ಬಂಗಾರದ ಕರು ಎಲ್ಲಮ್ಮಾ?


Team Udayavani, Jun 20, 2019, 5:00 AM IST

d-8

ಇಂಚರಾ, ಅಜ್ಜಿಮನೆಗೆ ಹೋಗುತ್ತಿದ್ದುದೇ ಅಪರೂಪವಾಗಿತ್ತು. ಅವಳು ನಗರ ಬದುಕಿಗೆ ಹೊಂದಿಕೊಂಡಿದ್ದರಿಂದ ಅಜ್ಜಿಮನೆಗೆ ಹೋಗುವ ಸಂದರ್ಭ ಬಂದಾಗಲೆಲ್ಲ ಹಿಂದೇಟು ಹಾಕುತ್ತಿದ್ದಳು. ಆದರೂ ಅಜ್ಜಿ ಮತ್ತು ಸೋದರಮಾವನಿಗೆ ಚಿನಕುರಳಿ ಇಂಚರಳನ್ನು ಕಂಡರೆ ತುಂಬಾ ಪ್ರೀತಿ. ಹೀಗಾಗಿ ಅವರಿಬ್ಬರೇ ಆಗಾಗ ಉಡುಗೊರೆಗಳೊಂದಿಗೆ ನಗರಕ್ಕೆ ಬಂದು ಇಂಚರಳನ್ನು ನೋಡಿಕೊಂಡು ಹೋಗುತ್ತಿದ್ದರು.

ಪುಟ್ಟ ಹುಡುಗಿ ಇಂಚರ, ಅಪ್ಪ ಅಮ್ಮನ ಜೊತೆ ನಗರಪ್ರದೇಶದಲ್ಲಿ ವಾಸವಿದ್ದಳು. ಪಾಲಕರಾದ ವಿಜಯ್‌- ಪಲ್ಲವಿ ಹಳ್ಳಿಯಲ್ಲಿ ಹುಟ್ಟಿ ಬೆಳೆದವರಾಗಿದ್ದರೂ ಇಂಚರಾಗೆ ಹಳ್ಳಿ ಬದುಕಿನ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಅವಳು ಅಜ್ಜಿಮನೆಗೆ ಹೋಗುತ್ತಿದ್ದುದೇ ಅಪರೂಪವಾಗಿತ್ತು. ಇಂಚರಾ ನಗರ ಬದುಕಿಗೆ ಹೊಂದಿಕೊಂಡಿದ್ದರಿಂದ ಅಜ್ಜಿಮನೆಗೆ ಹೋಗುವ ಸಂದರ್ಭ ಬಂದಾಗಲೆಲ್ಲ ಹಿಂದೇಟು ಹಾಕುತ್ತಿದ್ದಳು. ಆದರೂ ಅಜ್ಜಿ ಮತ್ತು ಸೋದರಮಾವನಿಗೆ ಇಂಚರಳನ್ನು ಕಂಡರೆ ತುಂಬಾ ಪ್ರೀತಿ. ಅವರಿಬ್ಬರೂ ಆಗಾಗ ಉಡುಗೊರೆಗಳೊಂದಿಗೆ ನಗರಕ್ಕೇ ಬಂದು ಇಂಚರಳನ್ನು ನೋಡಿಹೋಗುತ್ತಿದ್ದರು.

ಹೀಗಿರಲು ಹಲವಾರು ವರ್ಷಗಳಿಂದ ಅವಳು ತನ್ನ ಅಜ್ಜಿ ಮನೆಗೆ ಹೋಗಿರಲೇ ಇರಲಿಲ್ಲ. ಅದು ಅವಳ ತಾಯಿ ಪಲ್ಲವಿಯ ಗಮನಕ್ಕೆ ಬಂದು ಬೇಸರವಾಯಿತು. ಅಕೆಯ ಗೆಳತಿಯರ ಮಕ್ಕಳೆಲ್ಲಾ ವರ್ಷದಲ್ಲಿ ಒಂದೆರಡು ಬಾರಿ ಬಾರಿಯಾದರೂ ಅಜ್ಜಿ ಮನೆಗೆ ಹೋಗುತ್ತಿದ್ದರು. ತನ್ನ ಮಗಳನ್ನು ಚಿಕ್ಕ ವಯಸ್ಸಿನಲ್ಲೇ ಅಜ್ಜಿಮನೆಯನ್ನು ಪರಿಚಯಿಸದಿದ್ದರೆ ಮುಂದೆ ದೊಡ್ಡವಳಾದಾಗ ಖಂಡಿತವಾಗಲೂ ಅವಳು ಅತ್ತ ತೆರಳಲಾರಳು. ಒಂದೊಳ್ಳೆ ಅನುಭವದಿಂದ ಅವಳು ವಂಚಿತಳಾಗುತ್ತಿದ್ದಾಳಲ್ಲ ಎಂದು ಮನದಲ್ಲೇ ಪಲ್ಲವಿ ಕೊರಗುತ್ತಿದ್ದಳು. ಅದಕ್ಕೊಂದು ಉಪಾಯ ಹೂಡಿದಳು.

