ಸಾಗರದೊಳಗಿನ ತೆಂಗಿನಕಾಯಿ


Team Udayavani, Feb 28, 2019, 12:30 AM IST

4.jpg

ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು “ನೀರಿನೊಳಗಿನ ತೆಂಗಿನಕಾಯಿ’ ಅಂದರೆ “ಕೋಕೊ ಡಿ ಮರ್‌’ ಎಂದು ಕರೆದರು.

ಸಸ್ಯ ಪ್ರಪಂಚದಲ್ಲಿ ಇಷ್ಟು ದೊಡ್ಡ ಬೀಜ ಬೇರೊಂದಿಲ್ಲ. ಸಾಮಾನ್ಯವಾಗಿ ಒಂದು ಬೀಜ ಹದಿನೇಳರಿಂದ ಮೂವತ್ತು ಕಿಲೋ ತನಕ ತೂಗುವುದಾದರೆ ಅಪರೂಪವಾಗಿ ದಾಖಲೆ ಮಾಡಿದ ಒಂದು ಬೀಜ 42 ಕಿಲೋ ತೂಕವಾಗಿದ್ದೂ ಉಂಟು. ಇದು ತೆಂಗಿನ ಮರದ ಜಾತಿಗೆ ಸೇರಿದ “ಕೋಕೊ ಡಿ ಮರ್‌’ ಎಂಬ ಮರದ ಬೀಜ. ಹೊರಭಾಗದಲ್ಲಿ ತೆಂಗಿನಕಾಯಿಯ ಹಾಗೆ ಕಾಣುತ್ತದೆ. ಸಿಪ್ಪೆಯನ್ನು ಸುಲಿದರೆ ಒಳಗೆ ವಿಚಿತ್ರ ಆಕೃತಿಯಲ್ಲಿ ಎರಡಾಗಿ ಜೋಡಿಕೊಂಡ ಅಗಾಧ ಗಾತ್ರದ ಬೀಜವಿದೆ. ಹೆಚ್ಚಾಗಿ ಎರಡಾಗಿ ಸೇರಿದ ಒಂದೇ ಬೀಜ ಒಳಗಿರುವುದಾದರೂ ಕೆಲವೊಮ್ಮೆ ನಾಲ್ಕು ಬೀಜಗಳು ಜೋಡಿಕೊಂಡ ಆಕೃತಿಯೂ ಇರುವುದುಂಟು.

ಇದಿರುವುದು ಎಲ್ಲಿ?
ಸೆಶಲ್ಸ್‌ ದ್ವೀಪ ಸಮುದಾಯದ ಪ್ರಸ್ಲಿನ್‌ ಮತ್ತು ಕ್ಯುರಿಯನ್‌ ದ್ವೀಪಗಳಲ್ಲಿ ಕೋಕೊ ಡಿ ಮರ್‌ ಮರಗಳಿವೆ. ಸಸ್ಯ ಶಾಸ್ತ್ರೀಯವಾಗಿ ಲೊಡೊಸೈ ಮಾಲ್ಡಿವಿಕಾ ಎಂದು ಹೆಸರಿರುವ ಈ ಮರ ಗರಿಷ್ಠ ಮೂವತ್ತು ಮೀಟರ್‌ ಎತ್ತರ ಬೆಳೆಯುತ್ತದೆ. ಅದರ ಗರಿಗಳು ಐದು ಮೀಟರ್‌ ಉದ್ದವಿರುತ್ತವೆ. ಹನ್ನೊಂದನೆಯ ವರ್ಷದಲ್ಲಿ ಮರ ಹೂ ಬಿಡುತ್ತದೆ. 

ಈ ವಿಶಿಷ್ಟ ಬೀಜ ನೆಲದಲ್ಲಿ ಹುಟ್ಟುವುದಿಲ್ಲ. ಕಾಯಿಗಳು ಸಮುದ್ರವನ್ನು ಸೇರಿದಾಗ ಭಾರ ಮತ್ತು ಸಾಂದ್ರತೆಯ ಕಾರಣದಿಂದ ತೇಲದೆ ಮುಳುಗುತ್ತವೆ. ನೀರಿನಾಳದಲ್ಲಿ ಸಿಪ್ಪೆಗಳು ಕೊಳೆತು ಬೀಜವು ಮೊಳಕೆಯೊಡೆಯುತ್ತದೆ. ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು “ನೀರಿನೊಳಗಿನ ತೆಂಗಿನಕಾಯಿ’, ಅಂದರೆ “ಕೋಕೊ ಡಿ ಮರ್‌’ ಎಂದು ಕರೆದರು.

