ಭೂಮಿಗೆ ಜ್ವರ ಬಂದಾಗ!

ಇದು ಹವಾಮಾನ "ವೈಪರೀತ್ಯ' ವರದಿ

Team Udayavani, Aug 8, 2019, 5:30 AM IST

p-3

ತಾಪಮಾನ ಏರಿಕೆಯಿಂದಾಗಿ ದೂರದಲ್ಲೆಲ್ಲೋ ಹಿಮ ಕರಗಿದರೆ ನಾವೇಕೆ ಚಿಂತಿಸಬೇಕು ಎಂದು ಮಾತ್ರ ಹೇಳದಿರಿ. ಏಕೆಂದರೆ ಒಂದು ವೇಳೆ ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿನ ಮಂಜುಗಡ್ಡೆ ಪೂರ್ತಿ ಕರಗಿದರೆ ಭೂಮಿಯು “ವಾಸಯೋಗ್ಯ ಗ್ರಹ’ ಎಂಬ ಪಟ್ಟವನ್ನು ಕಳೆದುಕೊಳ್ಳಬಹುದು!

ನಮ್ಮ ಸುತ್ತಮುತ್ತಲ ವಾತಾವರಣ ವಾರದಿಂದ ವಾರಕ್ಕೆ, ದಿನದಿಂದ ದಿನಕ್ಕೆ ಬದಲಾಗುವುದನ್ನು ಯಾವತ್ತಾದರೂ ಗಮನಿಸಿದ್ದೀರಾ? ಮಲೆಗಾಲ, ಚಳಿಗಾಲ ಮತ್ತು ಬೇಸಗೆ ಕಾಲಗಳು ನಿಗದಿತ ಅವಧಿಗಿಂತ ತಡವಾಗಿ ಶುರುವಾಗುವುದು ಅಥವಾ ಬೇಗನೆ ಮುಗಿಯುವುನ್ನು ಗಮನಿಸಿದ್ದೀರಾ? ಈ ಪರಿ ಹವಾಮಾನ ಬದಲಾವಣೆ ಆತಂಕಕಾರಿಯಾದುದು.

ಭೂಮಿಗೊಂದು ರಕ್ಷಾಕವಚ
ನಮ್ಮ ಭೂಮಂಡಲವು ಮೇಲಕ್ಕೆ ಹೋಗುತ್ತಿದ್ದಂತೆ ಅನೇಕ ಬಗೆಯ ಅನಿಲಗಳಿಂದ ಸುತ್ತುವರಿಯಲ್ಪಟ್ಟಿದೆ. ಅವುಗಳಿಂದಲೇ ವಿವಿಧ ಬಗೆಯ ವಲಯಗಳೆಂದು ವಿಂಗಡಿಸಲ್ಪಟ್ಟಿವೆ. ಪ್ರತಿಯೊಂದು ವಲಯವೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು ವಿವಿಧ ಬಗೆಯ ಅನಿಲಗಳನ್ನು ಹೊಂದಿದೆ. ಭೂಮಿ ಮೇಲೆ ಲಕ್ಷ ಕೋಟಿ ಜೀವಿಗಳು ಬದುಕಿವೆ ಎಂದರೆ ಅದಕ್ಕೆ ಈ ವಲಯಗಳ ಶ್ರೀರಕ್ಷೆಯೇ ಕಾರಣ. ಇವು ಅಂತರಿಕ್ಷದ ಅಪಾಯಕಾರಿ ಕಿರಣ, ಕಾಯಗಳಿಂದ ನಮಗೆ ರಕ್ಷಣೆ ಒದಗಿಸುತ್ತಿವೆ. ಅವುಗಳಿಲ್ಲದೇ ಇರುತ್ತಿದ್ದರೆ ನಮ್ಮ ಭೂಮಿ ಹುಲ್ಲು ಕಡ್ಡಿಯೂ ಬೆಳೆಯದಂತಾಗಿ, ಮಂಗಳ ಗ್ರಹದಂತೆ ಮರಗಟ್ಟಿ ಹೋಗುತ್ತಿತ್ತು. ಈ ಶ್ರೀರಕ್ಷೆ ಈಗ ನಲುಗುತ್ತಿದೆ.

