ನಾಭಾಗ


Team Udayavani, Apr 20, 2017, 3:45 AM IST

purana-patra1.jpg

ನಭಗ ಎನ್ನುವ ರಾಜನಿಗೆ ಹಲವರು ಮಕ್ಕಳು. ಕೊನೆಯವನು ನಾಭಾಗ. ಅವನು ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋದವನು ಅಲ್ಲಿಯೇ ವ್ಯಾಸಂಗ ಮಾಡುತ್ತ ಬಹುಕಾಲವನ್ನು ಕಳೆದ. ಈ ಕಡೆ ಅವನ ತಂದೆಯು ತಪಸ್ಸಿಗೆ ಹೋದ. ಅವನ ಮಕ್ಕಳು ನಾಭಾಗನನ್ನು ಬಿಟ್ಟು ತಾವೇ ಎಲ್ಲ ರಾಜ್ಯವನ್ನೂ ಹಂಚಿಕೊಂಡರು. 

ನಾಭಾಗನು ಹಿಂದಿರುಗಿ ಬಂದಾಗ ಅಣ್ಣಂದಿರಲ್ಲಿ ತನ್ನ ಭಾಗವನ್ನು ಕೇಳಿದ. ಅವರು “ನಿನ್ನನ್ನು ಮರೆತೇಬಿಟ್ಟೆವು. ಈಗ ನೀನು ನಮ್ಮ ತಂದೆಯನ್ನೇ ನಿನ್ನ ಪಾಲಾಗಿ ತೆಗೆದುಕೋ’ ಎಂದರು. ನಾಭಾಗನು ತಂದೆಯ ಬಳಿಗೆ ಹೋಗಿ ನಡೆದಿದ್ದನ್ನು ಹೇಳಿದ. ಅವನು “ನಾಭಾಗ, ನಿನ್ನ ಅಣ್ಣಂದಿರು ನಿನಗೆ ಮೋಸ ಮಾಡಿದ್ದಾರೆ. ನಾನು ಹೇಳಿದಂತೆ ಮಾಡು.

ಹತ್ತಿರದಲ್ಲಿಯೇ ಅಂಗೀರಸರೆನ್ನುವ ಋಷಿಗಳು ಹನ್ನೆರಡು ದಿನಗಳ ಯಾಗವನ್ನು ಪ್ರಾರಂಭಿಸಿದ್ದಾರೆ. ಅವರು ದೊಡ್ಡ ಪಂಡಿತರು. ಆದರೆ, ಆರನೆಯ ದಿನದ ಕರ್ಮವನ್ನು ಮಾಡಲು ತಿಳಿಯದೆ ದಿಕ್ಕುಗೆಟ್ಟಿದ್ದಾರೆ. ನೀನುಹೋಗಿ ಆರನೆಯ ದಿನದ ಕರ್ಮಕ್ಕೆ ಅಗತ್ಯವಾದ ಎರಡು ಮಂತ್ರಗಳನ್ನು ಹೇಳಿಕೊಡು. ಯಾಗವು ಮುಗಿದಾಗ ಅವರು ಸ್ವರ್ಗಕ್ಕೆ ತೆರಳುತ್ತಾರೆ. ನಿನಗೆ ಅಪಾರ ಧನವನ್ನು ಕೊಡುತ್ತಾರೆ’ ಎಂದು ಹೇಳಿದ.

ನಾಭಾಗನು ಅದರಂತೆಯೇ ಮಾಡಿದ. ಋಷಿಯು ಅವನಿಗೆ ಅಪಾರ ಧನವನ್ನು ಕೊಟ್ಟ. ಅವನು ಹೊರಡಬೇಕೆಂದಿದ್ದಾಗ ಕಪ್ಪು ದೇಹದ ವ್ಯಕ್ತಿಯು ಕಾಣಿಸಿಕೊಂಡು, “ಈ ಧನವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀಯಾ? ಅದು ನನ್ನದು’ ಎಂದು ತಡೆದ.

ನಾಭಾಗನು “ಯಾಗವನ್ನು ಮಾಡಿದ ಅಂಗೀರಸರೇ ಇದನ್ನು ನನಗೆ ಕೊಟ್ಟಿದ್ದಾರೆ’ ಎಂದ. ಇಬ್ಬರಿಗೂ ವಾದ ನಡೆಯಿತು. ಕಡೆಗೆ ಆ ದೀರ್ಘ‌ ದೇಹಿಯು, “ನಾಭಾಗ, ನಾವಿಬ್ಬರೂ ಜಗಳವಾಡುವುದು ಬೇಡ. ನಿನ್ನ ತಂದೆಯನ್ನೇ ಕೇಳ್ಳೋಣ, ಅವನ ತೀರ್ಮಾನವನ್ನು ಇಬ್ಬರೂ ಒಪ್ಪಿಕೊಳ್ಳೋಣ’ ಎಂದ.

ಇಬ್ಬರೂ ನಭಗನ ಬಳಿಗೆ ಹೋದರು. ಅವನು ಇಬ್ಬರ ಮಾತನ್ನು ಕೇಳಿದ. ಅನಂತರ ಮಗನಿಗೆ, “ಮಗೂ, ಈತ ಸಾಕ್ಷಾತ್‌ ರುದ್ರ ದೇವರು. ಹಿಂದೆ ದಕ್ಷನು ಯಾಗ ಮಾಡಿದಾಗಲೇ ಯಾಗದಲ್ಲಿ ಉಳಿದದ್ದೆಲ್ಲ ರುದ್ರ ದೇವನಿಗೆ ಸೇರುತ್ತದೆ ಎಂದು ಋಷಿಗಳು ತೀರ್ಮಾನ ಮಾಡಿದ್ದಾರೆ’ ಎಂದು ಹೇಳಿದ. ನಾಭಾಗನು ಸಂಪತ್ತನ್ನೆಲ್ಲ ರುದ್ರ ದೇವನಿಗೆ ಅರ್ಪಿಸಿ ನಮಸ್ಕರಿಸಿದ. ರುದ್ರನು “ನೀನು ನಿನ್ನ ತಂದೆ ಇಬ್ಬರೂ ಧರ್ಮದಂತೆ ನಡೆದುಕೊಳ್ಳುವವರು. ಈ ದ್ರವ್ಯವನ್ನು ನೀನೇ ಇಟ್ಟುಕೋ. ನಾನು ನಿನಗೆ ಬ್ರಹ್ಮಜ್ಞಾನವನ್ನು ಉಪದೇಶಿಸುತ್ತೇನೆ. ನೀನು ಸಾರ್ವಕಾಲಿಕವಾಗಿ ಸತ್ಯವಂತನಾಗಿರು’ ಎಂದು ಹೇಳಿ ಬ್ರಹ್ಮಜ್ಞಾನವನ್ನು ಉಪದೇಶಿಸಿದ.

– ಪ್ರೊ. ಎಲ್‌.ಎಸ್‌. ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಕೃತಿಯಿಂದ)

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.