ಸಾಧುವಿನ ಕತೆ


Team Udayavani, Jan 3, 2019, 12:30 AM IST

x-39.jpg

ದೇವಶರ್ಮ ಎಂಬ ಒಬ್ಬ ಸಾಧು ಇದ್ದ. ಅವನ ಗುಣ ಮಾತ್ರ ನಿಜವಾದ ಸಾಧುವಿನಂತೆ ಇರಲಿಲ್ಲ! ಆತನಿಗೆ ಹಣದ ದುರಾಸೆ ಇತ್ತು. ಆತ ಹಣದ ಒಂದು ದೊಡ್ಡ ಗಂಟನ್ನೇ ತನ್ನ ಕೋಣೆಯಲ್ಲಿ ಇಟ್ಟುಕೊಂಡಿದ್ದ. ಒಬ್ಬ ಜಾಣ ಕಳ್ಳನಿಗೆ ಇದರ ವಿಷಯ ತಿಳಿಯಿತು. ತನ್ನನ್ನು ಶಿಷ್ಯನನ್ನಾಗಿ ಮಾಡಿಕೊಳ್ಳಬೇಕೆಂದು ಆ ಕಳ್ಳ ದೇವಶರ್ಮನನ್ನು ಬೇಡಿಕೊಂಡ. ನಿಜಸಂಗತಿ ಗೊತ್ತಾಗದೆ ಮೋಸಹೋದ ದೇವಶರ್ಮ ಕಳ್ಳನನ್ನು ಶಿಷ್ಯನನ್ನಾಗಿ ಮಾಡಿಕೊಂಡ! ಈ ಕಳ್ಳ, ಗುರು ದೇವಶರ್ಮನಿಗೆ ಕಪಟ ಭಯಭಕ್ತಿ ತೋರಿಸಿ ವಿಶ್ವಾಸ ಗಳಿಸಿದ್ದ. ಕೆಲವು ಕಾಲದ ನಂತರ ದೇವಶರ್ಮ, ತೀರ್ಥಯಾತ್ರೆಗೆ ಹೊರಟ. ಜೊತೆಯಲ್ಲೇ ತನ್ನ ಹಣದ ಗಂಟನ್ನೂ ಇಟ್ಟುಕೊಂಡ. ಶಿಷ್ಯನೂ ಹಿಂದೆ ಹೊರಟ. ಅವರೊಂದು ಕಾಡಿನ ದಾರಿಯಲ್ಲಿ ಹೋಗುತ್ತಿದ್ದಾಗ ತುಸು ದೂರದಲ್ಲಿ ಒಂದು ನೀರಿನ ತೊರೆ ಕಾಣಿಸಿತು. ಈ ತೊರೆಯಲ್ಲಿ ಸ್ನಾನ ಮಾಡಲು ಹೋಗುವುದಕ್ಕೆ ಮುಂಚೆ ದೇವಶರ್ಮ, ತನ್ನ ಹಣದ ಗಂಟನ್ನು ಶಿಷ್ಯನ ಕೈಗೆ ಕೊಟ್ಟು, ತಾನು ಬರುವವರೆಗೆ ಅಲ್ಲಿಯೇ ಕಾಯುತ್ತಿರಲು ಹೇಳಿ ತೊರೆಯತ್ತ ಹೊರಟುಹೋದ.

ಸ್ವಲ್ಪ ದೂರದಲ್ಲಿ ಎರಡು ಕಾಡು ಟಗರುಗಳ ಭೀಕರವಾಗಿ ಹೋರಾಡುತ್ತಿದ್ದುದು ದೇವಶರ್ಮನಿಗೆ ಕಾಣಿಸಿತು. ಅವು ಎದುರುಬದುರಾಗಿ ಓಡಿಬಂದು ಒಂದಕ್ಕೊಂದು ಢಿಕ್ಕಿ ಹೊಡೆಯುತ್ತ ಕಾದಾಡುತ್ತಿದ್ದವು. ಆ ಎರಡು ಟಗರುಗಳ ಹಣೆಯಲ್ಲಿ ರಕ್ತ ಹರಿಯುತ್ತಿತ್ತು. ಈ ಹೋರಾಟವನ್ನು ನೋಡುತ್ತಿದ್ದವನು ದೇವಶರ್ಮ ಒಬ್ಬನೇ ಅಲ್ಲ!  ಒಂದು ಗುಳ್ಳೆನರಿ ಕೂಡ ಟಗರುಗಳಿಗೆ ಕಾಣದ ಹಾಗೆ ನಿಂತು ಅವುಗಳ ಕಾಳಗವನ್ನು  ನೋಡುತ್ತಿತ್ತು. ಬಿಸಿರಕ್ತದ ಸವಿಯಲು ಅದು ಸಮಯ ಕಾಯುತ್ತಿತ್ತು. ಎರಡು ಟಗರುಗಳು ಢಿಕ್ಕಿ ಹೊಡೆದು ಹಿಂದೆ ಹಿಂದೆ ಸರಿದಾಗ, ನರಿ ಮಧ್ಯೆ ನುಗ್ಗಿ ನೆಲದ ಮೇಲೆ ಸುರಿದಿದ್ದ ಬಿಸಿರಕ್ತವನ್ನು ನೆಕ್ಕಲು ಆರಂಭಿಸಿತು. ಟಗರುಗಳು ಮತ್ತೆ ಢಿಕ್ಕಿ ಹೊಡೆದುಕೊಳ್ಳಲು ನುಗ್ಗಿ ಬಂದಾಗ ಆ ನರಿ ಮಧ್ಯೆ ಸಿಕ್ಕಿಕೊಂಡು ನಜ್ಜುಗುಜ್ಜಾಗಿ ಕೂಡಲೇ ಸತ್ತುಹೋಯಿತು.

ಇದನ್ನೆಲ್ಲಾ ನೋಡಿ, ತೊರೆಗೆ ಹೋಗಿ, ದೇವಶರ್ಮ ಸ್ನಾನ ಮಾಡಿ ಮುಗಿಸಿ, ಶಿಷ್ಯನಿದ್ದ ಜಾಗಕ್ಕೆ ಮರಳಿ ಬಂದ. ಆದರೆ ಶಿಷ್ಯ ಅಲ್ಲೆಲ್ಲೂ ಕಾಣಲಿಲ್ಲ! ಆತ ಹಣದ ಗಂಟಿನೊಂದಿಗೆ ಪರಾರಿಯಾಗಿ ಹೋಗಿದ್ದ. 

ಕೃಪೆ- ಓರಿಯೆಂಟಲ್‌ ಲಾಂಗ್‌ಮನ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.