ವಿಧೇಯ ನಾಣ್ಯ


Team Udayavani, Oct 17, 2019, 5:36 AM IST

f-1

ಜಾದೂ ಮಾಡೋರಿಗೆ ಚಪ್ಪಾಳೆಯೇ ಜೀವಾಳ. ಜಾಸ್ತಿ ಚಪ್ಪಾಳೆ ಯಾವ ಪ್ರಯೋಗಕ್ಕೆ ಬೀಳುತ್ತದೆ. ಯಾವುದಕ್ಕೆ ಬೀಳುವುದಿಲ್ಲ. ಈ ರೀತಿ ಜಾದೂ ಮಾಡಬೇಕಾದರೆ, ಟಾರ್ಗೆಟ್‌ ಯಾರನ್ನು ಮಾಡಬೇಕು? ಹೇಗೆ ಅವರನ್ನು ತಲುಪಬೇಕು ಇವೆಲ್ಲವೂ ಇವರಿಗೆ ತಿಳಿದಿರುತ್ತದೆ. ಇಂಥ ಚಪ್ಪಾಳೆ ತಂದುಕೊಡುವ ಜಾದೂ ಪ್ರಯೋಗಗಳಲ್ಲಿ ಪ್ರಮುಖವಾದದ್ದು ಈ ನಾಣ್ಯ ಜಾದೂ ಕೂಡ ಒಂದು. ಅದು ಹೇಗೆಂದರೆ, ಪ್ರೇಕ್ಷಕರಿಂದ ಒಂದು ನಾಣ್ಯವನ್ನು ತೆಗೆದುಕೊಳ್ಳಿ. ಅದನ್ನು ಅವರ ಕಣ್ಣೆದುರಲ್ಲೇ ಒಂದು ಗಾಜಿನ ಲೋಟದೊಳಗೆ ಹಾಕಿ. ಈಗ ನಿಮ್ಮ ಕೈಯನ್ನು ಆ ಲೋಟದ ಮೇಲೆ ಆಡಿಸುತ್ತಾ, “ಮೇಲೆ ಬಾ’ ಅಂದರೆ ನಾಣ್ಯ ಮೇಲೆ ಬರುತ್ತದೆ. “ಕೆಳಗೆ ಹೋಗು’ ಅಂದರೆ ಕೆಳಗೆ ಹೋಗುತ್ತದೆ. ನಾಣ್ಯ, ನೀವು ಹೇಳಿದಂತೆ ಕೇಳಿದಾಗ ಪ್ರೇಕ್ಷರಿಂದ ಚಪ್ಪಾಳೆಯೋ ಚಪ್ಪಾಳೆ.

ಈ ನಾಣ್ಯದ ಹಿಂದಿನ ಜಾದೂ ರಹಸ್ಯ ಇಷ್ಟೇ.

ಒಂದು ಉದ್ದವಾದ ತಲೆ ಕೂದಲಿಗೆ (ಹೆಂಗಸರ ಉದ್ದ ತಲೆಗೂದಲನ್ನು ಮೊದಲೇ ವ್ಯವಸ್ಥೆ ಮಾಡಿಟ್ಟುಕೊಳ್ಳಿ) ಎರಡೂ ತುದಿಯಲ್ಲಿ ಜೇನು ಮೇಣವನ್ನು ಸಣ್ಣ ಉಂಡೆಯಾಗಿ ಮಾಡಿ ಅಂಟಿಸಿ. ಅದರ ಒಂದು ತುದಿಯನ್ನು ನಿಮ್ಮ ಅಂಗಿಯ ಒಂದು ಗುಂಡಿಗೆ ಅಂಟಿಸಿಟ್ಟುಕೊಳ್ಳಿ. ಇದೆಲ್ಲವನ್ನು ನೀವು ಮೊದಲೇ ಮಾಡಿ ಸಿದ್ಧರಾಗಿರಬೇಕು. ಪ್ರೇಕ್ಷಕನಿಂದ ನಾಣ್ಯವನ್ನು ತೆಗೆದುಕೊಂಡ ತಕ್ಷಣ ಮೇಣದ ಇನ್ನೊಂದು ತುದಿಯನ್ನು ಅದಕ್ಕೆ ಉಪಾಯವಾಗಿ ಅಂಟಿಸಬೇಕು. ಆನಂತರ ನಾಣ್ಯವನ್ನು ಒಂದು ಗಾಜಿನ ಲೋಟಕ್ಕೆ ಹಾಕಿ. ನೀವು ಲೋಟವನ್ನು ಸ್ವಲ್ಪ ತಗ್ಗಿನಲ್ಲಿ ಹಿಡಿದುಕೊಂಡು, ಬಲಗೈಯ ಬೆರಳಿನಿಂದ ಮಂತ್ರ ಹಾಕುವವರಂತೆ ನಟಿಸುತ್ತಾ ಆ ಕೂದಲನ್ನು ಮೇಲೆ, ಕೆಳಗೆ ಚಲಿಸುವಂತೆ ಮಾಡಿದರೆ ನಾಣ್ಯ ಕೂಡಾ ಲೋಟದಲ್ಲಿ ಮೇಲೆ, ಕೆಳಗೆ ಹೋಗುತ್ತದೆ.

ಕೊನೆಗೆ, ನಾಣ್ಯವನ್ನು ಮತ್ತೆ ವಾಪಸ್‌ ಪ್ರೇಕ್ಷಕರಿಗೆ ಕೊಡಬೇಕು. ಆಗ ಏನು ಮಾಡಬೇಕೆಂದರೆ, ಗ್ಲಾಸ್‌ನಿಂದ ಎತ್ತಿ ಆನಂತರ, ಅದರ ಮೇಲೆ ಹರಡಿರುವ ಮೇಣವನ್ನು ಬೆರಳಿನಿಂದ ಉಪಾಯವಾಗಿ, ಯಾರಿಗೂ ಕಾಣದಂತೆ ಒರಸಿಕೊಡಿ. ಆಗ ನಿಮ್ಮ ಜಾದೂ ಪ್ರಯತ್ನ ಶೇ.ನೂರಕ್ಕೆ ನೂರರಷ್ಟು ಸಕ್ಸಸ್‌.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.