ಅತಿಮಾನುಷ ಸಮುರಾಯ್‌ ಪಟು


Team Udayavani, Jun 6, 2019, 6:10 AM IST

atimanush

ಸೂಪರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌, ಬ್ಯಾಟ್‌ಮ್ಯಾನ್‌ನಂಥ ಕಾಲ್ಪನಿಕ ಹೀರೋಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಇವೆಲ್ಲ ಕಾಲ್ಪನಿಕ. ನಿಜ ಜೀವನದಲ್ಲಿ ಇವೆÇÉಾ ಸಾಧ್ಯವಾ? ಅತಿಮಾನುಷ ಶಕ್ತಿ ಇರುವವರು ನಮ್ಮ ನಡುವೆ ಇಲ್ಲವಾದರೂ, ಸಾಮಾನ್ಯ ಮನುಷ್ಯರಿಗೆ ಸಾಧ್ಯವಾಗದ ಕೆಲಸಗಳನ್ನು ಮಾಡಬಲ್ಲ ಸಾಮರ್ಥ್ಯ ಇರುವಾತ ಒಬ್ಬ ಇದ್ದಾನೆ. ಆತನ ಹೆಸರು ಇಸಾವೊ ಮಾಚಿ. ಮೂಲತಃ ಜಪಾನಿನವನು. ಈತನನ್ನು ಪ್ರಪಂಚ ಗುರುತಿಸುವುದು ಆಧುನಿಕ ಸಮುರಾಯ್‌ (Modern Samurai) ಭಟ ಎಂಬ ಹೆಸರಿನಿಂದ. ಸಮುರಾಯ್‌ ಜಪಾನಿ ಸಮರ ಕಲೆಯಾಗಿದೆ. ಅದರಲ್ಲಿ ಖಡ್ಗ ಹಿಡಿದು ಹೋರಾಡುವ ಪರಿಣತಿಗಳನ್ನು ಕಲಿಸಲಾಗುತ್ತದೆ. ಈತನ ಸಾಧನೆಗಳನ್ನು ನೋಡಿದರೆ ಮೂಗಿನ ಮೇಲೆ ಬೆರಳು ಇಡುವ ಹಾಗಿರುತ್ತದೆ. ಈತ ಸಮುರಾಯ್‌ ಪಟುವಾದರೂ ಅದಕ್ಕಿಂತ ಹೆಚ್ಚಿನ ಸಾಧನೆ, ಪರಿಣತಿಯನ್ನು ಸಾಧಿಸಿದ್ದಾನೆ.

ಬುಲೆಟ್‌ ಪೀಸ್‌ ಪೀಸ್‌
ಬುಲೆಟ್‌ಅನ್ನು ತುಂಡು ಮಾಡಬಲ್ಲಿರಾ? ಟೇಬಲ್‌ ಮೇಲೆ ಇಟ್ಟ ಬುಲೆಟ್‌ಅನ್ನು ಯಾವುದಾದರೂ ಆಯುಧ ಬಳಸಿ ಕತ್ತರಿಸಬಹುದು. ಆದರೆ ಪಿಸ್ತೂಲಿನಿಂದ ಹೊರಟ ಬುಲೆಟ್‌ಅನ್ನು ತುಂಡರಿಸಬಲ್ಲಿರಾ? ಅದು ಕಣ್ಣಿಗೆ ಕಾಣುವುದೇ ಇಲ್ಲ ಎನ್ನುವುದನ್ನು ಗಮನದಲ್ಲಿಡಿ. ಆ ಕೆಲಸವನ್ನು ಮಾಡಬಲ್ಲ ಇಸಾವೊ. ಪ್ರತಿ ಸೆಕೆಂಡಿಗೆ 550 ಅಡಿ ಬಿರುಸಿನಿಂದ ಬರುವ ಗುಂಡನ್ನು ಗಾಳಿಯಲ್ಲಿಯೇ ಎರಡು ತುಂಡು ಮಾಡಬಲ್ಲನು. ಈತನ ಖಡ್ಗದ ಚಲನೆಯನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ.

