ಓಟದಲ್ಲಿ ಕುದುರೆಯನ್ನೂ ಹಿಂದಿಕ್ಕುವ ಜೀವಿ ಯಾವುದು?


Team Udayavani, Jun 7, 2018, 6:00 AM IST

kann-1.jpg

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!

ಭೂಮಿ ಮೇಲೆ ನಡೆದಾಡುವ ಪ್ರಾಣಗಳಲ್ಲಿ ಕುದುರೆ ತುಂಬಾ ವೇಗಶಾಲಿ ಎಂದು ಹೆಸರು ಮಾಡಿದೆ. ವೇಗದ ವಿಚಾರ ಬಂದಾಗಲೆಲ್ಲಾ ಕುದುರೆಯನ್ನೇ ಉದಾಹರಿಸುತ್ತಾರೆ. ಆದರೆ ಇಲ್ಲೊಂದು ಜೀವಿ ಕುದುರೆಯನ್ನೂ ಹಿಂದೆ ಹಾಕಿ ಮುಂದೋಡಬಲ್ಲುದು. ಈ ಜೀವಿ ಪ್ರಾಣಿ ಅಲ್ಲ. ಹಾಗೆಂದ ಮಾತ್ರಕ್ಕೆ ಯಂತ್ರ ಅಂತ ಅಂದುಕೊಳ್ಳಬೇಕಿಲ್ಲ. ನಮ್ಮ ಮಾತಿನ ಅರ್ಥ ಪ್ರಾಣಿ ಅಲ್ಲ, ಪಕ್ಷಿ ಎಂದು. ಪಕ್ಷಿ ರೆಕ್ಕೆಯನ್ನು ಬಳಸಿ ಹಾರಿ ಗೆಲ್ಲುತ್ತದೆ  ಅಂತಲೂ ತಿಳಿಯಬೇಡಿ. ಏಕೆಂದರೆ ಈ ಪಕ್ಷಿ ಹಾರುವುದೇ ಇಲ್ಲ. ಆಯವುದಪ್ಪಾ ಆ ಪಕ್ಷಿ ಅಂತ ಯೋಚಿಸುತ್ತಿದ್ದೀರಾ? ಆಸ್ಟ್ರಿಜ್‌. ಆಸ್ಟ್ರಿಚ್‌ ಮತ್ತು ಕುದುರೆ ನಡುವೆ ಸ್ಪರ್ಧೆ ಏರ್ಪಡಿಸಿದರೆ ಆಸ್ಟ್ರಿಚ್‌ ಖಂಡಿತ ಜಯಶಾಲಿಯಾಗುವುದು. ಸೃಷ್ಟಿ ಒಂದನ್ನು ಕೊಟ್ಟು ಇನ್ನೊಂದನ್ನು ಪಡೆಯುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಆಸ್ಟ್ರಿಚ್‌ ವಿಷಯದಲ್ಲಿ ರೆಕ್ಕೆ ಕಿತ್ತುಕೊಂಡರೂ ವೇಗದ ಓಟವನ್ನು ದಯಪಾಲಿಸಿವೆ. ಅವುಗಳ ಕಾಲಿನ ಗಂಟಿನಲ್ಲಿ ಎಲಾಸ್ಟಿಕ್‌ ಗುಣದ ಸ್ನಾಯುಗಳಿರುವುದರಿಂದ ಆಸ್ಟ್ರಿಚ್‌ಗಳು ಅತ್ಯಂತ ವೇಗವಾಗಿ ಓಡಬಲ್ಲವು.

ಇದರ ಸದ್ದು ಕೇಳಿ ಆನೆಗಳು ಓಡತೊಡಗುತ್ತವೆ!
ಆನೆಗಳು ತಮ್ಮ ಗಾತ್ರದಿಂದ ಹೆದರಿಕೆಯನ್ನುಂಟು ಮಾಡುತ್ತವೆ. ಅವುಗಳು ಸಾಮಾನ್ಯವಾಗಿ ಯಾರ ತಂಟೆಗೆ ಹೋಗದೆ ಇದ್ದರೂ ಅವುಗಳ ಸೂಕ್ಷ್ಮ ಸ್ವಭಾವ ಯಾವ ಸಮಯದಲ್ಲಿ ಹೇಗೆ ತಿರುಗಿಕೊಳ್ಳುತ್ತದೆ ಎಂದು ಹೇಲುವುದು ಕಷ್ಟ. ಇವೆಲ್ಲದರಿಂದಾಗಿ ಕೆಲವರು ಅವುಗಳ ಸನಿಹ ಹೋಗಲು ಹಿಂಜರಿಯುತ್ತಾರೆ.

