ತಪ್ಪಿಸಿಕೊಂಡ ಕರಡಿ ಮರಿ


Team Udayavani, Oct 10, 2019, 5:57 AM IST

karadi

ಮಂದರ ಪರ್ವತ ಸಾಲಿನಲ್ಲಿದ್ದ ಬುಡದ ಬಂಡೆಗಳ ನಡುವೆ ಹತ್ತಾರು ಕರಡಿಗಳು ವಾಸವಾಗಿದ್ದವು. ಒಂದು ದಿನ ತನ್ನ ಪರಿವಾರದೊಂದಿಗೆ ಹೊರಟ ಮರಿ ಕರಡಿ ಆಕಸ್ಮಿಕವಾಗಿ ಗುಂಪಿನಿಂದ ತಪ್ಪಿಸಿಕೊಂಡುಬಿಟ್ಟಿತು.

ಭಯಗೊಂಡು ಅದು ತನ್ನವರನ್ನು ಹುಡುಕುತ್ತ ಕಾಡಂಚನ್ನು ತಲುಪಿತು. ಹಸಿವು ನೀರಡಿಕೆಯಿಂದ ನಿತ್ರಾಣಗೊಂಡಿತ್ತು. ಕತ್ತಲು ಕವಿದಾಗ ದಾರಿಯಲ್ಲಿ ಸಿಕ್ಕ ದೊಡ್ಡ ಆಲದ ಮರದ ಕೆಳಗೆ ಧೊಪ್‌ ಎಂದು ಕುಸಿದುಬಿದ್ದಿತು. ಆ ಶಬ್ದ ಕೇಳಿ ಮರಿಯಾನೆಯೊಂದು ಓಡಿ ಬಂದಿತು. ನೆಲದಲ್ಲಿ ಬಿದ್ದ ಕರಡಿಯನ್ನು ಪಿಳಿ ಪಿಳಿ ನೋಡಿತು. ನಂತರ ಮರಿಯಾನೆ ತನ್ನ ಅಮ್ಮನ ಬಳಿ ತೆರಳಿ ತೊದಲುತ್ತಾ ತಾನು ಕಂಡಿದ್ದನ್ನು ಹೇಳಿತು. ಅಮ್ಮ ಮತ್ತು ಮರಿಯಾನೆ ಎರಡೂ ಕರಡಿ ಇದ್ದ ಜಾಗಕ್ಕೆ ಬಂದಿತು. ತಾಯಿ ಆನೆ ಕರಡಿ ಬಳಿ ಬಂದು ಅದರ ಮೈದಡವಿತು. ಕರಡಿ ಎಚ್ಚರಗೊಳ್ಳಲಿಲ್ಲ. ಕರಡಿ ಪ್ರಜ್ಞಾಶೂನ್ಯವಾಗಿದ್ದು ಆನೆಗೆ ತಿಳಿಯಿತು. ಅದಕ್ಕೊಂದು ಉಪಾಯ ಹೊಳೆಯಿತು.

ಅದು ತನ್ನ ತಲೆ ಎತ್ತಿ ಮರವನೊಮ್ಮೆ ದಿಟ್ಟಿಸಿತು. ಎರಡು ಹೆಜ್ಜೆ ಹಿಂದೆ ಬಂದು ಓಡುತ್ತಾ ರಭಸದಿಂದ ಇದ್ದ ಬಲವನ್ನೆಲ್ಲ ಬಳಸಿ ಮರಕ್ಕೆ ಡಿಕ್ಕಿ ಹೊಡೆಯಿತು. ಆ ಮರದಲ್ಲಿ ಒಂದು ಜೇನುಗೂಡಿತ್ತು. ಅದನ್ನು ಕಂಡೇ ಆನೆ ಮರಕ್ಕೆ ಡಿಕ್ಕಿ ಹೊಡೆದಿತ್ತು. ಆನೆಯ ಬಲಕ್ಕೆ ಮರ ಅಲುಗಾಡಿ ಜೇನುತುಪ್ಪ ಕೆಳಗೆ ನೆಲದ ಮೇಲಿದ್ದ ಕರಡಿಯ ಬಾಯಿಗೆ ಬಂದು ಬಿತ್ತು. ಜೇನುತುಪ್ಪದ ಪರಿಮಳ ಬರುತ್ತಿದ್ದಂತೆಯೇ ಎಚ್ಚರವಾಯಿತು. ಬಾಯಿ ತೆರೆದು ಮುಖದ ಮೇಲಿದ್ದ ಜೇನುತುಪ್ಪವನ್ನು ನೆಕ್ಕತೊಡಗಿತು. ಹೊಟ್ಟೆಗೆ ಜೇನುತುಪ್ಪ ಬೀಳುತ್ತಿದ್ದಂತೆಯೇ ಮರಿ ಕರಡಿಯ ನಿಶ್ಯಕ್ತಿ ಹೋಯಿತು. ಅದು ಆನೆ ಮತ್ತು ಮರಿಯಾನೆಗೆ ಧನ್ಯವಾದ ಅರ್ಪಿಸಿತು. ಅಷ್ಟರಲ್ಲಿ ಕರಡಿಗಳ ಪರಿವಾರವೂ ಕಳೆದುಹೋಗಿದ್ದ ಕರಡಿಯನ್ನು ಹುಡುಕುತ್ತಾ ಅಲ್ಲಿಗೆ ಬಂದಿತು. ಅಂದಿನಿಂದ ಆನೆ ಮತ್ತು ಕರಡಿ ಪರಿವಾರ ಸ್ನೇಹಿತರಾದವು.

– ಅರವಿಂದ ಜಿ.ಜೋಷಿ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.