ಗುರುತ್ವ- ಅಪಕರ್ಷಣ ಶಕ್ತಿ!?


Team Udayavani, Nov 28, 2019, 4:37 AM IST

aa-1

ವಿಜ್ಞಾನಿ ಸರ್‌ ಐಸಾಕ್‌ ನ್ಯೂಟನ್‌, ಭೂಮಿ ಗುರುತ್ವಾಕರ್ಷಣಾ ಶಕ್ತಿಯನ್ನು ಹೊಂದಿದೆ ಎಂಬುದನ್ನು ಪತ್ತೆ ಮಾಡಿದರು. ಆ ಸಂಗತಿ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ಮರದ ಮೇಲಿಂದ ಸೇಬಿನಹಣ್ಣು ನೆಲದ ಮೇಲೆ ಬೀಳುವುದನ್ನು ಕಂಡಾಗ ನ್ಯೂಟನ್ನರಿಗೆ ಗುರುತ್ವಾಕರ್ಷಣೆಯ ಜ್ಞಾನೋದಯವಾಗಿದ್ದು ಎಂಬ ದಂತಕಥೆ ಬಹಳ ಜನಪ್ರಿಯವಾದುದು. ಗಾಳಿಯಲ್ಲಿ ಯಾವುದೇ ವಸ್ತುವನ್ನು ಮೇಲಕ್ಕೆಸೆದರೆ ಅದು ಕೆಳಕ್ಕೆ ಬೀಳುತ್ತದೆ. ಆದರೆ, ಕೆಳಕ್ಕೆ ಬೀಳದೆ ಇದ್ದರೆ? ಅದು ಮ್ಯಾಜಿಕ್‌! ಉದಾಹರಣೆಗೆ ಒಂದು ಉಂಗುರವನ್ನು ದಾರ ಕಟ್ಟಿ ನೇತಾಡಿಸಿ. ಈಗ ದಾರಕ್ಕೆ ಬೆಂಕಿ ಹಚ್ಚಿ. ದಾರ ಸುಟ್ಟು ತುಂಡಾಗಿ ಉಂಗುರ ಕೆಳಗೆ ಬೀಳುತ್ತದೆ. ಉಂಗುರ ಬೀಳುವುದು ಭೂಮಿಯ ಗುರುತ್ವಾಕರ್ಷಣಾ ಬಲದಿಂದ. ಆದರೆ ಜಾದೂಗಾರನ ಬಳಿ ಇರುವ ಉಂಗುರ ಗುರುತ್ವಾಕರ್ಷಣೆಯನ್ನು ಮೀರಿದ್ದು. ಅದನ್ನು ನೇತು ಹಾಕಿದ ದಾರಕ್ಕೆ ಬೆಂಕಿ ಹಚ್ಚಿದರೆ ದಾರವೂ ಉರಿಯುವುದಿಲ್ಲ, ಉಂಗುರವೂ ಕೆಳಗೆ ಬೀಳುವುದಿಲ್ಲ! ಈ ತಂತ್ರವನ್ನು ನಿಮ್ಮ ಕ್ಲಾಸಿನಲ್ಲಿ ಮಾಡಿ ನ್ಯೂಟನ್ನನಿಗೇ ಸವಾಲು ಹಾಕಿ.

ತಂತ್ರದ ರಹಸ್ಯ
ಈ ಮ್ಯಾಜಿಕ್‌ ಮಾಡುವ ಮುನ್ನ ಪೂರ್ವ ತಯಾರಿ ಅಗತ್ಯ. ಉಂಗುರವನ್ನು ನೇತು ಹಾಕಲು ಬಳಸುವ ದಾರವನ್ನು ಕನಿಷ್ಟ ನಾಲ್ಕೈದು ಬಾರಿಯಾದರೂ ಉಪ್ಪು ನೀರಿನಲ್ಲಿ ಚೆನ್ನಾಗಿ ಅದ್ದಿ, ಒಣಗಿಸಿ ಸಿದ್ಧಪಡಿಸಿಟ್ಟುಕೊಳ್ಳಿ. ಈ ದಾರವನ್ನು ಉಂಗುರಕ್ಕೆ ಕಟ್ಟಿ, ದಾರವನ್ನು ಎತ್ತರದಲ್ಲಿ ಹಿಡಿದು ಉಂಗುರವನ್ನು ಇಳಿಬಿಡಿ. ಈಗ ಉರಿಯುವ ಮೇಣದಬತ್ತಿಯನ್ನು ದಾರಕ್ಕೆ ಸೋಂಕಿಸಿದರೂ ದಾರ ಉರಿಯುವುದಿಲ್ಲ. ಹೀಗಾಗಿ ದಾರ ತುಂಡಾಗಿ ಉಂಗುರ ಕೆಳಗೆ ಬೀಳುವ ಮಾತೇ ಬರುವುದಿಲ್ಲ! ಹೇಗಿದೆ ನಿಮ್ಮ ಹೊಸ ಅನ್ವೇಷಣೆ? ಈ ನ್ಯಾಜಿಕ್‌ ಮಾಡುವ ಮೊದಲು ಮನೆಯಲ್ಲಿ ಐದಾರು ಬಾರಿ ಅಭ್ಯಾಸ ಮಾಡಿ ನೋಡಿ. ಅಲ್ಲಿ ಯಶಸ್ಸು ಕೂಡಾ ನಂತರವೇ ವೇದಿಕೆಯಲ್ಲಿ ಪ್ರದರ್ಶಿಸಲು ಮುಂದಾಗಿ). ಈ ಮ್ಯಾಜಿಕ್ಕನ್ನು ಸರಿಯಾದ ರೀತಿಯಲ್ಲಿ ಮಾಡಿ ತೋರಿಸಿದರೆ ಸ್ನೇಹಿತರೆಲ್ಲರೂ ನಿಮಗೆ ಶಹಬ್ಟಾಸ್‌ಗಿರಿ ನೀಡುವುದರಲ್ಲಿ ಅನುಮಾನವೇ ಇಲ್ಲ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.