ಒಂದು ದಿನ ಪಲ್ಲವಿ “ಇಂಚರಾ, ನಾವು ಯಾವಾಗಲೂ ಬಾವಿಯ ಕಪ್ಪೆಯಂತೆ ಇರಕೂಡದು. ಪ್ರಪಂಚಜ್ಞಾನ ನಮಗೆ ಸತತವಾಗಿ ದೊರೆಯಬೇಕಾದರೆ ನಾವು ಒಂದೇ ಕಡೆ ಸದಾ ಇರದೆ ಎಲ್ಲಾ ರೀತಿಯ ಸ್ಥಳಗಳನ್ನು ನೋಡಬೇಕು. ಆಗ ನಮ್ಮ ಮನಸ್ಸಿಗೆ ಚೆನ್ನಾಗಿಯೇ ಮುದ ಸಿಗುತ್ತದೆ. ಆದಕಾರಣ ನಾವು ನಾಳೆಯೇ ಅಜ್ಜಿ ಮನೆಗೆ ಹೊರಡೋಣ. ನಿನಗೆ ಗೊತ್ತಾ? ಅಲ್ಲಿ ಬಂಗಾರದ ಕರು ಇದೆ.’ ಎಂದು ಹೇಳಿದಳು.

“ಬಂಗಾರದ ಕರು’ ಎಂಬ ಪದ ಕೇಳುತ್ತಲೇ ಇಂಚರಾಳ ಕಣ್ಣುಗಳು ಅರಳಿದವು. ಮರುದಿನವೇ ಅವಳು ತಾಯಿ ತಂದೆ ಜೊತೆ ಅಜ್ಜಿಮನೆಗೆ ಹೊರಟಳು. ಅಜ್ಜಿ ಮನೆಗೆ ತಲುಪಿದಾಕ್ಷಣ ಅವಳ ಮಾವ ಇಂಚರಾಳನ್ನು ಗದ್ದೆ, ತೋಟ ಮುಂತಾದ ಕಡೆಗಳಿಗೆಲ್ಲಾ ಕರೆದೊಯ್ದು ಪ್ರಕೃತಿ ರಮಣೀಯ ದೃಶ್ಯವನ್ನು ತೋರಿಸಿದರು. ಅದನ್ನೆಲ್ಲಾ ನೋಡಿ ಅವಳ ಮನಸ್ಸು ಪುಳಕಿತಗೊಂಡಿತು. ಅಲ್ಲಿದ್ದ ಕೊಟ್ಟಿಗೆಯಲ್ಲಿ ಜಾನುವಾರುಗಳೆಲ್ಲಾ ಇದ್ದವು. ಅವಳ ಕಣ್ಣುಗಳು ಬಂಗಾರದ ಕರುವನ್ನೇ ಹುಡುಕುತ್ತಿತ್ತು. ಅಮ್ಮನನ್ನು ಕೇಳಿದಾಗ ಆಕೆ “ಅದು ಸ್ವಲ್ಪ ದೂರದಲ್ಲಿದೆ. ಸ್ವಲ್ಪ ನಾಳೆ- ನಾಳಿದ್ದು ಅಲ್ಲಿಗೆ ಹೋಗೋಣ. ಈಗ ಇಲ್ಲಿನ ಸೊಬಗನ್ನು ಆನಂದಿಸು’ ಎಂದು ಸುಮ್ಮನಾಗಿಸಿದರು.

ಮುಂದಿನ ಮೂರು ದಿನಗಳ ಕಾಲ ಸಮಯ ಹೇಗೆ ಕಳೆಯಿತು ಅಂತಲೇ ಇಂಚರಾಳಿಗೆ ಗೊತ್ತಾಗಲಿಲ್ಲ. ಅಜ್ಜಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದು, ಜಾನುವಾರುಗಳಿಗೆ ಹುಲ್ಲು ತಂದುಕೊಡುವುದು, ಮಾವನಿಗೆ ತೋಟದ ಕೆಲಸದಲ್ಲಿ ಸಹಕರಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿದಳು. ಈ ನಡುವೆ ಅವಳಿಗೆ ಬಂಗಾರದ ಕರುವಿನ ನೆನಪೇ ಆಗಲಿಲ್ಲ. ಅಜ್ಜಿ ಮನೆಯಿಂದ ಹೊರಟು ಬಸ್ಸಿನಲ್ಲಿ ಕುಳಿತಾಗಲೇ ಅವಳಿಗೆ ತಾನು ಬಂಗಾರದ ಕರುವನ್ನು ನೋಡಲೇ ಇಲ್ಲವಲ್ಲ ಎಂದು ನೆನಪಾಗಿದ್ದು.

ಇಂಚರಾ “ಬಂಗಾರದ ಕರು ಎಲ್ಲಮ್ಮಾ?’ ಎಂದು ಕೇಳಿದಾಗ ಅಮ್ಮ ಅಂದರು “ಇಂಚರಾ, ನೀನು ಹಳ್ಳಿಯ ಸೊಬಗನ್ನು ನೋಡಲೆಂದು ನಾನು ಹಾಗೆಂದು ಸುಳ್ಳು ಹೇಳಿದ್ದೆ. ಬಂಗಾರದ ಕರು ನಿಜವಾಗಲೂ ಇಲ್ಲ’. ಅಮ್ಮನ ಮಾತು ಕೇಳಿ ಇಂಚರಾಳಿಗೆ ಬೇಸರವಾದರೂ ಅದರ ಹಿಂದಿನ ಉದ್ದೇಶ ಅರ್ಥವಾಯಿತು. ಇಂಚರಾ ನಗುತ್ತಲೇ “ಅಮ್ಮ, ಮತ್ತೆ ಯಾವಾಗ ನಾವು ಅಜ್ಜಿ ಮನೆಗೆ ಹೋಗುವುದು?’ ಎಂದು ಕೇಳಿದಳು. ಅಮ್ಮ ಪ್ರೀತಿಯಿಂದ ಇಂಚರಾಳ ತಲೆ ನೇವರಿಸಿದಳು.

– ಮೇಘನಾ

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.