ಮೂರು ಕಾಲಿನ ಕುರ್ಚಿ
Team Udayavani, Dec 21, 2017, 10:16 AM IST
ಒಂದು ದಿನ ಅಕ್ಬರ್ ಮತ್ತು ಬೀರಬಲ್ ವಾಯುವಿಹಾರಕ್ಕೆಂದು ತೆರಳಿದ್ದರು. ದಾರಿಮಧ್ಯೆ ಯಾವುದೋ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವಾಯಿತು. ಆಸ್ಥಾನದಲ್ಲಿ ಹೆಚ್ಚಿನವರು ಕುರುಡರು ಎಂಬುದು ಬೀರಬಲ್ಲನ ವಾದವಾಗಿತ್ತು. ಅದನ್ನೊಪ್ಪದ ಅಕºರ್ ಬೀರಬಲ್ಲನನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದನು.
ಮಾರನೇ ದಿನ ಬೀರಬಲ್ಲ ಆಸ್ಥಾನದಲ್ಲಿ ಮೂರು ಕಾಲಿನ ಕುರ್ಚಿಯನ್ನು ರಿಪೇರಿ ಮಾಡುತ್ತಿದ್ದನು. ಆಸ್ಥಾನಿಕರೆಲ್ಲರೂ ಅವನ ಬಳಿ ಬಂದು ಮೂರು ಕಾಲಿನ ಕುರ್ಚಿ ಕಂಡು ಆಶ್ಚರ್ಯಚಕಿತರಾಗಿ “ಏನಯ್ನಾ ಮಾಡುತ್ತಿದ್ದೀಯಾ’ ಎಂದು ಕೇಳತೊಡಗಿದರು. ಹಾಗೆ ಕೇಳಿದವರೆಲ್ಲರಿಗೂ ಬೀರಬಲ್ಲ ಶಾಂತಚಿತ್ತನಾಗಿ ಉತ್ತರಿಸುತ್ತಿದ್ದ. ಇನ್ನು ಕೆಲವರು “ಮೂರು ಕಾಲಿನ ಕುರ್ಚಿಯಲ್ಲಿ ಹೇಗೆ ಕೂರುವೆ?’ ಎಂದು ಪ್ರಶ್ನಿಸತೊಡಗಿದರು. ಅವರಿಗೂ ಸಮಾಧಾನದಿಂದ ಉತ್ತರ ಹೇಳಿದನು ಬೀರಬಲ್ಲ. ಸ್ವಲ್ಪ ಹೊತ್ತಿನಲ್ಲಿ ಅಕºರ್ ಬಂದು ನೆನ್ನೆಯ ಪಂದ್ಯದ ಬಗ್ಗೆ ಕೇಳಿದಾಗ, ಅವತ್ತು ಬೆಳಗ್ಗಿನಿಂದ ನಡೆದ ಘಟನೆಯನ್ನು ವಿವರಿಸಿದ. “ನಾನು ಮಾಡುತ್ತಿರುವುದನ್ನು ಕಣ್ಣಾರೆ ಕಂಡರೂ ತುಂಬಾ ಮಂದಿ ಏನು ಮಾಡುತ್ತಿರುವೆ ಎಂದು ಪ್ರಶ್ನಿಸಿದರು. ಅವರೆಲ್ಲರೂ ಕುರುಡರು. ಉಳಿದ ಕೆಲವರು ಮಾತ್ರ ದೃಷ್ಟಿಯಿರುವವರು’ ಎಂದು ತನ್ನ ವಾದವನ್ನು ಸಮರ್ಥಿಸಿಕೊಂಡ. ಅಕºರ ತನ್ನ ಸೋಲನ್ನು ಒಪ್ಪಿಕೊಂಡು ಬೀರಬಲ್ಲನನ್ನು ಆಲಂಗಿಸಿದ.
ಸಿದ್ದು ನಡವಿನಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು