ಭಯಾನಕ ಜಾಕೋಬ್‌ ಈಜು ಕೊಳ


Team Udayavani, Jun 20, 2019, 5:00 AM IST

d-5

ಈ ಕೊಳ ಅಪಾಯಕಾರಿ ಎಂದು ಗೊತ್ತಿದ್ದರೂ, ಅನೇಕ ಮಂದಿ ಇಲ್ಲಿ ಪ್ರಾಣ ಕಳೆದುಕೊಂಡಿದ್ದರೂ ಈಜುವ ಸಾಹಸ ಮಾಡಲು ಅನೇಕರು ಧೈರ್ಯ ತೋರುತ್ತಾರೆ.

ಈಜು ಅಂದರೆ ಅನೇಕರಿಗೆ ಬಹು ಇಷ್ಟವಾದ ಹವ್ಯಾಸ. ಸಮುದ್ರವನ್ನೇ ಈಜಿ ಗೆದ್ದವರು ದಾಖಲೆ ನಿರ್ಮಿಸಿದವರು ನಮ್ಮ ನಡುವೆ ಇದ್ದಾರೆ. ಆದರೆ ವಿಶ್ವದಲ್ಲೇ ಅತ್ಯಂತ ಭಯಾನಕ ಎನಿಸಿಕೊಂಡ ಒಂದು ಈಜುಕೊಳವಿದೆ. ಅದರಲ್ಲಿ ಈಜಿ ಮೇಲೆ ಬರುವುದು ಸಮುದ್ರಕ್ಕಿಂತಲೂ ಕಠಿಣ ಸವಾಲಿನ ಕೆಲಸ. ಈಜಲಾಗದೆ ಪ್ರತೀ ವರ್ಷ ಸರಾಸರಿ ಒಂಭತ್ತು ಜನ ಇದರಲ್ಲಿ ಸಾವನ್ನಪ್ಪುತ್ತಾರಂತೆ. ಆದರೂ ಅಲ್ಲಿ ಸಾಹಸ ಪ್ರದರ್ಶನ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.

ತಣ್ಣಗಿನ ಕೊಳ
ಈ ಅಪಾಯಕಾರಿ ಈಜುಕೊಳವಿರುವುದು ಟೆಕ್ಸಾಸಿನ ಹಿಲ್‌ ಕಂಟ್ರಿಯ ವೆಂಬರ್ಲಿಯಲ್ಲಿ. ಸೈಪ್ರಸ್‌ ಕ್ರೀಕ್‌ ಎಂಬಲ್ಲಿರುವ “ಜಾಕೋಬ್‌ ಕೊಳ’ವೇ ಈ ಪ್ರಸಿದ್ಧ ಈಜು ತಾಣ. ಆಸ್ಟಿನ್‌ನಿಂದ ಇಲ್ಲಿಗೆ ಒಂದು ತಾಸಿನ ಪಯಣ. 1850ರ ದಶಕದಲ್ಲಿ ಅದನ್ನು ಶೋಧಿಸಿದ ಬಳಿಕ ಅದರಲ್ಲಿ ಈಜಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾರಣ ಕೊಳದ ನೀರು ಯಾವುದೇ ಋತುವಿನಲ್ಲಿಯೂ 20 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಯೇರುವುದಿಲ್ಲ. ಮೈ ಕೊರೆಯುವ ತಣ್ಣಗಿನ ಅನುಭವ ಆಹ್ಲಾದಕರವಾಗಿರುತ್ತದೆ.

ಅಪಾಯಕಾರಿ ಸುರಂಗಗಳು
ಪ್ರತೀ ಸೆಕೆಂಡಿಗೆ 640 ಲೀಟರ್‌ ನೀರು ಕೊಳವನ್ನು ತುಂಬುತ್ತದೆ. ಹಾಗೆಯೇ ತಳದಲ್ಲಿರುವ ದಾರಿಯ ಮೂಲಕ ಬ್ಲಾಂಕೊ ನದಿಗೆ ಸೇರಿ ಕಡಲಿನತ್ತ ಹೋಗುತ್ತದೆ. ಕೊಳದ ಬಾಯಿ 13 ಅಡಿ ಅಗಲವಾಗಿದೆ. ಇದರಲ್ಲಿ ಕೆಳಗಿಳಿದರೆ ನಾಲ್ಕು ಸುರಂಗಗಳಿವೆ. ಮೊದಲ ಸುರಂಗ 30 ಅಡಿ ಕೆಳಗಿಳಿದು ಲಂಬವಾಗಿ ಸಾಗಿ ನೂರು ಅಡಿಗಳ ತಳ ತಲುಪುತ್ತದೆ. 450 ಅಡಿ ಮತ್ತು 150 ಅಡಿ ಆಳವಿರುವ ಇನ್ನೆರಡು ಸುರಂಗಗಳಿವೆ. ಸುಣ್ಣದ ಕಲ್ಲು ಮತ್ತು ಜಲ್ಲಿ ಕಲ್ಲು ತುಂಬಿದ ಒಂದು ಸುರಂಗವೂ ಇದ್ದು ಅದರ ಬಾಯಿಯನ್ನು ಮುಚ್ಚಲಾಗಿದೆ. ಈಜುಗಾರ ಪರಿಣತನಲ್ಲವಾದರೆ ಸ್ವಲ್ಪ ಯಾಮಾರಿದರೂ ಸುರಂಗದೊಳಗೆ ಸೇರಿ ಹೊರ ಬರಲಾಗದೆ ಜೀವ ಕಳೆದುಕೊಳ್ಳುವುದು ಖಂಡಿತ.

ಎರಡೇ ಗಂಟೆ
ಕೊಳದ ನೀರು ಸ್ಫಟಿಕದಂತೆ ನಿರ್ಮಲವಾಗಿದೆ. ಗುಡ್ಡ ಪ್ರದೇಶದಿಂದ ಬೆಳಗುವ ಸೂರ್ಯನ ಕಿರಣಗಳಿಗೆ ಲಕಲಕ ಹೊಳೆಯುತ್ತದೆ. ನೀರಿನಲ್ಲಿ ಪಾಚಿ ಇದೆ. ವನ್ಯಮೃಗಗಳಿಗೂ ಈ ನೀರು ದಾಹ ತಣಿಸುತ್ತದೆ. ಬೆಳಗ್ಗೆ ಹತ್ತರಿಂದ ಆರರ ತನಕ ಮಾತ್ರ ಈಜಲು ಅವಕಾಶ. ಈ ಜಾಗದಲ್ಲಿ ಎರಡು ತಾಸಿಗಿಂತ ಹೆಚ್ಚು ಹೊತ್ತು ನೀರಿನಲ್ಲಿರಬಾರದು ಎಂಬ ನಿಯಮವಿದೆ. ಈಜುವವರ ರಕ್ಷಣೆಗೆ ಸಾಕಷ್ಟು ವ್ಯವಸ್ಥೆಗಳಿದ್ದರೂ ದುರಂತಗಳು ಸಂಭವಿಸುತ್ತಲೇ ಇದೆ. 1979ರಲ್ಲಿ ಮುಳುಗಿದ ವ್ಯಕ್ತಿಯೊಬ್ಬನ ದೇಹ ಸಿಗಲು 20 ವರ್ಷ ಕಾಯಬೇಕಾಯಿತಂತೆ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.