ರಾಜನ ಬುದ್ಧಿವಂತಿಕೆ


Team Udayavani, Aug 9, 2018, 6:00 AM IST

6.jpg

ರತ್ನಗಿರಿ ದೇಶದ ರಾಜ ಭಾಗ್ಯವಂತ. ಅವನಿಗೆ ಸಮರ್ಥ ಅನ್ನೋ ಒಬ್ಬ ವಿತ್ತ ಮಂತ್ರಿ ಇರ್ತಾನೆ. ರಾಜನಿಗೆ ಮಿಕ್ಕೆಲ್ಲಾ ಮಂತ್ರಿಗಳಿಗಿಂತ ಸಮರ್ಥನನ್ನು ಕಂಡರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಇತರೆ ಮಂತ್ರಿಗಳು ಸಮರ್ಥನ ವಿರುದ್ಧ ಹಗೆ ಸಾಧಿಸುತ್ತಿರುತ್ತಾರೆ. ಇದು ರಾಜನಿಗೆ ತಿಳಿಯುತ್ತದೆ. ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ನಿಶ್ಚಯಿಸುತ್ತಾನೆ. ಮಂತ್ರಿಗಳನ್ನು ಕರೆದು ಅವರೆಲ್ಲರಿಗೂ ತಲಾ ಒಂದು ಲಕ್ಷ ವರಹಗಳನ್ನು ನೀಡಿ ನಿಮ್ಮ ನಿಮ್ಮ ಖಾತೆಯನ್ನು ಅಭಿವೃದ್ಧಿ ಪಡಿಸುವಂತೆ ಆಜ್ಞಾಪಿಸಿದನು. ಒಂದು ತಿಂಗಳ ಗಡುವನ್ನೂ ನೀಡಿದನು.

ಮಂತ್ರಿಗಳೆಲ್ಲರೂ ಸ್ಪರ್ಧೆಗೆ ಬಿದ್ದವರಂತೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡರು. ರಾಜ ಕೊಟ್ಟ ಹಣವನ್ನು ತಮ್ಮ ತಮ್ಮ ಖಾತೆಗಳಲ್ಲಿ ಯಾವುದಕ್ಕೆ ಅವಶ್ಯಕತೆಯೋ ಅವುಗಳಿಗೆ ವಿನಿಯೋಗಿಸಿ ತಾವು ತಮ್ಮ ಕೆಲಸದಲ್ಲಿ ಜಾಣರೆನಿಸಿಕೊಳ್ಳಲು ತಯಾರಾದರು. ಒಂದು ತಿಂಗಳು ಕಳೆಯಿತು. ರಾಜ ಎಲ್ಲಾ ಮಂತ್ರಿಗಳನ್ನು ಕರೆಸಿಕೊಂಡು ವರದಿ ಒಪ್ಪಿಸುವಂತೆ ಕೋರಿಕೊಂಡನು. ಶಿಕ್ಷಣ ಮಂತ್ರಿ ಶಾಲೆಗಳ ದುರಸ್ತಿಗೆ, ಪುಸ್ತಕಗಳಿಗೆ ಹಣ ವಿನಿಯೋಗಿಸಿದ್ದರೆ, ರಕ್ಷಣಾ ಮಂತ್ರಿ ಗಡಿ ಭದ್ರತೆಗೆ, ಸೈನಿಕರ ಆರೋಗ್ಯಕ್ಕೆ, ಮದ್ದು ಗುಂಡಿಗೆ ವಿನಿಯೋಗಿಸಿರುತ್ತಾನೆ. 

ಕಡೆಗೆ ರಾಜನು ವಿತ್ತ ಮಂತ್ರಿಯಾದ ಸಮರ್ಥನ ಕಡೆ ತಿರುಗಿ ತಾವು ನಾನು ಕೊಟ್ಟ ಹಣವನ್ನು ಏನು ಮಾಡಿದ್ದೀರಿ ಎನ್ನುತ್ತಾನೆ. ಆಗ ಸಮರ್ಥನು “ಸ್ವಾಮಿ ತಾವು ಕೊಟ್ಟ ಹಣ ಯಾವ ಮೂಲೆಗೂ ಸಾಲಲಿಲ್ಲ. ಕಡೆಯ ಪಕ್ಷ ಇನ್ನೂ ಇಪ್ಪತ್ತು ಲಕ್ಷವಾದರೂ ಬೇಕು. ಏಕೆಂದರೆ ಶಾಲೆಗಳ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ. ಸೈನಿಕರ ಶಿಬಿರಗಳು ತುಂಬಾ ಶಿಥಿಲವಾಗಿದೆ. ಅವುಗಳ ದುರಸ್ತಿಯಾಗಬೇಕು. ಇನ್ನು ಔಷಧಾಲಯಗಳನ್ನು ತೆಗೆದುಕೊಂಡರೆ ನಮ್ಮ ಜನಸಂಖ್ಯೆಗೆ ಲೆಕ್ಕ ಹಾಕಿದರೆ ಇನ್ನೂ ಹತ್ತಾದರೂ ಬೇಕು. ಯುವಜನತೆಗೆ ಉದ್ಯೋಗವನ್ನು ಕೊಟ್ಟರೆ ದೇಶದ ಉನ್ನತಿಗೆ ದುಡಿಯುತ್ತಾರೆ. ಆದ್ದರಿಂದ ಅಂತಹವರನ್ನು ಗುರುತಿಸಿ ನಾವು ಆದಷ್ಟು ಬೇಗನೆ ಉದ್ಯೋಗ ನೀಡಬೇಕಿದೆ’ ಎಂದು ವರದಿ ಒಪ್ಪಿಸಿದನು.

ಆಗ ಭಾಗ್ಯರಾಜನು ಬೇರೆ ಮಂತ್ರಿಗಳ ಕಡೆ ತಿರುಗಿ “ನೋಡಿದಿರಾ? ಇದೇ ನಿಮಗೂ ವಿತ್ತ ಮಂತ್ರಿಗಳಿಗೂ ಇರುವ ವ್ಯತ್ಯಾಸ. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಹಣವನ್ನು ಬಳಸಿಕೊಳ್ಳುವ ಮುನ್ನ ಕ್ಷೇತ್ರದ ಕುಂದುಕೊರತೆಯನ್ನು ಅಧ್ಯಯನ ಮಾಡಿ, ಏನೇನು ಆಗಬೇಕಿದೆ ಎನ್ನುವುದನ್ನು ನೀವ್ಯಾರೂ ಮಾಡಿಲ್ಲ. ವಿತ್ತ ಮಂತ್ರಿಗಳು ಮಾತ್ರ ಮಾಡಿದ್ದಾರೆ’. ರಾಜನ ಮಾತು ಕೇಳಿ ಇತರೆ ಮಂತ್ರಿಗಳಿಗೂ ವಿತ್ತ ಮಂತ್ರಿಗಳ ಮೇಲೆ ಗೌರವ ಹೆಚ್ಚಾಯಿತು.

ತುಳಸಿ ವಿಜಯಕುಮಾರಿ

ಟಾಪ್ ನ್ಯೂಸ್

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.