ಮನುಷ್ಯನನ್ನು ಆಮೆ ಕೊಂದಿತ್ತಾ…
Team Udayavani, Jun 20, 2019, 5:00 AM IST
ಕ್ರಿ.ಪೂ. 525 ಜನಿಸಿದ ಗ್ರೀಕ್ ನಾಟಕಕಾರ ಏಸ್ಕೈಲಸ್ “ದುರಂತ ನಾಟಕಕಾರ’ ಎಂದೇ ಪ್ರಖ್ಯಾತಿ ಗಳಿಸಿದ್ದ. ಏಕೆಂದರೆ ಅವನ ನಾಟಕಗಳಲ್ಲಿ ಬಹುತೇಕವು ದುರಂತಮಯ ಅಂತ್ಯವನ್ನು ಹೊಂದಿರುತ್ತಿತ್ತು. ಅಲ್ಲದೆ ನಾಟಕದ ಕಥೆಯೂ ದುಃಖಭರಿತವಾಗಿರುತ್ತಿತ್ತು. ಆತನ ಪ್ರತಿಭೆಯನ್ನು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲನೇ ಮೆಚ್ಚಿಕೊಂಡಿದ್ದ. ಇಂತಿಪ್ಪ ಏಸ್ಕೈಲಸ್ನ ಅಂತ್ಯವೂ ಅಷ್ಟೇ ನಾಟಕೀಯವಾಗಿ ಕೊನೆಗೊಂಡಿದ್ದು ವಿಪರ್ಯಾಸ. ಅದು ಎಷ್ಟು ನಾಟಕೀಯವಾಗಿದೆಯೋ, ಅಷ್ಟೇ ಹಾಸ್ಯಾಸ್ಪದವೂ ಆಗಿದೆ. ಸಿಸಿಲಿ ನಗರಕ್ಕೆ ಬಂದಿದ್ದಾಗ ಆತ ಬಯಲು ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಅದೇ ಸಮಯದಲ್ಲಿ ಗಿಡುಗವೊಂದು ಅದೆಲ್ಲಿಂದಲೋ ಆಮೆಯನ್ನು ಹಿಡಿದು ಹಾರಿಕೊಂಡು ಹೋಗುತ್ತಿತ್ತು. ಆಮೆಯ ಭಾರ ತಾಳಲಾರದೆ ಅದರ ಕಾಲುಗಳು ಜಗ್ಗತೊಡಗಿದವು. ತುಂಬಾ ಸಮಯ ಹಿಡಿದುಕೊಳ್ಳಲು ಆಗದೇ ಇದ್ದಾಗ ಗಿಡುಗ ಆಮೆಯನ್ನು ಸಡಿಲಿಸಿತು. ಏಸ್ಕೈಲಸ್ನ ದುರಾದೃಷ್ಟಕ್ಕೆ ಆತ ನಡೆದುಹೋಗುತ್ತಿದ್ದ ದಾರಿಯಲ್ಲೇ ಗಿಡುಗ ಆಮೆಯನ್ನು ಬೀಳಿಸಿತ್ತು. ಆಕಾಶದಿಂದ ಕೆಳಕ್ಕೆ ಬಿದ್ದ ಆಮೆ ನೇರವಾಗಿ ಏಸ್ಕೈಲಸ್ನ ತಲೆ ಮೇಲೆ ಬಿದ್ದು ಆತ ಮರಣವನ್ನಪ್ಪಿದ.
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