ತಲೆಬುರುಡೆಯ ಭಿಕ್ಷಾ ಪಾತ್ರೆ


Team Udayavani, Jan 25, 2018, 3:14 PM IST

10001.jpg

ಒಮ್ಮೆ ರಾಜ ದೇಶಸಂಚಾರ ಮಾಡುತ್ತಿದ್ದ. ನದಿಯೊಂದರಲ್ಲಿ ವ್ಯಕ್ತಿಯೊಬ್ಬ ನೀರು ಕುಡಿಯುತ್ತಿದ್ದ. ರಾಜನನ್ನು ಕಂಡಾಕ್ಷಣ ಭಿಕ್ಷೆ ಬೇಡತೊಡಗಿದ. ರಾಜನಿಗೆ ಅವನನ್ನು ನೋಡಿ ಸಿಟ್ಟು ಬಂದಿತು. “ದೂರ ಹೋಗು, ನನ್ನ ಮನಃಶಾಂತಿ ಹಾಳು ಮಾಡಬೇಡ’ ಎಂದು ಗದರುತ್ತಾನೆ. ಭಿಕ್ಷುಕ ನಗುತ್ತ, “ರಾಜ, ನಿನಗೆ ಇಷ್ಟು ಚಿಕ್ಕ ವಿಷಯಕ್ಕೆ ಮನಃಶಾಂತಿ ಹಾಳಾಗುತ್ತದೆಂದರೆ ಅದು ಯಾವಾಗಲೂ ಶಾಂತಿಯಿಂದ ಇರಲು ಸಾಧ್ಯವಿಲ್ಲ’ ಎನ್ನುವನು.

ಭಿಕ್ಷುಕನ ಮಾತನ್ನು ಕೇಳಿ ರಾಜ ಇವನು ಭಿಕ್ಷುಕನಲ್ಲ ಸಾಧು ಇರಬೇಕು ಎಂದು ಯೋಚಿಸುತ್ತಾ ಅವನ ಕಡೆಗೆ ತಿರುಗಿ, “ಮಹಾತ್ಮರೇ, ತಪ್ಪಾಯಿತು. ಕ್ಷಮಿಸಿ. ನಿಮಗೆ ಅವಶ್ಯಕತೆ ಇರುವುದನ್ನು ಕೇಳಿ ಕೊಡುತ್ತೇನೆ’ ಎನ್ನುವನು. ಭಿಕ್ಷುಕ ರಾಜನಿಗೆ, “ನಿನ್ನಿಂದ ಕೊಡಲು ಸಾಧ್ಯವಾಗುತ್ತದೆ ಎಂದರೆ ಮಾತ್ರ ಮಾತು ಕೊಡು’ ಎನ್ನುತ್ತಾನೆ. 

ಮಾತು ಕೊಟ್ಟ ರಾಜ ಸಾಧುವನ್ನು ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಸಾಧುವಿಗೆ ಏನು ಬೇಕೆಂದು ಕೇಳುತ್ತಾನೆ. ಸಾಧು ಭಿಕ್ಷಾಪಾತ್ರೆಯನ್ನು ಹಿಡಿದು ಇದು ತುಂಬುವಷ್ಟು ಚಿನ್ನದ ನಾಣ್ಯಗಳನ್ನು ಕೊಡು ಎನ್ನುತ್ತಾನೆ. ರಾಜ ನಗುತ್ತಾ ಅಯ್ಯೋ ಅಷ್ಟೇನಾ! ಎಂದು ಅಣಕ ಮಾಡುತ್ತಾ ಬೊಗಸೆ ಚಿನ್ನದ ನಾಣ್ಯಗಳನ್ನು ತರುವಂತೆ ಸೇವಕರಲ್ಲಿ ಆಜ್ಞಾಪಿಸುತ್ತಾನೆ. ಆದರೆ ಆಲ್ಲಿ ಪವಾಡ ಜರುಗಿತು. ಬೊಗಸೆ ಚಿನ್ನದ ನಾಣ್ಯಗಳಿಂದ ಭಿಕ್ಷಾಪಾತ್ರೆ ತುಂಬಲಿಲ್ಲ. ಪೆಟ್ಟಿಗೆಗಟ್ಟಲೆ ಚಿನ್ನದ ನಾಣ್ಯಗಳನ್ನು ಹಾಕಿದರೂ ತುಂಬಲಿಲ್ಲ. ಖಜಾನೆ ಖಾಲಿಯಾಗತೊಡಗಿತು. ಪಾತ್ರೆ ಮಾತ್ರ ತುಂಬಲೇ ಇಲ್ಲ. 

ಕೊನೆಗೆ ರಾಜ ಸೋಲೊಪ್ಪಿಕೊಂಡ. ಸಾಧುವಿನ ಪಾದಕ್ಕೆ ನಮಸ್ಕಾರ ಮಾಡಿ, ಈ ಬಿûಾಪಾತ್ರೆಯ ಮಹಿಮೆ ತಿಳಿಸಿ ಕೊಡಿ ಎಂದ. ಅದಕ್ಕೆ ಸಾಧು ನಗುತ್ತಾ, “ಎಲೈ ರಾಜನೇ, ಈ ಭಿಕ್ಷಪಾತ್ರೆಯನ್ನು ಯಾರಿಂದಲೂ ತುಂಬಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಸಾಮಾನ್ಯ ಭಿಕ್ಷಪಾತ್ರೆಯಲ್ಲ. ಇದು ಒಬ್ಬ ಮಹಾ ದುರಾಸೆಯ ಮನುಷ್ಯನ ತಲೆಬುರುಡೆಯಿಂದ ತಯಾರಿಸಿರುವ ಭಿûಾಪಾತ್ರೆ’ ಎನ್ನುವನು. ರಾಜನಿಗೆ ತನ್ನ ಅಜ್ಞಾನಕ್ಕೆ ನಾಚಿಕೆಯಾಯಿತು. ಭಿಕ್ಷಾಪಾತ್ರೆಯ ಮರ್ಮ ಅರ್ಥವಾಯಿತು. ಅಂದಿನಿಂದ ದುರಾಸೆಯನ್ನು ತ್ಯಜಿಸಿದ. ಖಜಾನೆಯನ್ನು ಪ್ರಜೆಗಳ ಉದ್ಧಾರಕ್ಕೆ ಬಳಸತೊಡಗಿದ.

-ವೇದಾವತಿ ಎಚ್‌.ಎಸ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.