ಊರ ತುಂಬಾ ಅವಳಿಗಳು


Team Udayavani, Feb 14, 2019, 12:30 AM IST

f-3.jpg

ಒಂದು ಕುಟುಂಬದಲ್ಲಿ ಅವಳಿ ಮಕ್ಕಳು ಜನಿಸಿದರೆ ಎಲ್ಲರಿಗೂ ಸಂತೋಷವಾಗುತ್ತೆ. ಅದೇ ರೀತಿ ಇಡೀ ಊರಿನ ತುಂಬಾ ಅವಳಿ ಮಕ್ಕಳೇ ಜನಿಸಿದರೆ ಹೇಗನ್ನಿಸುತ್ತೆ? ಹೌದಲ್ಲವಾ ಖಂಡಿತ ವಿಜ್ಞಾನಕ್ಕೂ ಸವಾಲೆಸೆಯುವ ಇಂಥ ಒಂದು ಊರು ಭಾರತದಲ್ಲಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಕೊಡಿನಿ ಎನ್ನುವ ಹಳ್ಳಿಯೇ ಇಂಥ ವಿಸ್ಮಯ ಹಾಗೂ ಕೌತುಕ ಮೂಡಿಸುವ ಊರು. ಇದನ್ನು ಆಂಗ್ಲ ಭಾಷೆಯಲ್ಲಿ ಟ್ವಿನ್‌ ಟೌನ್‌ (ಅವಳಿಗಳ ಪಟ್ಟಣ) ಅಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಹುಟ್ಟುವ ಮಕ್ಕಳಲ್ಲಿ 1000ದಲ್ಲಿ 6 ಜನ ಮಾತ್ರ ಅವಳಿಗಳಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ. ಆದರೆ ಈ ಗ್ರಾಮದಲ್ಲಿ ಮಾತ್ರ ಪ್ರತಿ 1000 ಮಕ್ಕಳಲ್ಲಿ 650 ರಿಂದ 700 ಮಕ್ಕಳು ಅವಳಿಗಳಾಗಿ ಹುಟ್ಟುವುದು ಗ್ಯಾರೆಂಟಿಯಂತೆ. 

ವಿಜ್ಞಾನಿಗಳು ಬಂದಿದ್ದರು
ಈ ಗ್ರಾಮದಲ್ಲಿ ಈ ರೀತಿಯಾಗಿ ಮಕ್ಕಳು ಹುಟ್ಟೋದಕ್ಕೆ ಕಾರಣವೇನು ಎಂಬುದನ್ನು ಅರಿಯಲು ಜರ್ಮನಿ ಮೂಲದ ವಿಜ್ಞಾನಿಗಳು ಇಲ್ಲಿಗೆ ಆಗಮಿಸಿ ಅವರ ಡಿಎನ್‌ಎ ಪರೀಕ್ಷೆ ಮಾಡೋದಕ್ಕೆ ಶುರು ಮಾಡಿದರು. ಆದರೆ, ಇದರ ಹಿಂದಿನ ಕಾರಣ ಅರಿಯಲು ಅವರಿಗೆ ಸಾಧ್ಯವಾಗದೇ ಅವರು ಹಿಂದಿರುಗಬೇಕಾಯಿತು. ನಂತರ ಬಂದ ಅಮೇರಿಕಾ ಮೂಲದ ವಿಜ್ಞಾನಿಗಳು ಇಲ್ಲಿನ ಮಕ್ಕಳ ಡಿಎನ್‌ಎ ಮತ್ತು ಈ ಪ್ರಾಂತ್ಯದ ನೀರನ್ನು ಪರೀಕ್ಷಿಸಿದಾಗ ಆ ನೀರಿನಲ್ಲಿ ಒಂದು ರೀತಿಯ ವಿಶೇಷವಾದ ರಾಸಾಯನಿಕ ಇರುವುದು ಕಂಡುಬಂದಿತು. ಆದರೆ ಅದು ಯಾವ ರೀತಿಯ ಕೆಮಿಕಲ್‌ ಮತ್ತು ಅದರ ಹೆಸರನ್ನು ಬಹಿರಂಗಪಡಿಸದೆ ಗೌಪ್ಯವಾಗಿಡಲಾಗಿದೆಯಂತೆ. ಇನ್ನು ಈ ಊರಿನ ಹೆಣ್ಣು ಮಕ್ಕಳು ಬೇರೆ ಊರಿನ ಗಂಡಿನ ಜೊತೆ ಮದುವೆಯಾದರೂ ಅಥವಾ ಈ ಊರಿನ ಗಂಡು ಮಕ್ಕಳಿಗೆ ಬೇರೆ ಊರಿನ ಹೆಣ್ಣು ಮಕ್ಕಳನ್ನು ತಂದುಕೊಂಡರೂ ಅವರಿಗೂ ಅವಳಿ ಮಕ್ಕಳೇ ಹುಟ್ಟುತ್ತವೆಯಂತೆ. 

ವರ್ಷದಿಂದ ವರ್ಷಕ್ಕೆ ಅವಳಿ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಊರಿನ ಹಿರಿಯರು ನೆನಪಿಸಿಕೊಳ್ಳುವ ಹಾಗೆ ಮೊದಲ ಅವಳಿಗಳು ಹುಟ್ಟಿದ್ದು 1949ರಲ್ಲಿ. ಅದಕ್ಕೂ ಹಿಂದೆ ಅವಳಿಗಳು ಇದ್ದಿರಬಹುದಾದ ಸಾಧ್ಯತೆ ಇದ್ದರೂ ಅದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಆಧಾರವಿಲ್ಲ.

ನೈಜೀರಿಯಾದಲ್ಲಿ ಅವಳಿಗಳ ರಾಜಧಾನಿ
ಪ್ರಪಂಚದಲ್ಲಿ ಅವಳಿಗಳ ಪಟ್ಟಣವೆಂದೇ ಹೆಸರಾದ ಹಲವು ಪ್ರದೇಶಗಳಿವೆ. ಅವುಗಳಲ್ಲೆಲ್ಲಾ ಪ್ರಸಿದ್ಧವಾದುದು ನೈಜೀರಿಯಾದ ಇಗ್‌ಬೋ ಒರಾ. ಈ ಪಟ್ಟಣ ಜಗತ್ತಿನ ಅವಳಿಗಳ ರಾಜಧಾನಿ ಎಂದೇ ಹೆಸರು ಮಾಡಿದೆ. ಈ ವಿಚಿತ್ರ ವಿದ್ಯಮಾನ ಸ್ಥಳೀಯರ ಆಹಾರಪದ್ಧತಿಯನ್ನು ಅವಲಂಬಿಸಿರಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ. 

ಪುರುಷೋತ್ತಮ್‌

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.