ಹರತಾಳದಲ್ಲಿ ಮನುಷ್ಯರನ್ನು ಸೋಲಿಸುವ ತಾಕತ್ತು ಇರುವ ಪ್ರಾಣಿ ಯಾವುದು?


Team Udayavani, Mar 15, 2018, 4:06 PM IST

logo-kannu.jpg

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ  ಜಗತ್ತಿನೊಳಗೊಂದು ಸುತ್ತು!

ಮನುಷ್ಯನೊಬ್ಬ ಹರತಾಳಕ್ಕೆ ಮುಂದಾದರೆ ಎಷ್ಟು ದಿನ ಕೂರಬಹುದು? ವಾರ? ತಿಂಗಳು? ಅಲ್ಲಿಗೆ, ಕೂರುವುದರ ಮೂಲಕ ಶುರುವಾಗಿದ್ದ ಅವನ ಹರತಾಳ ಮಲಗುವುದರ ಮೂಲಕ ಕೊನೆಯಾಗುತ್ತದೆಯಷ್ಟೆ! ಇಂದು ಎಲ್ಲೆಲ್ಲೂ ಸ್ಪರ್ಧೆಗಳೇ. ತರಗತಿಗಳಲ್ಲಿ, ಕಚೇರಿಗಳಲ್ಲಿ, ಮನೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ.. ಹಾಗೆಯೇ ಊಟದ ಸ್ಪರ್ಧೆಗಳಿರುವಂತೆ ಹಸಿವಿನ ಸ್ಪರ್ಧೆಯೂ ಹುಟ್ಟಿಕೊಂಡರೆ ಹೇಗಿರುತ್ತದೆ? ಅದರಲ್ಲೂ, ಮನುಷ್ಯರಿಗೂ ಪ್ರಾಣಿಗಳಿಗೂ ನಡುವೆ ಈ ಸ್ಪರ್ಧೆ ಇಟ್ಟರೆ ಟಿ.ಆರ್‌ .ಪಿ ಹೆಚ್ಚುವುದು ಖಂಡಿತ. ಪ್ರಾಣಿಗಳಿಂದ ಸೇವೆ ಮಾಡಿಸಿಕೊಳ್ಳುವ ಮನುಷ್ಯ ಆ ವಿಷಯದಲ್ಲಿ ಗೆದ್ದರೂ ಈ ಸ್ಪರ್ಧೆಯಲ್ಲಿ ಮಾತ್ರ ಗೆಲ್ಲಲಾರ. ಏಕೆ ಅಂತೀರಾ? ಹಾಗೊಂದು ವೇಳೆ ಇಂಥದ್ದೊಂದು ಸ್ಪರ್ಧೆ ನಿಜಕ್ಕೂ ಏರ್ಪಟ್ಟರೆ ಪ್ರಾಣಿಗಳು ತಮ್ಮ ಕಡೆಯಿಂದ ಅಖಾಡಕ್ಕಿಳಿಸುವುದು ಟರಾಂಟುಲ! ಅಂದರೆ ಜೇಡವನ್ನು!

ಚಿಕ್ಕ ಜೇಡಕ್ಕೆ ಯಾಕೆ ಇಷ್ಟೊಂದು ಮರ್ಯಾದೆ ಎನ್ನದಿರಿ. ಇದು ಅಂತಿಂಥ ಜೇಡವಲ್ಲ, ವಿಷಪೂರಿತ ಜೇಡವಿದು. ಆದರೆ ಎದುರಾಳಿಯನ್ನು ಕಚ್ಚಿ ಸಾಯಿಸಿ ಸ್ಪರ್ಧೆ ಗೆಲ್ಲುವಷ್ಟು ಬುದ್ಧಿವಂತ ಜೀವಿ ಇದಲ್ಲ. ಇದರ ಒಂದು ತಾಕತ್ತೇ ಸಾಕು ಈ ಸ್ಪರ್ಧೆಯನ್ನು ಗೆಲ್ಲಿಸಿಕೊಡಲು. ಕುತಂತ್ರಗಳ ಅಗತ್ಯ ಇದಕ್ಕಿಲ್ಲ. ಅದರದ್ದು ದೀರ್ಘ‌ಕಾಲ ಹಸಿವಿನಿಂದ ಇರುವ ತಾಕತ್ತು. ಟರಾಂಟುಲಗಳು ಅನ್ನಾಹಾರಗಳಿಲ್ಲದೆ ಎಷ್ಟು ದಿನ ಇರಬಲ್ಲವೆಂದು ನಿಮಗೆ ಗೊತ್ತಾದರೆ ನೀವು ಖಂಡಿತಾ ಹೌಹಾರುವಿರಿ. 