ಆದರೆ ದೈತ್ಯ ಆನೆಯನ್ನೇ ಹೆದರಿಸುವ ಜೀವಿಯೂ ಇದೆ ಎಂದರೆ ನಂಬುತ್ತೀರಾ? ಮನುಷ್ಯ ಅಂತ ಮಾತ್ರ ಹೇಳದಿರಿ. ಭೂಮಿ ಮೇಲಿನ ಎಲ್ಲಾ ಚರಾಚರ ಜೀವಿಗಳೂ ಮನುಷ್ಯನನ್ನು ಹೆದರಲೇಬೇಕು ಎನ್ನುವುದೇನೋ ನಿಜ. ಆದರೆ ಆನೆ ಈ ಜೀವಿಯನ್ನು ನೋಡುವುದಿರಲಿ, ಸದ್ದು ಕೇಳಿದ ತಕ್ಷಣ ಓಟ ಕೀಳುತ್ತದೆ. ಮತ್ಯಾವುದೂ ಅಲ್ಲ, ಜೀನು ನೊಣ. ಜೇನು ನೊಣಗಳ ಹಿಂಡಿನ ಸದ್ದು ಕೇಳುತ್ತಲೇ ಆನೆಗಳು ದಿಕ್ಕಾಪಾಲಾಗಿ ಓಡುತ್ತವೆ.  ಹೀಗಾಗಿ ಆನೆಗಳ ಕಾಟ ಇರೋ ಪ್ರದೇಶಗಳಲ್ಲಿ ಅವುಗಳನ್ನು ಹಿಮ್ಮೆಟ್ಟಿಸಲು ಜೇನುನೊಣಗಳನ್ನು ಬಳಸಿಕೊಳ್ಳಬಹುದೆಂದು ಪರಿಸರ ವಿ5ಆನಿಗಳು ಉಪಾಯವನ್ನೂ ಮುಂದಿಟ್ಟಿದ್ದಾರೆ. 

ಈ ಪ್ರಾಣಿಯ ಸದ್ದು ಕೇಳಿದ್ದೀರಾ?
ಪ್ರಾಣಿಗಳು ಪಕ್ಷಿಗಳು ತಮ್ಮದೇ ಆದ ಧ್ವನಿಯನ್ನು ಹೊರಡಿಸುತ್ತವೆ. ಅದರ ಮುಖಾಂತರವೇ ಅವು ತಮ್ಮ ಸಹವರ್ತಿಗಳ ಜೊತೆ ಸಂವಹನವನ್ನೂ ನಡೆಸುತ್ತವೆ. ನಾವು ಝೂನಲ್ಲಿ, ಕಾಡಿನಲ್ಲಿ ಅಥವಾ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರಾಣಿ ಪಕ್ಷಿಗಳ ಸದ್ದನ್ನು ಕೇಳಿಯೇ ಇರುತ್ತೇವೆ. ನಮ್ಮ ಪರಿಸರದಲ್ಲಿ ವಾಸಿಸದ ಪ್ರಾಣಿಗಳ ಸದ್ದನ್ನು ಟಿ.ವಿ. ಕಾರ್ಯಕ್ರಮಗಳ ಮೂಲಕ ಕೇಳಿರುತ್ತೇವೆ.

ಅಷ್ಟೇ ಏಕೆ ಸಮುದ್ರದಡಿ ತಿಮಿಂಗಿಲಗಲು ಹೊರಡಿಸುವ ತರಂಗಗಳ ಸದ್ದನ್ನೂ ಕೇಳಿರುತ್ತೀರಿ. ಆದರೆ ಸದ್ದನ್ನೇ ಕೇಳಿರದ ಪ್ರಾಣಿಯ ಹೆಸರೊಂದನ್ನು ಇಲ್ಲಿ ಹೇಳುತ್ತಿದ್ದೇವೆ. ನೀವೆಂದಾದರೂ ಜಿರಾಫೆಯ ದನಿಯನ್ನು ಕೇಳಿದ್ದೀರಾ? ಸಾಧ್ಯವೇ ಇಲ್ಲ. ಅಷ್ಟು ಖಚಿತವಾಗಿ ಏಕೆ ಹೇಳಬಲ್ಲೆವೆಂದರೆ ಜಿರಾಫೆಗೆ ಧ್ವನಿಪೆಟ್ಟಿಗೆ ಶಬ್ದ ಹೊರಡಿಸಲು ಸಮರ್ಥವಾಗಿಲ್ಲ ಎಂದು ವಿಜ್ಞಾನಿಗಳು ಕಂಡು ಹಿಡಿದ್ದಾರೆ. ಇನ್ನೊಂದು ವಾದದ ಪ್ರಕಾರ ಜಿರಾಫೆಗಳು ನಿರ್ದಿಷ್ಟ ತರಂಗಗಳ ಶಬ್ದವನ್ನು ಹೊರಡಿಸುತ್ತವೆ. ಅಂದರೆ ಅದು ಯಾರ ಕಿವಿಗೂ ಬೀಳುವುದಿಲ್ಲ.

– ಹರ್ಷ

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.