ಅದೃಷ್ಟದ ಮರವೂ ಹೌದು
ಕೋಕೊ ಡಿ ಮರ್‌ ಆಹಾರವಾಗಿ ನಿಷೇಧಿತವಾಗಿದ್ದರೂ ಕಳ್ಳಸಾಗಣೆಯ ಮೂಲಕ ವಿದೇಶಗಳಿಗೆ ಹೋಗಿ ಒಂದೊಂದು ಬೀಜವೂ ಲಕ್ಷಾಂತರ ಹಣ ಗಳಿಸುತ್ತದೆ. ಇದನ್ನು ಆಭರಣದಂತೆ ಕುತ್ತಿಗೆಗೆ ಕಟ್ಟಿಕೊಂಡರೆ ಅದೃಷ್ಟ ಖುಲಾಯಿಸುತ್ತದೆಂಬ ನಂಬಿಕೆಯಿದೆ. ಧನಿಕರು ಸಿರಿತನ ಹೆಚ್ಚಲೆಂದು ಹಣದ ತಿಜೋರಿಗಳಲ್ಲಿಡುತ್ತಾರೆ. ಅಂಥವರಲ್ಲಿ ರೋಮನ್‌ ಚಕ್ರವರ್ತಿ ಎರಡನೆಯ ರುಡಾಲ್ಫ್ ಕೂಡ ಒಬ್ಬ. ಯುನೆಸ್ಕೋ ರಕ್ಷಿಸಲೇಬೇಕಾದ ವಿಶ್ವ ಪರಂಪರೆಯ ಸಸ್ಯವೆಂದು ಕೋಕೊ ಡಿ ಮರ್‌ ಮರವನ್ನು ಗುರುತಿಸಿದ ಕಾರಣ ಅದರ ಬೀಜಗಳನ್ನು ಬೇರೆ ದೇಶಗಳಿಗೆ ಒಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಅಪರಾಧವೆಸಗುವವರಿಗೆ ಐದು ಸಾವಿರ ಡಾಲರ್‌ ದಂಡ ಮತ್ತು ಐದು ವರ್ಷ ಶಿಕ್ಷೆ ವಿಧಿಸಲಾಗುತ್ತಿದೆ. ಆದರೂ ಈ ಅದ್ಭುತ ಬೀಜದ ವ್ಯಾಮೋಹ ಜನರನ್ನು ಬಿಟ್ಟಿಲ್ಲ.

ಗಂಡು ಹೆಣ್ಣು ಸಸ್ಯಗಳು
ಇದರಲ್ಲಿ ಹೆಣ್ಣು ಮತ್ತು ಗಂಡು ಎಂಬ ಎರಡು ಜಾತಿಗಳಿವೆ. ಗಂಡು ಮರ ಹೂ ಮಾತ್ರ ಬಿಡುತ್ತದೆ. ಹೆಣ್ಣು ಮರದಲ್ಲಿ ಕಾಯಿಗಳಾಗುತ್ತವೆ. ಮಳೆ, ಚಂಡಮಾರುತ, ಸಿಡಿಲು ಮಿಂಚುಗಳ ಮೂಲಕ ಗಂಡುಹೂವಿನ ಪರಾಗಕಣಗಳು ಹೆಣ್ಣು ಹೂವಿನಲ್ಲಿ ಸೇರಿ ಕಾಯಿಗಳಾಗುವಂತೆ ನಿಸರ್ಗ ನಿಯಮವನ್ನು ರೂಪಿಸಿದೆ. ಹೂ ಬಿಟ್ಟು ಮೂರು ವರ್ಷಗಳ ತನಕ ಕಾಯಿ ಬೆಳೆಯಲು ಕಾಯಬೇಕು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.