ಐನ್‌ಸ್ಟಿನ್‌ ಕೈಲಿದ್ದ ಕಾಗದಲ್ಲಿ ಏನಿತ್ತು?


Team Udayavani, Oct 10, 2019, 5:52 AM IST

ainestaine

ವಿಜ್ಞಾನಿಗಳು, ಕ್ರಿಯಾಶೀಲ ವ್ಯಕ್ತಿಗಳು ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ ಎಂಬ ಮಾತಿದೆ. ಐನ್‌ಸ್ಟಿನ್‌ ಅದಕ್ಕೆ ಹೊರತಾಗಿರಲಿಲ್ಲ.

ಆದರೆ ಒಂದು ದಿನ ಆತ ವಿಚಿತ್ರವಾಗಿ ವರ್ತಿಸುತ್ತಿದ್ದ. ಅವನ ಪತ್ನಿ ಎಲ್ಸಾಗೆ ಇದರಿಂದ ಅಚ್ಚರಿಯಾಗುವಷ್ಟರ ಮಟ್ಟಿಗೆ ವಿಜ್ಞಾನಿಯ ಸ್ವಭಾವ ಇತ್ತು. ದಿನವಿಡೀ ಅದೇನೋ ಚಡಪಡಿಕೆಯಿಂದ ತಳಮಳಿಸುತ್ತಿದ್ದ ಐನ್‌ಸ್ಟಿನ್‌ರನ್ನು ಕಂಡು ಪತ್ನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಏನು ವಿಷಯ ಎಂದು ಕೇಳಿದರೂ ಪತಿರಾಯ ಏನನ್ನೂ ಹೇಳುತ್ತಿಲ್ಲ. ಆರೋಗ್ಯದಲ್ಲಿ ಏನಾದರೂ ಏರುಪೇರಾಯಿತೇ ಎಂದು ಕೇಳಿದರೆ ಇಲ್ಲ ಎಂಬ ಉತ್ತರ ಬಂದಿತ್ತು. ಮತ್ತೇನು ತೊಂದರೆ ಎಂದು ಎಲ್ಸಾ ಯೋಚಿಸಿ ಯೋಚಿಸಿ ತಲೆ ಕೆಟ್ಟು ಹೋಗಿತ್ತು. ತಿಂಡಿ ತಿಂದು ಅತ್ತಿತ್ತ ಓಡಾಡಿದ ಐನ್‌ಸ್ಟಿನ್‌ ಪಿಯಾನೋ ಬಳಿ ಕುಳಿತು ಸಂಗೀತ ನುಡಿಸಲು ಶುರುಮಾಡಿದ. ಅರ್ಧ ಗಂಟೆಯ ನಂತರ ಪುಸ್ತಕ ಹಿಡಿದು ತನ್ನ ಕೋಣೆಗೆ ಹೋದರು. ಎರಡು ವಾರ ಅದೇ ಸ್ಥಿತಿಯಲ್ಲಿದ್ದರು ಐನ್‌ಸ್ಟಿನ್‌.

ಎಲ್ಸಾಳಿಗೆ ಹುಚ್ಚು ಹಿಡಿಯುವುದೊಂದು ಬಾಕಿ ಏನಾಗಿದೆಯಪ್ಪ ಎಂದು. ಈ ಗೊಂದಲಗಳಿಗೆಲ್ಲಾ ಕೊನೆ ಹಾಡುವಂತೆ ಎರಡು ವಾರಗಳ ನಂತರ ಕೋಣೆಯಿಂದ ಹೊರಬಂದ ಐನ್‌ಸ್ಟಿನ್‌ ಕಾಗದಗಳನ್ನು ಕೈಲಿ ಹಿಡಿದಿದ್ದರು.

ಅವರ ಮನಸ್ಸು ನಿರಾಳವಾಗಿತ್ತು. ಮುಖದಲ್ಲಿ ಪ್ರಶಾಂತತೆಯಿತ್ತು. ಕೈಲಿ ಕಾಗದ ಕಂಡು ಏನದು ಎಂದು ಎಲ್ಸಾ ಕೇಳಿದಾಗ ಐನ್‌ಸ್ಟಿನ್‌ ಹೇಳಿದ್ದು ಒಂದೇ ಮಾತು “ಥಿಯರಿ ಆಫ್ ರಿಲೇಟಿವಿಟಿ’. ಅಷ್ಟು ಸಾಕಿತ್ತು, ಆಕೆಗೆ ಎಲ್ಲವೂ ಅರ್ಥವಾಗಿತ್ತು. ಜಗದ್ವಿಖ್ಯಾತ ಆವಿಷ್ಕಾರವಾದ “ಥಿಯರಿ ಆಫ್ ರಿಲೇಟಿವಿಟಿ’ ಹುಟ್ಟಿದ್ದರ ಹಿಂದಿನ ಕಥೆಯಿದು!

– ಹವನ

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.