ಪಂಡಿತರೇ, ಉತ್ತರ ಕೊಡಿ!


Team Udayavani, May 24, 2018, 6:00 AM IST

x-9.jpg

ಥಾನೇಶ್ವರವನ್ನು ಆಳುತ್ತಿದ್ದ ದೊರೆ ಪಂಡಿತರನ್ನು ಗೌರವದಿಂದ ಕಾಣುತ್ತಿದ್ದ. ಅವರಿಗೆ ತನ್ನ ಆಸ್ಥಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದ. ಹೀಗಾಗಿ ಪಂಡಿತರಿಗೆ ತಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸವಿತ್ತು. ರಾಜರೇ ತಮ್ಮ ಪರವಾಗಿರುವಾಗ ಯಾರಿಗೂ ಅಂಜುವ ಅಗತ್ಯವಿಲ್ಲವೆಂದು ಅವರು ಭಾವಿಸಿದ್ದರು. ಒಬ್ಬ ಅನಾಥ ಬಾಲಕ ಪಂಡಿತರ ಕಣ್ಣಿನಲ್ಲಿ ತುಳುಕುತ್ತಿದ್ದ ದರ್ಪವನ್ನು ಗಮನಿಸಿದ. ಮಾರನೇ ದಿನ ಆ ಬಾಲಕ ನೇರವಾಗಿ ದೊರೆಯ ಸಭೆಗೆ ಹೋದ. ಪಂಡಿತರು ನಡೆಸಿದ ವಾದ ವಿವಾದಗಳನ್ನು ದೂರದಲ್ಲೇ ಕುಳಿತುಕೊಂಡು ಆಲಿಸಿದ. ಬಳಿಕ ಪ್ರಜೆಗಳು ತಮಗೇನಾದರೂ ಸಂದೇಹವಿದ್ದರೆ ಕೇಳಬಹುದೆಂದು ದೊರೆ ಹೇಳಿದ. ಬಾಲಕ ಎದ್ದು ನಿಂತ. ಅವನ ಹರಿದ ಅಂಗಿ ಕಂಡು ಕಂಡು ಪಂಡಿತರು ತಿರಸ್ಕಾರದಿಂದ ನಗೆಯಾಡಿದರು. 

ಬಾಲಕ ಎಲ್ಲರಿಗೂ ಸಲ ವಂದಿಸಿ “ನನ್ನದೊಂದು ಪ್ರಶ್ನೆಯಿದೆ. ಬುದ್ಧಿ ಅನ್ನುವುದು ಎಲ್ಲಿರುತ್ತದೆ ಎಂದು ಪಂಡಿತರು ದಯವಿಟ್ಟು ತಿಳಿಸಬೇಕು’ ಎಂದು ಪ್ರಾರ್ಥಿಸಿದ. “ಅಷ್ಟೂ ತಿಳಿಯದೆ? ಬುದ್ಧಿ ವಾಸವಾಗಿರುವುದು ತಲೆಯಲ್ಲಿ’ ಎಂದ ಒಬ್ಬ ಪಂಡಿತ. “ಇಲ್ಲ, ಬುದ್ಧಿಯ ವಾಸ ಎದೆಯಲ್ಲಿ’ ಎಂದು ಇನ್ನೊಬ್ಬ ಪಂಡಿತ ಹೇಳಿದ. ಒಬ್ಬೊಬ್ಬರು ಒಂದೊಂದು ಬಗೆಯಿಂದ ಉತ್ತರಿಸಿದರು. ದೊರೆಗೆ ಸಮಾಧಾನವಾಗಲಿಲ್ಲ. ಬಾಲಕ, “ದೊರೆಗಳೇ, ಈ ಪಂಡಿತರ ನಡುವೆ ಕುಳಿತುಕೊಳ್ಳಲು ನನಗೆ ಅವಕಾಶ ದಯಪಾಲಿಸಿದರೆ ನಾನು ಇದಕ್ಕೆ ಸಮಾಧಾನ ಹೇಳುತ್ತೇನೆ’ ಎಂದು ಕೋರಿದ. 