ಇದಕ್ಕೆ ಕಾರಣಗಳೇನು?
ಕಳೆದ ನೂರು ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯಿಂದಾಗಿ, ಅಭಿವೃದ್ಧಿಯೆಡೆಗೆ ಮುನ್ನುಗ್ಗುವ ಮನುಷ್ಯನ ಹಪಾಹಪಿಯಿಂದಾಗಿ ಪ್ರತಿಒಂದಕ್ಕೂ ಯಂತ್ರಗಳ ಮೇಲೆ ಅವಲಂಬಿತನಾಗುವ ಸ್ಥಿತಿಗೆ ಮನುಷ್ಯ ಬಂದಿದ್ದಾನೆ. ಎಲ್ಲಾ ಯಂತ್ರಗಳ ಚಾಲನೆಗೆ ಇಂಧನವಾಗಿ ಕಲ್ಲಿದ್ದಲು, ಪೆಟ್ರೋಲು, ಡೀಸೆಲ್ಲು, ಮತ್ತಿನ್ನೊಂದೋ ಅಗತ್ಯವಾಗಿ ಬೇಕು. ಅವುಗಳಿಂದಾಗಿ ಇಂಗಾಲ ಆಮ್ಲ ಮತ್ತಿತರ ವಿಷಯುಕ್ತ ಅನಿಲಗಳು ವಾತಾವರಣ ಸೇರುತ್ತಿವೆ. ಭೂಮಿಯ ತಾಪಮಾನ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ.
ವಿಜ್ಞಾನಿಗಳ ಪ್ರಕಾರ ಇಂದು ಭೂಮಿಯ ತಾಪಮಾನ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹತ್ತುಪಟ್ಟು ವೇಗವಾಗಿ ಏರುತ್ತಿದೆ. ಇದು ಮನುಷ್ಯನ ಸ್ವಾರ್ಥದಿಂದ ಹಾಗು ಅವನು ಪ್ರಕೃತಿಗೆ ವಿರುದ್ಧವಾಗಿ ನಡೆಸುತ್ತಿರುವ ಬದುಕಿನಿಂದ ಎಂಬ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.

ದುಷ್ಪರಿಣಾಮಗಳು
ಹಿಮ ಪರ್ವತಗಳು ತಾಪದಿಂದ ಕರಗಿ ನದಿಗಳಲ್ಲಿ, ಸಮುದ್ರಗಳ ನೀರಿನ ಮಟ್ಟ ಹೆಚ್ಚಾಗಬಹುದು. ಸಮುದ್ರ ತಟದಲ್ಲಿನ ನಗರಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಬಹುದು. ಕಾಡಿನಲ್ಲಿದ್ದ ಪ್ರಾಣಿಗಳು ಮನುಷ್ಯ ವಾಸಿಸುತ್ತಿಲ್ಲಿಗೆ ಲಗ್ಗೆ ಇಡಬಹುದು. ಅಕಾಲಿಕ ಮಳೆಯಿಂದ ತೀವ್ರ ಪ್ರವಾಹ ಉಂಟಾಗಬಹುದು. ಇನ್ನೊಂದು ಕಡೆ ತೀವ್ರ ಬರ ಕಾಡಬಹುದು. ಇವೆಲ್ಲವೂ ಕೃಷಿಗೆ ಮಾರಕವೇ. ಬೆಳೆ ಬೆಳೆಯಲಾಗದೆ ಆಹಾರ ಕೊರತೆ ಉಂಟಾಗಬಹುದು. ಭೂಕಂಪ ಆಗಬಹುದು. ಸುನಾಮಿ ಉಂಟಾಗಬಹುದು. ಇವೆಲ್ಲಾ ಪ್ರಾಕೃತಿಕ ವಿಕೋಪಗಳಾದರೆ ಭೂಮಿ ಮೇಲೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳಬಹುದು. ಒಟ್ಟಿನಲ್ಲಿ ಪ್ರಳಯ ಎಂದರೆ ಇದೇ…

ಪರಿಹಾರ ಮಾರ್ಗಗಳು
ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕಿಂಚಿತ್ತು ಬದಲಾವಣೆ ಮಾಡಿಕೊಂಡರೆ, ಪರಿಸರ ಕಾಳಜಿಯನ್ನು ಬೆಳೆಸಿಕೊಂಡರೆ ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ.
-ಬಸ್ಸು, ರೈಲು ಮುಂತಾದ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಳಸುವುದು
-ಹತ್ತಿರದ ಜಾಗಗಳಿಗೆ ನಡೆದೇ ಹೋಗುವುದು ಅಥವಾ ಸೈಕಲ್‌ನ ಬಳಕೆ
– ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು
– ಮನೆಗಳಲ್ಲಿ ವಿದ್ಯುನ್ಮಾನ ಉಪಕರಣಗಳ ದುಂದು ಬಳಕೆ ತಡೆಯುವುದು
– ನೀರನ್ನು ಪೋಲು ಮಾಡದಿರುವುದು
– ಪದೇಪದೆ ರೆಫ್ರಿಜರೇಟರ್‌ನ ಬಾಗಿಲು ತೆಗೆಯದಿರುವುದು
– ಎಲ್ಲೆಂದರಲ್ಲಿ ಕಸ ಎಸೆಯದಿರುವುದು ಇತ್ಯಾದಿ…

– ರಜನಿ ಭಟ್‌

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.