ಕ್ಯಾಮೆರಾ ಕೂಡಾ ಕುರುಡಾಗುತ್ತದೆ
ಈತನ ಖಡ್ಗದ ಪಟ್ಟನ್ನು ಬರಿಗಣ್ಣಿಗೆ ನೋಡಲು ಸಾಧ್ಯವಿಲ್ಲ. ಎಷ್ಟು ವೇಗವಾಗಿ ಖಡ್ಗವನ್ನು ಬೀಸುತ್ತಾನೆ ಎಂದರೆ ಕ್ಯಾಮೆರಾ ಕೂಡಾ ಆ ಚಲನೆಯನ್ನು ಹಿಡಿದಿಡಲು ಸೋಲುತ್ತದೆ. ಅದಕ್ಕೆಂದೇ ವಿಶೇಷ ಕ್ಯಾಮೆರಾವನ್ನು ಬಳಸಿ ಆತನ ಕತ್ತಿಯ ಚಲನೆಯನ್ನು ಚಿತ್ರೀಕರಿಸಲಾಗಿದೆ. ಹಾಗೂ ಈತ ಪ್ರತಿ ಗಂಟೆಗೆ 820 ಕಿ.ಮೀ ವೇಗದಲ್ಲಿ ಬರುವ ಟೆನ್ನಿಸ್‌ ಬಾಲ್‌ಅನ್ನು ಕೂಡಾ ಕಣ್ಮುಚ್ಚಿ ತೆಗೆಯುವುದರೊಳಗೆ ಕತ್ತರಿಸಿದ್ದಾನೆ. ಬೇರೆ ಬೇರೆ ದಾಖಲೆಗಳನ್ನು ನಿರ್ಮಿಸಿ ಈಗಾಗಲೇ ಗಿನ್ನೆಸ್‌ ರೆಕಾರ್ಡ್‌ನಲ್ಲಿ ಹೆಸರು ಹೊಂದಿ¨ªಾನೆ.

ತಲೆಬುರುಡೆಗಳ ಗುಹೆ
ಪಪುವಾ ನ್ಯೂ ಗಿನಿಯಾದ, ಮಿಲೆ°à ಬೇ ಪ್ರಾಂತ್ಯದಲ್ಲಿ ಒಂದು ಗುಹೆ ಇದೆ. ಅದರ ಹೆಸರು ತವಾಲಿ ಗುಹೆ. ಸ್ಥಳೀಯರು ಇದನ್ನು “ತಲೆಬುರುಡೆ ಗುಹೆ’ ಎಂದು ಕರೆಯುತ್ತಾರೆ. ಇÇÉೊಂದು ಪ್ರಾಚೀನ ಕಾಲದ ವಿಶಿಷ್ಟ ಆಚರಣೆ ಇದ್ದು ಆ ಮೂಲಕ ಗುಹೆಯು ಪ್ರಸಿದ್ಧಿಗೆ ಬಂದಿದೆ. ಅಲ್ಲಿ ಪ್ರೀತಿಪಾತ್ರರು, ಹತ್ತಿರದ ಸಂಬಂಧಿಗಳು ಸಾವನ್ನಪ್ಪಿದರೆ ಅವರನ್ನು ಮಲಗಿಸಿ ದೇಹವನ್ನು ಹೂಳದೆ ನೇರಕ್ಕೆ ನಿಲ್ಲಿಸಿ ಹೂಳುತ್ತಾರೆ.

ಹೂಳುವ ಮೊದಲು ಅವರ ತಲೆಯ ಮೇಲೆ ಮಣ್ಣಿನ ಮಡಿಕೆಯನ್ನು ಮುಚ್ಚಿ ಕೇವಲ ದೇಹವನ್ನಷ್ಟೇ ಹೂಳುತ್ತಾರೆ. ಕೆಲವು ದಿನಗಳ ನಂತರ ಶರೀರದ ಅಸ್ಥಿಪಂಜರದಿಂದ ತಲೆಯನ್ನು ಬೇರ್ಪಡಿಸಿ ಅದಕ್ಕಾಗಿಯೇ ಮೀಸಲಾಗಿರುವ ತಲಾವಿ ಗುಹೆಯಲ್ಲಿ ಇರಿಸುತ್ತಾರೆ.

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.