ಪಂಡಿತರು ನಿಕೃಷ್ಟ ದಷ್ಟಿಯಿಂದ ಬಾಲಕನನ್ನು ನೋಡಿದರು. ಆದರೆ ದೊರೆ ಬಾಲಕನಿಗೆ ಪಂಡಿತರ ನಡುವೆ ಕುಳಿತುಕೊಳ್ಳಲು ಅವಕಾಶ ನೀಡಿದ. ಹುಡುಗ “ಎಂಥಾ ಕಠಿಣ ಪ್ರಶ್ನೆಯಿದ್ದರೂ ಸರಿಯಾದ ಉತ್ತರ ಬರುವುದು ತುಟಿಗಳಿಂದ. ಹೀಗಾಗಿ ಬುದ್ದಿ ಇರುವುದು ತುಟಿಗಳಲ್ಲಿ’ ಎಂದು ಹೇಳಿದ. ನಂತರ ಬಾಲಕ ಎರಡನೇ ಪ್ರಶ್ನೆ ಕೇಳಿದ “ಬುದ್ಧಿ ಏನನ್ನು ತಿನ್ನುತ್ತದೆ?’. ಪಂಡಿತರು “ತಲೆ ಹರಟೆಯ ಪ್ರಶ್ನೆಗಳನ್ನು ಕೇಳಬೇಡ’ ಎಂದು ಸಿಟ್ಟು ಮಾಡಿಕೊಂಡರು.

ಬಾಲಕ, “ಮಹಾರಾಜ, ಪಂಡಿತರಿಗಿಂತ ಎತ್ತರದ ಆಸನದಲ್ಲಿ ಕೂರಲು ಅವಕಾಶವಿತ್ತರೆ ಉತ್ತರ ಹೇಳುತ್ತೇನೆ’ ಎಂದನು. ರಾಜ ಒಪ್ಪಿಗೆಯಿತ್ತ. “ಬುದ್ಧಿ ಸಮಯವನ್ನು ತಿನ್ನುತ್ತದೆ. ಜಾಣನಾದವನು ಯಾವುದೇ ಕೆಲಸವನ್ನು ತುಂಬ ಹೊತ್ತು ಯೋಚಿಸದೆ ಮಾಡುವುದಿಲ್ಲ’ ಎಂದು ತನ್ನ ಉತ್ತರವನ್ನು ತಿಳಿಸಿದ. ಬಾಲಕನ ಜಾಣತನಕ್ಕೆ ರಾಜ ತಲೆದೂಗಿದ. “ಬುದ್ಧಿ ಎಲ್ಲಿ ಕುಳಿತುಕೊಳ್ಳುತ್ತದೆ?’ ಎಂದು ಬಾಲಕ ಪಂಡಿತರನ್ನು ಕೇಳಿದ. “ಇದೇನು ಹುಚ್ಚುತನ?! ಬುದ್ಧಿಗೆ ಕುಳಿತುಕೊಳ್ಳಲು ದೇಹವಿದೆಯೇ?’ ಎಂದು ಪಂಡಿತರು ಮರುಪ್ರಶ್ನಿಸಿದರು. “ನನಗೆ ಒಂದು ಕ್ಷಣ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಅವಕಾಶವಿತ್ತರೆ ಇದಕ್ಕೆ ಉತ್ತರ ಹೇಳಬಲ್ಲೆ’ ಎಂದ ಬಾಲಕ. ದೊರೆ ತನ್ನ ಸಿಂಹಾಸನದಲ್ಲಿ ಅವನನ್ನು ಕೂರಿಸಿ, “ಈಗ ಹೇಳು’ ಎಂದು ಬೆನ್ನು ತಟ್ಟಿದ. ಬಾಲಕ ಎಲ್ಲ ಪಂಡಿತರತ್ತ ಹೆಮ್ಮೆಯಿಂದ ನೋಡಿ “ಬುದ್ಧಿ ಮನಸ್ಸು ಮಾಡಿದರೆ ದೊರೆಯ ಸಿಂಹಾಸನದಲ್ಲಿ ಕೂರಬಲ್ಲುದು’ ಎಂದು ಹೇಳಿದ. ಪಂಡಿತರು ತಲೆತಗ್ಗಿಸಿದರು. ಪಂಡಿತರ ದರ್ಪ ಅಡಗಿಸಿದ ಬಾಲಕ ಮುಂದೆ ಮಹಾ ಪಂಡಿತನೆಂದು, ಕವಿಯೆಂದು ಪ್ರಸಿದ್ಧನಾಗಿ ಸಂಸ್ಕೃತದಲ್ಲಿ ಮೊತ್ತ ಮೊದಲ ಕಾದಂಬರಿಯನ್ನು ಬರೆದ ಬಾಣಭಟ್ಟ!

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.