ಅದು,  ಬರೋಬ್ಬರಿ ಎರಡುವರ್ಷ ಒಂಬತ್ತು ತಿಂಗಳುಗಳ  ಕಾಲ ಏನೂತಿನ್ನದೇ ಇರಬಲ್ಲದು ಆದರೆ ಮನುಷ್ಯ ಇದನ್ನೂ ಬಿಟ್ಟಿಲ್ಲ. ಟರಾಂಟುಲಗಳಲ್ಲೂ ರುಚಿ ಕಂಡುಕೊಂಡಿದ್ದಾನೆ ಅದರ ಪರಿಣಾಮವನ್ನು ಆಫ್ರಿಕಾದ ರೆಸ್ಟೋರೆಂಟುಗಳಲ್ಲಿ ಕಾಣಬಹುದಾಗಿದೆ. ಅಲ್ಲಿ ಇವುಗಳನ್ನು ಹುರಿದು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಟರಾಂಟುಲಗಳಲ್ಲಿ ನೂರಾರು ಪ್ರಭೇದಗಳಿದ್ದು ಎಲ್ಲವೂ
ವಿಷಪೂರಿತವಲ್ಲ. ಹೀಗಾಗಿ ಅನಗತ್ಯ ಭಯ ಬೇಡ. ಅದೇನೇ ಇರಲಿ, ಈಗ ನೀವೇ ಯೋಚಿಸಿ. ಟರಾಂಟುಲ ವಿಷಪೂರಿತವೋ? ಇಲ್ಲಾ ಅದನ್ನೂ ಹುರಿದು ಮುಕ್ಕುವ ಮನುಷ್ಯ ವಿಷಪೂರಿತನೋ?

ಗೋಲ್ಡ್‌ ಫಿಷ್‌ ಅನ್ನು ಕತ್ತಲಲ್ಲಿರಿಸಬಾರದು ಏಕೆ?
ಗೃಹೋಪಯೋಗಿ ವಸ್ತುಗಳು ತಮ್ಮ ಹೊಳಪು ಕಳೆದುಕೊಳ್ಳದಂತೆ ಕಾಲ ಕಾಲಕ್ಕೆ ತೊಳೆಯುವುದು, ಪಾಲಿಷ್‌ ಮಾಡಿಸುವುದು ಇತ್ಯಾದಿಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಇಲ್ಲೊಂದು ಪ್ರಾಣಿ ಇದೆ. ಇದರ ವೈಶಿಷ್ಟéವೇನೆಂದರೆ ಕತ್ತಲಿನ ಸ್ಥಳದಲ್ಲಿ ಇವುಗಳನ್ನು ಇರಿಸಿದರೆ ಕೆಲ ಸಮಯದ ನಂತರ ತಮ್ಮ ಮೈ ಹೊಳಪನ್ನು ಕಳೆದುಕೊಳ್ಳುತ್ತವೆ. ಹೊಳಪು ಕಳೆದುಕೊಂಡರೆ ಯಾರುಗೇನು ನಷ್ಟ ಎನ್ನದಿರಿ. ಏಕೆಂದರೆ ಈ ಜೀವಿಗೆ ಮುಖ್ಯವಾಗಿ ಬೇಕಾಗಿರುವುದು ಇದೇ ಮೈಯ ಹೊಳಪು. ಈ ಜೀವಿಯೇ ನಾವು ನೀವು ತಂತಮ್ಮ ಮನೆಯ ಅಲಂಕಾರ ಹೆಚ್ಚಿಸಲು ಗಾಜಿನ ಬೋನಿನಲ್ಲಿ ಕೂಡಿ ಹಾಕುವ ಗೋಲ್ಡ್‌ ಫಿಶ್‌. ಇದು ಹೊಳಪು ಕಳೆದುಕೊಂಡರೆ ಪಾಲಿಶ್‌ ಮಾಡಲಾಗುವುದಿಲ್ಲ.

ಗೋಲ್ಡ್‌ ಫಿಶ್‌ ತನ್ನ ಚಿನ್ನದ ಹೊಳಪನ್ನು ಕಳೆದುಕೊಳ್ಳಬಾರದೆಂದರೆ ಬೆಳಕು ಇರುವ ಸ್ಥಳದಲ್ಲಿಯೇ ಅದನ್ನು ಇರಿಸುವುಸು ಸೂಕ್ತ. ಇಲ್ಲವಾದರೆ ಚಿನ್ನದ ಬಣ್ಣ ಕಳೆದುಕೊಂಡ ನಂತರ ಸಾಮಾನ್ಯ ಮೀನುಗಳಂತೆ ಕಾಣುವ ಗೋಲ್ಡ್‌ ಫಿಷ್‌ ಅನ್ನು ಯಾರು ತಾನೇ ಇಟ್ಟುಕೊಂಡಾರು? ಚಿನ್ನದ ಮೆರುಗು ಮಾಯವಾದಾಕ್ಷಣ ಗೋಲ್ಡ್‌ ಫಿಷ್‌, “ರೋಲ್ಡ್‌ ಗೋಲ್ಡ್‌ ಫಿಷ್‌’ ಆಗಿಬಿಡುವುದಿಲ್ಲ. ಎಲ್ಲವೂ ನಮ್ಮ ಭ್ರಮೆಯಷ್ಟೇ. ಆದರೆ, ವರ್ಣಭೇದ ಮಾಡುವ ಮನುಷ್ಯನಿಂದ ಬಣ್ಣ ಕಳೆದುಕೊಂಡ ಗೋಲ್ಡ್‌ಫಿಷ್‌ಗೆ ಆಪತ್ತು ಒದಗಬಾರದಲ್ಲ? 

