ಸಿಂಪಲ್‌ Tricks : ದುಡ್ಡು ಗೆಲ್ಲೋದು ಯಾರು?

ಗಿಲಿಗಿಲಿ ಮ್ಯಾಜಿಕ್‌

Team Udayavani, Apr 25, 2019, 6:30 AM IST

Chinnari—Magic

ದುಡ್ಡಿನ ಮ್ಯಾಜಿಕ್‌ ಅಂದ್ರೆ ಯಾರು ಇಷ್ಟ ಪಡೋಲ್ಲ ಹೇಳಿ? ಆದ್ರೆ ಈಗ ನಾನು ಹೇಳ್ತಾ ಇರೋದು ದುಡ್ಡು ಮಾಡೋ ಮ್ಯಾಜಿಕ್‌ ಅಲ್ಲ, ಕವರ್‌ನಲ್ಲಿ ಇಟ್ಟಿರೋ ದುಡ್ಡು ಗೆಲ್ಲೋ ಮ್ಯಾಜಿಕ್‌. ಜಾದೂಗಾರ, ನಾಲ್ಕು ಮಂದಿಯನ್ನು ವೇದಿಕೆಗೆ ಕರೆದು ಸಾಲಾಗಿ ನಿಲ್ಲಿಸಿ ತನ್ನಲ್ಲಿರುವ ಐದು ಸೀಲ್‌ ಮಾಡಿದ ಕವರ್‌ಗಳನ್ನು ಚೆನ್ನಾಗಿ ಕಲಸಲು ಹೇಳುತ್ತಾನೆ.

‘ಯಾವುದೋ ಒಂದು ಕವರ್‌ನಲ್ಲಿ ದೊಡ್ಡ ಕ್ಯಾಶ್‌ ಬಹುಮಾನ ಇದೆ, ಅದನ್ನು ಗೆಲ್ಲೋಕೆ ಲಕ್‌ ಬೇಕು’ ಎಂದು ಹೇಳುತ್ತಾ ಮೊದಲನೆಯವನ ಕೈಗೆ ಕವರ್‌ಗಳನ್ನು ಕೊಡುತ್ತಾನೆ. ಆತ ಮಾಡಬೇಕಾದುದು ಇಷ್ಟೆ-ಎಂ ಓ ಎನ್‌ ಇ ವೈ- ಮನಿ (money) ಎಂದು ಸ್ಪೆಲ್ಲಿಂಗ್‌ ಹೇಳುತ್ತಾ ಒಂದು ಅಕ್ಷರಕ್ಕೆ ಒಂದೊಂದು ಕವರನ್ನು ಮೇಲಿನಿಂದ ಕೆಳಕ್ಕೆ ಇಡುತ್ತಾ ಹೋಗಬೇಕು. ಕೊನೆಯ ವೈ ಅಕ್ಷರಕ್ಕೆ ಬರುವ ಕವರನ್ನು ತಾನು ಇಟ್ಟುಕೊಂಡು ಉಳಿದ ನಾಲ್ಕು ಕವರ್‌ಗಳನ್ನು ಎರಡನೆಯವನಿಗೆ ಕೊಡಬೇಕು. ಇದೇ ರೀತಿ ಎರಡು, ಮೂರು ಮತ್ತು ನಾಲ್ಕನೆಯವನು ವೈ ಅಕ್ಷರಕ್ಕೆ ಬರುವ ಕವರನ್ನು ಆರಿಸಿಕೊಂಡ ಬಳಿಕ ಒಂದು ಕವರ್‌ ಉಳಿಯುತ್ತದೆ. ಅದನ್ನು ಜಾದೂಗಾರ ತೆಗೆದುಕೊಳ್ಳುತ್ತಾನೆ.

ಈಗ ಒಬ್ಬೊಬ್ಬರಿಗೆ ಅವರವರ ಕವರ್‌ಗಳನ್ನು ತೆರೆದು ನೋಡಲು ಹೇಳುತ್ತಾನೆ. ಎಲ್ಲರ ಕವರ್‌ಗಳಲ್ಲೂ ಲಕ್‌-ನೆಕ್ಸ್ಟ್ ಟೈಮ್‌ ಎಂದು ಬರೆದಿರುತ್ತದೆ. ಆದರೆ ಜಾದೂಗಾರನ ಕವರಲ್ಲಿ ಎರಡು ಸಾವಿರ ರೂಪಾಯಿ ಗರಿ ಗರಿ ನೋಟು!!!

ರಹಸ್ಯ
ನೋಟು ಇಟ್ಟ ಕವರಿನ ಮೂಲೆಯಲ್ಲಿ ಪೆನ್ಸಿಲಿನಿಂದ ಒಂದು ಸಣ್ಣ ಗುರುತು ಮಾಡಿರಬೇಕು (ಚಿತ್ರ ನೋಡಿ). ಮೇಲೆ ಕೆಳಗೆ ಮಾಡಿದ ನಂತರ ಕವರ್‌ಗಳನ್ನು ಮೊದಲನೆಯವನಿಗೆ ಕೊಡಬೇಕಾದರೆ ಮಾತಾಡುತ್ತಾ ಇರುವಾಗ ಗುರುತಿನ ಕವರನ್ನು ಮೇಲಿನಿಂದ ಎರಡನೇ ಸ್ಥಾನಕ್ಕೆ ಬರುವಂತೆ ಉಪಾಯವಾಗಿ ಜೋಡಿಸಬೇಕು. ಆದರೆ ಯಾರೂ ಕವರ್‌ಗಳನ್ನು ಸ್ಥಾನಪಲ್ಲಟ ಮಾಡದಂತೆ ಜಾಗ್ರತೆ ವಹಿಸಬೇಕು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.