಜಮಹಾರಾಜರ ಕಾಲದಲ್ಲೆಲ್ಲಾ ಉಡವನ್ನು ಕೋಟೆ ಹತ್ತಲು ಬಳಸುತ್ತಿದ್ದರು ಎಂಬ ಪ್ರತೀತಿಯೂ ಇದೆ. ಅದೇ ರೀತಿ ಪಕ್ಷಿಗಳಲ್ಲೂ ಏನನ್ನೇ ಹಿಡಿದುಕೊಂಡರೂ ಅಷ್ಟು ಸುಲಭವಾಗಿ ಬಿಡದ ಪಕ್ಷಿಯೊಂದಿದೆ. ಅದು ಗಿಳಿ. ಅದರ ಬಿಗಿಯಾದ ಹಿಡಿತಕ್ಕೆ ಪ್ರಕೃತಿಯೂ ಸಾಥ್‌ ನೀಡಿದೆ. ಅದು ಹೇಗೆಂದರೆ ಅದರ ಕಾಲಿನ ರಚನೆ. ಎಲ್ಲಾ ಪಕ್ಷಿಗಳಂತೆ ಅವುಗಳಿಗೂ ಕಾಲಲ್ಲಿ 4 ಬೆರಳುಗಳಿವೆ. ಒಂದು ವ್ಯತ್ಯಾಸವೆಂದರೆ ಮಿಕ್ಕ ಪಕ್ಷಿಗಳಲ್ಲಾದರೆ ನಾಲ್ಕರಲ್ಲಿ ಮೂರು ಬೆರಳು ಮುಂದಕ್ಕೆ ಚಾಚಿದ್ದು, ಒಂದು ಬೆರಳು ಕೊಂಚ ಹಿಂದಕ್ಕೆ ಚಾಚಿರುತ್ತದೆ. ಕೋಳಿಯನ್ನು ನೆನೆಸಿಕೊಂಡರೆ ಈ ವಿಚಾರ ಚೆನ್ನಾಗಿ ಮನದಟ್ಟಾಗುತ್ತದೆ. ಆದರೆ ಗಿಳಿಗಳಲ್ಲಿ ನಾಲ್ಕರಲ್ಲಿ ಎರಡು ಮುಂದಕ್ಕೆ, ಎರಡು ಬೆರಳು ಹಿಂದಕ್ಕೆ ಚಾಚಿಕೊಂಡಿರುತ್ತದೆ. ಈ ಕಾರಣಕ್ಕೆ ಯಾವುದೇ ವಸ್ತುವನ್ನು ಗಿಳಿಗಳು ಬಿಗಿಯಾಗಿ ಹಿಡಿದುಕೊಳ್ಳಬಹುದು.

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.