ನಮ್ಮೊಂದಿಗೆ ನೆಗಡಿಯನ್ನು ಹಂಚಿಕೊಳ್ಳುವ ಪ್ರಾಣಿ ಯಾವುದು ಗೊತ್ತೇ?
ನಗುವನ್ನು ಸಾಂಕ್ರಾಮಿಕ ಅನ್ನುತ್ತಾರೆ ಅದು ಅತಿಯಾದರೆ ಮಾತ್ರ ಸಾಂಕ್ರಾಮಿಕ ಖಾಯಿಲೆ ಎಂದು ಅಪವಾದ ಹೊರಿಸಬಹುದು. ಹಾಗಾಗಿ
ಅಲ್ಲಿಯ ತನಕ ಸುಮ್ಮನಿರಿ. ನಗುವಿನಷ್ಟೇ ಸಾಂಕ್ರಾಮಿಕವಾದ, ಆದರೆ ಯಾರಿಗೂ ಬೇಡದ ಮತ್ತು ಬೇಡವೆಂದರೂ ಕಾಡುವ ಮತ್ತೂಂದು ವಿಚಾರವಿದೆ. ಇದು ನೆಗಡಿಗೆ ಸಂಬಂಧಿಸಿದ ಸಮಾಚಾರ. ನೆಗಡಿಯೂ ಸಾಂಕ್ರಾಮಿಕವಲ್ಲವೆ? ನೆಗಡಿಯಾಯ್ತು ಅಂದರೆ, ಆದವರಿಗಿಂತಲೂ ಹೆಚ್ಚಿನ ಕಾಳಜಿ ಆಗದವರಿಗೆ, ತಮಗೆ ಬರದಿರಲಪ್ಪಾ ಎಂದು. ನಿಮಗೆ ಗೊತ್ತಿದೆಯೋ, ಇಲ್ಲವೋ, ಈ ನೆಗಡಿ ನಿಮ್ಮಿಂದ ಕೇವಲ ಮನುಷ್ಯರಿಗೆ ಮಾತ್ರ ಹರಡುವುದಿಲ್ಲ, ಪ್ರಾಣಿಗಳಿಗೂ ಹರಡುತ್ತದೆ. ನಿಮ್ಮ ಜೊತೆ ನೆಗಡಿಯನ್ನು ಹಂಚಿಕೊಳ್ಳುವ ಪ್ರಾಣಿ ಗೊರಿಲ್ಲ.

ಒಂದೇ ಪ್ರಭೇದಕ್ಕೆ ಸೇರಿದ್ದ ನಾವುಗಳು ಅಂದರೆ ಮನುಷ್ಯ ಮತ್ತು ಗೊರಿಲ್ಲ ವಿಕಾಸಪಥದಲ್ಲಿ ಬೇರೆಯ ಹಾದಿ ಹಿಡಿದರೂ ಕೆಲವೊಂದು ವಿಚಾರಗಳಲ್ಲಿ  ಸಾಮ್ಯತೆ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಇದೊಂದು ಉತ್ತಮ  ನಿದರ್ಶನ. ಆದ್ದರಿಂದ ಮುಂದಿನ ಬಾರಿ ನೆಗಡಿಯಾದಾಗ  ಪ್ರೀತಿಪಾತ್ರರಿಂದ ದೂರವನ್ನು ಕಾಪಾಡಿಕೊಂಡಂತೆಯೇ  ಗೊರಿಲ್ಲಾಗಳಿಂದಲೂ ದೂರವಿರಿ. ಒಂದಕ್ಕಿಂತ ಹೆಚ್ಚು ಕಂಪ್ಯೂಟರ್‌ ಉಪಕರಣಗಳಿಗೆ ಹೊಂದುವ ಸಾಫ್ಟ್ವೇರನ್ನು ಕಂಪ್ಯಾಟಿಬಲ್‌ ಎನ್ನುತ್ತಾರೆ. ಅದರಂತೆಯೇ ಮನುಷ್ಯ ಮತ್ತು ಗೊರಿಲ್ಲಾಗೂ ಹರಡುವುದರಿಂದ ನೆಗಡಿಯನ್ನು ಕಂಪ್ಯಾಟಿಬಲ್‌ ಎನ್ನಬಹುದು. ಏನಂತೀರಾ!

*ಹರ್ಷ

ಟಾಪ್ ನ್ಯೂಸ್

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.