ಸಂಜೀವಕನ ಕತೆ


Team Udayavani, Nov 22, 2018, 6:00 AM IST

3.jpg

ಒಬ್ಬ ಶ್ರೀಮಂತ ವ್ಯಾಪಾರಿ ಮಧುರಾ ಪಟ್ಟಣಕ್ಕೆ ಎರಡು ಎತ್ತುಗಳು ಎಳೆಯುವ ಬಂಡಿಯಲ್ಲಿ ಪ್ರಯಾಣ ಮಾಡುತ್ತಿದ್ದ. ಅವನ ಆಳು ಕಾಳುಗಳು ಬಂಡಿಯ ಹಿಂದೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಅವರು ಒಂದು ಕಾಡನ್ನು ದಾಟಿ ಹೋಗುತ್ತಿದ್ದಾಗ ಸಂಜೀವಕ ಎನ್ನುವ ಒಂದು ಎತ್ತು ದಾರಿಯಲ್ಲಿದ್ದ ಒಂದು ತೂತಿನಲ್ಲಿ  ಕಾಲು ಸಿಕ್ಕಿಕೊಂಡು ಗಾಯಗೊಂಡಿತು. ಸಂಜೀವಕನನ್ನು ಕಂಡರೆ ವ್ಯಾಪಾರಿಗೆ ಬಹಳ ಪ್ರೀತಿ. ಹಾಗಾಗಿ ಪ್ರಯಾಣಕ್ಕೆ ತಡೆ ಹಾಕಿ ನಿಲ್ಲಿಸಿದ. ಸಂಜೀವಕನ ಗಾಯ ಬೇಗನೆ ವಾಸಿಯಾಗಿ ಪ್ರಯಾಣ ಮುಂದುವರಿಸಬಹುದು ಎಂದುಕೊಂಡ ಆತ. ಆದರೆ ಮೂರು ದಿನಗಳು ಕಳೆದರೂ ಸಂಜೀವಕನ ಸ್ಥಿತಿ ಸುಧಾರಿಸಲಿಲ್ಲ. ಸಂಜೀವಕನನ್ನು ಸರಿಯಾಗಿ ನೋಡಿಕೊಳ್ಳುವಂತೆ ತನ್ನ ಆಳುಗಳಿಗೆ ಆಜ್ಞಾಪಿಸಿ ವ್ಯಾಪಾರಿ ಪ್ರಯಾಣವನ್ನು ಮುಂದುವರಿಸಿದ. ಆದರೆ ಆತನ ಆಳುಗಳು ಸಂಜೀವಕನನ್ನು ವ್ಯಾಪಾರಿಗೆ ಗೊತ್ತಾಗದಂತೆ ಅಲ್ಲಿಯೇ ಬಿಟ್ಟು ಮುಂದುವರಿದರು. ಮಾರನೇ ದಿನ ಅವರು ವ್ಯಾಪಾರಿಯನ್ನು ಕೂಡಿಕೊಂಡು, ಸಂಜೀವಕ ಸತ್ತು ಹೋಯಿತೆಂದು ಹೇಳಿಬಿಟ್ಟರು. ತಮ್ಮ ಅವಿಧೇಯತೆಯನ್ನು ಮುಚ್ಚಿಹಾಕಲು ಅವರು ಸುಳ್ಳು ಹೇಳಿದ್ದರು. 

ಆದರೆ ದೇವರು ಅಸಹಾಯಕರ ಕೈಬಿಡುವುದಿಲ್ಲ! ಸಂಜೀವಕನ ವಿಷಯದಲ್ಲಿಯೂ ಹಾಗೆಯೇ ಆಯಿತು. ಯಮುನಾ ನದಿಯಿಂದ ಬೀಸುತ್ತಿದ್ದ ತಂಗಾಳಿ ಸಂಜೀವಕನಿಗೆ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡಿತು. ಎಲೆಯ ಹುಲ್ಲಿನ ಗರಿಕೆಗಳು ಅದರ ಮೈಕೈ ಗಟ್ಟಿಯಾಗಲು ನೆರವಾಯಿತು. ಅದರ ಗಾಯ ಪೂರ್ತಿಯಾಗಿ ವಾಸಿಯಾಯಿತು. ತಲೆ ಎತ್ತಿ ಧೈರ್ಯದಿಂದ ಅತ್ತ ಇತ್ತ ಓಡಾಡಿತು. ಭಯಂಕರವಾಗಿ ಹೋಂಕರಿಸುತ್ತಿದ್ದ ಸಂಜೀವಕನ ಧ್ವನಿ ಇಡೀ ಅರಣ್ಯದಲ್ಲಿ ಪ್ರತಿಧ್ವನಿಸಿತು. ಅದು ಮೊದಲಿಗಿಂತಲೂ ಹೆಚ್ಚು ಗಟ್ಟಿಮುಟ್ಟಿಯಾಯಿತು.

ಕೃಪೆ: ಓರಿಯೆಂಟಲ್‌ ಲಾಂಗ್‌ಮನ್‌

ಟಾಪ್ ನ್ಯೂಸ್

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.